* * * * * * HASSAN DISTRICT POLICE

Monday, April 12, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 12-04-2021

 

     ಪತ್ರಿಕಾ ಪ್ರಕಟಣೆ                 ದಿನಾಂಕ:  12-04-2021

 

ಜೂಜಾಡುತ್ತಿದ್ದ 10 ಜನರ ಬಂಧನ, ಬಂಧಿತರಿಂದ 8436/- ನಗದು ವಶ

     ದಿನಾಂಕ: 12-04-2021 ರಂದು ರಾತ್ರಿ 01-30 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಸ್ವೀಪರ್ ಕಾಲೋನಿಯಲ್ಲಿ ಜಯಕುಮಾರ್ ರವರ ಮನೆಯ ಹತ್ತಿರ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಐ ಶ್ರೀ ಸೋಮೇಗೌಡ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕೃಷ್ಣ ಬಿನ್ ಲೇಟ್ ದುರ್ಗಪ್ಪ, 39 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 2) ಹರೀಶ್ ಬಿನ್ ಬಸವರಾಜ್, 33 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 3) ವಿನು ಬಿನ್ ನರಸಿಂಹಯ್ಯ, 32 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 4) ಮಹೇಶ ಬಿನ್ ಮಂಜುನಾಥ, 22 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 5) ರಘು ಬಿನ್ ನಾರಾಯಣ, 35 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 6) ಮೂರ್ತಿ ಬಿನ್ ನಾರಾಯಣಪ್ಪ, 38 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 7) ವೆಂಕಟೇಶ ಬಿನ್ ನೆಲ್ಲಯ್ಯ, 30 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 8) ಸಂತೋಷ ಬಿನ್ ಮಾರಪ್ಪ, 28 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 9) ವೆಂಕಟೇಶ ಬಿನ್ ಲೇಟ್ ರಂಗಪ್ಪ, 38 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ 10) ಗೌತಮ್ ಬಿನ್ ಮಹಾಲಿಂಗಪ್ಪ, 24 ವರ್ಷ, ಸ್ವೀಪರ್ ಕಾಲೋನಿ, ಅರಸೀಕೆರೆ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 8436/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ ಬೈಕಿನಲ್ಲಿದ್ದ ಒಬ್ಬರ ಸಾವು, ಇನ್ನೊಬ್ಬರಿಗೆ ರಕ್ತಗಾಯ

     ದಿನಾಂಕ: 11-04-2021 ರಂದು ಸಂಜೆ 05-10 ಗಂಟೆ  ಸಮಯದಲ್ಲಿ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಮಲ್ಲೇಕೊಪ್ಪಲು ಗ್ರಾಮದ ದೇವರಾಜ ರವರು  ಕೆಎ-50-ಕ್ಯೂ-8725 ರ ಸ್ಪ್ಲೆಂಡರ್ ಪ್ಲಸ್ ಬೈಕಿನಲ್ಲಿ ಗ್ರಾಮದ ಸುಬ್ಬೇಗೌಡ ರವರನ್ನು ಕೂರಿಸಿಕೊಂಡು ಕಣಿಯಾರು ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಬರಗೂರು ಗ್ರಾಮದ ತೋಟದ ಹತ್ತಿರ ಕಣಿಯಾರು ಗ್ರಾಮದ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಬರಗೂರು ಗ್ರಾಮದ ಕಡೆಯಿಂದ ಬಂದ ಕೆಎ-25-ಎಎ-8988 ರ ಟಿಪ್ಪರ್ ಲಾರಿಯ ಚಾಲಕ ಟಿಪ್ಪರ್ ಲಾರಿಯನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಹಾಸನ ಜನಪ್ರಿಯ ಆಸ್ಪತ್ರೆಗೆ ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು  ದೇವರಾಜು ಬಿನ್ ಸುಬ್ಬೇಗೌಡ, 36 ವರ್ಷ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಶ್ರೀ ಮಂಜೇಗೌಡ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.


No comments: