ಪತ್ರಿಕಾ ಪ್ರಕಟಣೆ
ದಿನಾಂಕ: 06-04-2021
30 ಸಾವಿರ ಬೆಲೆಯ ಟಿವಿ, ಡಿವಿಆರ್, ಸಿಸಿಕ್ಯಾಮೆರಾ, ಸ್ಟೀಲ್ ಲೋಟ, ಹಾಗೂ ತಟ್ಟೆಗಳ ಕಳವು:
ಈಗ್ಗೆ 5
ವರ್ಷಗಳಿಂದ ಹಾಸನದ ತಣ್ಣೀರುಹಳ್ಳ ವಾಸಿ ಶ್ರೀ ಮಧುಸೂಧನ, ರವರು ಹಾಸನದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ
ವಿದ್ಯಾಸೌಧ ಪಬ್ಲಿಕ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:
03-04-2021 ರಂದು ಎಂದು ಶಾಲೆ ಮುಗಿಸಿಕೊಂಡು ಹೋಗಿದ್ದು, ದಿನಾಂಕ:
05-04-2021 ರಂದು ಬೆಳಿಗ್ಗೆ 9-00 ಗಂಟೆಗೆ ಶಾಲೆ ಬಳಿ ಹೋಗಿ ನೋಡಲಾಗಿ ಯಾರೋ
ಕಳ್ಳರು ಶಾಲಾ ಕೊಠಡಿಯ ಬೀಗ ಮುರಿದು 30,000/- ಬೆಲೆಯ 32
ಇಂಚಿನ ಸಾನಿಯೋ ಟಿ.ವಿ. ಡಿವಿಆರ್, ಸಿಸಿಕ್ಯಾಮೆರಾ, ಸ್ಟೀಲ್ ಲೋಟ ಹಾಗೂ ತಟ್ಟಿಗಳನ್ನು
ಕಳ್ಳತನಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಮಧುಸೂಧನ್, ಶಿಕ್ಷಕರು
ರವರು ದಿನಾಂಕ: 05-04-2021 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ: 03-04-2021
ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು
ಹೋಬಳಿ, ಹೊಸಳ್ಳಿ ಗ್ರಾಮದ ವಾಸಿ ಶ್ರೀಮತಿ ಪ್ರೇಮ, ರವರು
ಎಂದಿನಂತೆ ಶಾಲೆ ಮುಗಿಸಿಕೊಂಡು ಶಾಲೆಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ:
05-04-2021 ರಂದು ಬೆಳಿಗ್ಗೆ 10-00 ಗಂಟೆಗೆ ಶಾಲೆ ಹತ್ತಿರ ಹೋಗಿ ನೋಡಲಾಗಿ ಶಾಲಾ
ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿ, ಬೆಲೆಯ 2500/-
ಬೆಲೆಯ 2 ಖಾಲಿ ಹೆಚ್ಪಿ ಸಿಲಿಂಡರ್ಗಳನ್ನು ಕಳ್ಳತನ
ಮಾಡಿಕಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಪ್ರೇಮ, ರವರು
ದಿನಾಂಕ: 05-04-2021 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ: 03-03-2021
ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಹಾಸನದ ವಲ್ಲಬಾಯ್ ರಸ್ತೆ, ವಾಸಿ
ಶ್ರೀ ಜಾಕೀರ್ ಹುಸೇನ್, ರವರ ಬಾಬ್ತು ಕೆಎ-04, ಹೆಚ್ ಕೆ-6833 ರ
ವಿಟಿಎಸ್ ಆಪಾಚಿ ಬೈಕ್ ನ್ನು ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ: 04-03-2021
ರಂದು ಬೆಳಿಗ್ಗೆ 9-30 ಗಂಟೆಗೆ ನೋಡಲಾಗಿ ಬೈಕ್ ಇರಲಿಲ್ಲ, ಯಾರೋ
