* * * * * * HASSAN DISTRICT POLICE

Thursday, April 15, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:14-04-2021

 

 ಪತ್ರಿಕಾ ಪ್ರಕಟಣೆ         ದಿನಾಂಕ:  14-04-2021

 

ದಿನಾಂಕ 14-04-2021 ರಂದು ಬೆಳಗ್ಗೆ 09-30 ಗಂಟೆ ಸಮಯದಲ್ಲಿ ಹಾಸನದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್, ಅಂಬೇಡ್ಕರ್ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ  ಶ್ರೀನಿವಾಸ್ಗೌಡ ಆರ್, ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಶ್ರೀಮತಿ ನಂದಿನಿ ಬಿ.ಎನ್.,ಕೆಎಸ್ಪಿಎಸ್ರವರು ಹಾಗೂ ಕಛೇರಿಯ ಅಧಿಕಾರಿ/ಸಿಬ್ಬಂದಿವರ್ಗದವರು ಹಾಜರಿದ್ದರು.



ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ

ದಿನಾಂಕ 12.04.2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ  ಹಾಸನ ನಗರದ ಅಂಬೇಡ್ಕರ್ ನಗರದ ವಾಸಿ ಸೂಫಿಯಾನ್ ಬಿನ್ ಫಯಾಜ್ ಅಹಮದ್ ಮತ್ತು ಅವನ ಸ್ನೇಹಿತ ಸುಹೇಬ್ ರವರು ರಾಹುಲ್ ಎಂಬುವರಿಗೆ ಹಣ ಕೊಡಲು ಹಾಸನ ಹೊಸಲೈನ್ ರಸ್ತೆ ಡಿ.ಎ.ಆರ್ ಕ್ರಾಸ್ ಯುನಿಯನ್ ಬ್ಯಾಂಕ್ ಎಟಿಎಂ  ಹತ್ತಿರ ಹೋಗುತ್ತಿರುವಾಗ ಅಲ್ಲಿಗೆ ಬಂದು ಅಪ್ರು @ಅಪ್ರೋಜ್ ಖಾನ್ ಮತ್ತು ಜಲ್ಪೀ  ರವರುಗಳು ಅವರನ್ನು ಅಡ್ಡಗಟ್ಟಿ ಏಕಾಏಕಿ ಜಗಳ ತೆಗೆದು ಸೂಫಿಯಾನ್ ರವರ ಮುಖಕ್ಕೆ ಬಲ ಕಣ್ಣಿಗೆ ಮತ್ತು ತಲೆ ಹಿಂಭಾಗಕ್ಕೆ ಹೊಡೆದು ನೋವುಂಟು ಮಾಡಿರುತ್ತಾನೆಂದು ಸೂಫಿಯಾನ್ ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

 

ಆಟೋ ಚಾಲಕನ ಮೇಲೆ ಹಲ್ಲೆ

     ದಿನಾಂಕ: 12.04.2021 ರಂದು ರಾತ್ರಿ ಸುಮಾರು 11.30 ಗಂಟೆಯ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲತಮ್ಮನಹಳ್ಳಿ ಗ್ರಾಮದ ಶಶಿಕುಮಾರ್ ರವರು ತನ್ನ ಆಟೋದಲ್ಲಿ ಹಾಸನ ಟೌನ್ ಯರೇಹಳ್ಳಿ ಬೋರ್ಡಗಲ್ ಹತ್ತಿರ ಹೋಗುತ್ತಿರುವಾಗ ಅವರ ಆಟೋದಲ್ಲಿಯೇ ಇದ್ದ ಹಾಸನ ತಾಲ್ಲೂಕು ಯರೇಹಳ್ಳಿ ಗ್ರಾಮದ ಯೋಗೇಶ್ ಮತ್ತು ಉಮೇಶ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಯೇ ಬಿದಿದ್ದ ಕಲ್ಲಿನಿಂದ  ತಲೆಗೆ ಹೊಡೆದು ನೋವುಂಟು ಮಾಡಿರುತ್ತಾನೆಂದು ಶಶಿಕುಮಾರ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.

 ಅಕ್ರಮವಾಗಿ ಜೂಜಾಡುತ್ತಿದ್ದ 8 ಜನರ ಬಂಧನ, ಹಾಗೂ 4110/- ರೂ ಹಣ ವಶ

     ದಿನಾಂಕ:13/04/2021 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಹಾಸನದ ಕಟ್ಟಿನಕೆರೆ ಮಾರ್ಕೆಟ್ ನಲ್ಲಿ ತರಕಾರಿ ಮಾರಾಟ ಮಾಡುವ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುತ್ತಾರೆಂದು ಹಾಸನ ನಗರ ಠಾಣಾ ಪಿಎಸ್ಐ ರವರಾದ ಶ್ರೀ. ಅಭಿಜಿತ್ ರವರಿಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಚಂದು ಬಿನ್ ತಿಮ್ಮಪ್ಪ 27 ವರ್ಷ, ಹೊಸಲೈನ್ ರಸ್ತೆ, ಹಾಸನ.     2) ಮಧು ಬಿನ್ ಹನುಮಚಾರ್ 27 ವರ್ಷ, 2ನೇ ಹಂತ ವಿಜಯನಗರ ಬಡಾವಣೆ, ಹಾಸನ.3) ಮೋಹನ್ ಕುಮಾರ್ ಬಿನ್ ಪುಟ್ಟಸ್ವಾಮಿ, 27 ವರ್ಷ, ಹುಣಸಿನಕೆರೆ 80 ಅಡಿ ರಸ್ತೆ, ಹಾಸನ.4) ಶಿವಕುಮಾರ ಬಿನ್ ಚೆನ್ನಚಾರಿ, 27 ವರ್ಷ, ಹುಣಸಿನಕೆರೆ ಬಡಾವಣೆ,ಹಾಸನ.5) ಬಾಬು@ಇಸ್ಮಾಯಿಲ್ ಬಿನ್ ಇಬ್ರಾಹಿಂ, 34 ವರ್ಷ, 5ನೇ ಕ್ರಾಸ್, ಪೆನ್ಷನ್ ಮೊಹಲ್ಲಾ, ಹಾಸನ.6) ಜಯಂತ್ ಬಿನ್ ನಾರಾಯಣ 27 ವರ್ಷ, ಹೊಸಲೈನ್ ರಸ್ತೆ, ಹಾಸನ.7) ಹಿದಾಯತ್ ಬಿನ್ ಸಿರಾಜ್ ಪಾಷ, 32 ವರ್ಷ, ಸಲೀಂನಗರ, ಹಾಸನ.    8) ಕಿರಣ್ ಬಿನ್ ಚಂದ್ರ 30 ವರ್ಷ, ಸಂತೇಪೇಟೆ, ಅಂಬೇಡ್ಕರ್ ನಗರ, ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟಿದ್ದ 4110/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


 

 

No comments: