ಪತ್ರಿಕಾ ಪ್ರಕಟಣೆ ದಿನಾಂಕ: 06-04-2021
ಈ ಪ್ರಕರಣದ ಪಿರ್ಯಾದಿ ಶಿವಣ್ಣನವರ ಅಣ್ಣ ಮಂಜುನಾಥ ರವರು ಯಾವುದೋ ಪ್ರೈವೆಟ್
ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ಈಗ್ಗೆ 1 ವರ್ಷದ ಹಿಂದೆ ಕೆಲಸವನ್ನು ಬಿಟ್ಟು ಮನೆಯಲ್ಲೆ
ಇದ್ದವರು ದಿನಾಂಕ 01/04/2021 ರಂದು ಬೆಳಗ್ಗೆ 11-00 ಗಂಟೆ ಸಮಯದಲ್ಲಿ ಮನೆಯಿಂದ ಮೈಸೂರಿಗೆ
ಹೋಗುತ್ತೆನೆಂದು ಹೇಳಿ ಹೋಗಿದ್ದು ರಾತ್ರಿ ಮನೆಗೆ ಬಂದಿರುವುದಿಲ್ಲ. ಪಿರ್ಯಾದಿಗೆ ದಿನಾಂಕ 05/04/2021
ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ಯಾರೋ ಪೋನ್ ಮಾಡಿ ನಿಮ್ಮ ಅಣ್ಣ
ಮಂಜುನಾಥರವರನ್ನು ಯಾರೋ ಕೊಲೆ ಮಾಡಿ ಮಾರನಾಯಕನಹಳ್ಳಿ ಗ್ರಾಮದ ಬಳಿ ಹಾಕಿ ಹೋಗಿರುತ್ತಾರೆಂದು
ತಿಳಿಸಿದ ಮೇರೆಗೆ ಸ್ಥಳಕ್ಕೆ ಬಂದು ನೋಡಲಾಗಿ ಅಣ್ಣ ಮಂಜುನಾಥ ರವರಗೆ ತಲೆಗೆ ರಕ್ತಗಾಯವಾಗಿದ್ದು
ಮತ್ತು ಎಡಗಾಲಿನ ಬೆರಳಿಗೆ ಉಜ್ಜಿದಂತೆ ಆಗಿದ್ದು, ಮಂಜುನಾಥ ರವರನ್ನು ಯಾರೋ ಅಪರಿಚಿತ ವ್ಯಕ್ತಿಗಳು
ಯಾವುದೋ ದ್ವೇಷದಿಂದ ಕೊಲೆ ಮಾಡಿ ಸಾಕ್ಷಿಯನ್ನು ಮರೆಮಾಚುವ ಉದ್ದೇಶದಿಂದ ಯಾವುದೋ ವಾಹನದಲ್ಲಿ
ತಂದು ಮೊಸಳೆ ಹೊಸಹಳ್ಳಿ ಮಾರನಾಯಕನಹಳ್ಳಿ ರಸ್ತೆಯಲ್ಲಿ ಮೃತದೇಹವನ್ನು ಎಸೆದು ಹೋಗಿರುತ್ತಾರೆಂದು
ಹಾಗೂ ಮೊಸಳೆ ಹೊಸಹಳ್ಳಿ ಗ್ರಾಮದ ಮಂಗಳ ರವರು ಏನೋ
ಮಾಡಿರಬಹುದೆಂದು ಅನುಮಾನವಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಮೃತ ಶ್ರೀ ಮಂಜುನಾಥ, ರವರ
ತಮ್ಮ ಶ್ರೀ ಶಿವಣ್ಣ, ರವರು ದಿನಾಂಕ: 05-04-2021 ರಂದು ಕೊಟ್ಟ
ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಮೊ,ನಂ 33/2021 ಕಲಂ 302,
201 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿ
ತನಿಖೆಯಲ್ಲಿತ್ತು.
ಈ ಪ್ರಕರಣದ ಆರೋಪಿಗಳ
ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಶ್ರೀನಿವಾಸಗೌಡ.ಆರ್, ಹೆಚ್ಚುವರಿ
ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ಮತ್ತು ಹಾಸನ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ
ಪುಟ್ಟಸ್ವಾಮಿಗೌಡ.ಟಿ.ಆರ್ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ್.ಪಿ. ಸಿ.ಪಿ.ಐ, ಹಾಸನ
ಗ್ರಾಮಾಂತರ ವೃತ್ತ ಮತ್ತು ಗೊರೂರು ಪೊಲೀಸ್ ಠಾಣಾ ಪಿ.ಎಸ್.ಐ, ಶ್ರೀ ಸಾಗರ್.ಎಸ್.ಎಲ್ ರವರ ನೇತೃತ್ವದಲ್ಲಿ
ತಂಡವನ್ನು ರಚಿಸಿ ಪತ್ತೆಗಾಗಿ ನಿಯೋಜಿಸಲಾಗಿತ್ತು.
ದಸ್ತಗಿರಿ ಮಾಡಲಾದ ಆರೋಪಿಗಳ
ವಿವರ
ಶಾಂತಿಗ್ರಾಮ ಹೋಬಳಿ, ಹಾಸನ
ತಾಲ್ಲೋಕು
ಎ2 ಮಂಜುನಾಥ ಬಿನ್ ಲೇ ನಾರಾಯಣ, 23
ವರ್ಷ, ನಯನ ಕ್ಷತ್ರಿಯ ಜನಾಂಗ, ಕ್ಷೌರಿಕ
ವೃತ್ತಿ, ಮೊಸಳೆ ಹೊಸಹಳ್ಳಿ ಗ್ರಾಮ,
ಶಾಂತಿಗ್ರಾಮ ಹೋಬಳಿ, ಹಾಸನ
ತಾಲ್ಲೋಕು
ಎ3 ರಾಘವೇಂದ್ರ ಬಿನ್ ಲಕ್ಷ್ಮೇಗೌಡ, 26 ವರ್ಷ, ವಕ್ಕಲಿಗರು, ವ್ಯವಸಾಯ, ಹುಳುವಾರೆ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು.
No comments:
Post a Comment