ಕಳ್ಳರು ಸುಮಾರು 40,000/- ಬೆಲೆಯ ಬೈಕ್ ನ್ನು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಜಾಕೀರ್ ಹುಸೇನ್, ರವರು
ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ದಿನಾಂಕ: 04-04-2021
ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ
ಹೋಬಳಿ, ನಿಟ್ಟೂರು ಗ್ರಾಮದ ವಾಸಿ ಶ್ರೀ ಎನ್.ಎನ್. ಗಂಗಾಧರ್, ರವರ
ಬಾಬ್ತು ಕೆಎ-13, ಇಟಿ-7448 ರ ಬೈಕ್ ನಲ್ಲಿ ಹಾಸನ ತಾಲ್ಲೂಕು, ದುದ್ದ
ಹೋಬಳಿ, ವಳಗೇರಹಳ್ಳಿ ಗ್ರಾಮಕ್ಕೆ ಸ್ನೇಹಿತ ಮನೆಗೆ ಹಬ್ಬಕ್ಕೆ
ಹೋಗಲು ಹಾಸನ ತಾಲ್ಲೂಕು, ದುದ್ದ ಹೋಬಳಿ, ಆನೇಹಳ್ಳಿ ಕ್ರಾಸ್ ರಸ್ತೆ ಹತ್ತಿರ ಹೋಗುತ್ತಿದ್ದಾಗ
ಬೈಕ್ ನ್ನು ನಿಯಂತ್ರಣ ತಪ್ಪಿ, ಶ್ರೀ ಎನ್.ಎನ್. ಗಂಗಾಧರ್, ರವರು
ಬೈಕ್ನ ನಿಯಂತ್ರಣ ತಪ್ಪಿ ಶ್ರೀ ಎನ್.ಎನ್. ಗಂಗಾಧರ್ ಬಿನ್ ನಂಜುಂಡಯ್ಯ, 22
ವರ್ಷ, ನಿಟ್ಟೂರು ಗ್ರಾಮ, ಸಾಲಗಾಮೆ ಹೋಬಳಿ, ಹಾಸನ
ತಾಲ್ಲೂಕು. ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಸಂದೀಪ್, ರವರು
ದಿನಾಂಕ: 05-04-2021 ರಂದು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್
ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ: 06-04-2021
ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ
ಹೋಬಳಿ, ಮಲ್ಲಪ್ಪನಹಳ್ಳಿ ಗ್ರಾಮದ ವಾಸಿ ಶ್ರೀ ಚಿಕ್ಕೇಗೌಡ, ರವರು
ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಲು ಕೆಎ-13, ಎಫ್-2419 ರ ಬಸ್ ಸೀಟ್ ನಂ 19,20,21 ರ ಲಗೇಜ್ ಇರುವ ಸ್ಥಳದಲ್ಲಿ ಬ್ಯಾಗ್ ಇಟ್ಟು
ಸೀಟ್ ನಲ್ಲಿ ಕುಳಿತುಕೊಂಡಿದ್ದು, ಬ್ಯಾಗ್ ನಲ್ಲಿಟ್ಟಿದ್ದ 3,00,000/- ಬೆಲೆಯ
80 ತೂಕದ ಗ್ರಾಂ ತೂಕದ 46
ಗ್ರಾಂ ತೂಕದ ಚಿನ್ನದ 4 ಬಳೆಗಳು ಮತ್ತು 34 ಗ್ರಾಂ ತೂಕದ ಲಾಂಗ್ ಚೈನ್, 10
ಸಾವಿರ ಬೆಲೆಯ 01 ವಿವೋ ಮೊಬೈಲ್ ಸಮೇತ ಬ್ಯಾಗ್ ನ್ನು
ಚನ್ನರಾಯಪಟ್ಟಣದಲ್ಲಿ ಇಳಿಯುವಾಗ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ
ಪತ್ತೆಮಾಡಿಕೊಡಬೇಕೆಂದು ಶ್ರೀ ಚಿಕ್ಕೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾತಯಪಟ್ಟಣ ನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹಾಸನ ತಾಲ್ಲೂಕು, ಕಸಬಾ
ಹೋಬಳಿ, ದೊಡ್ಡಮಂಡಿಗನಹಳ್ಳಿ ಗ್ರಾಮ. ರೈಲ್ವೆ ಸ್ಟೇಷನ್ ಹತ್ತಿರ
ವಾಸಿ ಶ್ರೀಮತಿ ಶೋಭ, ರವರು ಹೇಮಾವತಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ
ಮಾಡಿಕೊಂಡಿದ್ದು, ಮಗ ಶ್ರೀ ಮನೋಜ@ ಮನು, 3 ವರ್ಷಗಳಿಂದ ಆಟೋ ಚಾಲಕನಾಗಿ ಕೆಲಸ
ಮಾಡಿಕೊಂಡಿದ್ದು, ಈಗ್ಗೆ 15 ದಿವಸಗಳಿಂದ ಮನೆಯ ಮುಂದೆ ಇರುವ ಮಹೇಂದ್ರ ಶೋ ರೂಂ
ಹತ್ತಿರ ಕ್ಯಾಂಟೀನ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 04-04-2021
ರಂದು ಮನೆಗೆ ಬಂದಿರುವುದಿಲ್ಲ, ಪಿರ್ಯಾದಿಯವರು ದಿನಾಂಕ: 04-04-2021
ರಂದು ರಾತ್ರಿ ಕರ್ತವ್ಯ ಮುಗಿಸಿಕೊಂಡು ದಿನಾಂಕ: 05-04-2021 ರಂದು ಬೆಳಿಗ್ಗೆ 9-00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮಗ ಮನೋಜ್ @ ಮನು
ಇರಲಿಲ್ಲ, ಎಲ್ಲಾ ಕಡೆ ಹುಡುಕಾಡುತ್ತಿರುವಾಗ ಅಕ್ಕನ ಮಗ ಶ್ರೀ
ಚಿದಂಬರ್, ರವರು ಫೋನ್ ಮಾಡಿ ಮನೋಜ್ @ ಮನು
ಬಿನ್ ಮಂಜುನಾಥ, 22 ವರ್ಷ, ಕೊಲೆ ಮಾಡಿರುವುದನ್ನು ಮರೆ ಮಾಚುವ ಉದ್ದೇಶದಿಂದ ಹಾಸನ ತಾಲ್ಲೂಕು, ಕಂದಲಿ
ಹತ್ತಿರವಿರುವ ಸೇತುವೆ ಹಳ್ಳಕ್ಕೆ ತಂದು ಹಾಕಿರುತ್ತಾರೆಂದು ಹಾಗೂ ಸ್ನೇಹಿತರಾದ ಶಂಶಾಕ್ ಮತ್ತು
ತೇಜಸ್, ರವರು ಹಳೇ ದ್ವೇಷದಿಂದ ಕೊಲೆ ಮಾಡಿರುತ್ತಾರೆಂದು
ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ತಾಯಿ ಶ್ರೀಮತಿ ಶೋಭ, ರವರು
ದಿನಾಂಕ: 05-04-2021 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ: 05-04-2021
ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ
ಹೋಬಳಿ, ಬನ್ನಿಮರದಹಟ್ಟಿ ಗ್ರಾಮದ ಮನೆಯ ಪಕ್ಕ ಮದ್ಯ ಸೇವಿಸಲು
ಅನುವು ಮಾಡಿಕೊಟ್ಟಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಹಾಗೂ ಪಿಐ ರವರ ಆದೇಶದಂತೆ
ಶ್ರೀಮತಿ ಸರೋಜಬಾಯಿ, ಪಿಎಸ್ಐ ಸಿಇಎನ್ ಪೊಲೀಸ್ ಠಾಣೆ. ರವರು
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗಿಲ್ಲದೆ ಅಕ್ರಮವಾಗಿ ಮದ್ಯ
ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ವೆಂಕಟೇಶ್ ಬಿನ್
ಲೇಟ್ ವೆಂಕಟಬೋವಿ, 60 ವರ್ಷ, ಬನ್ನಿಮರದಹಟ್ಟಿ ಗ್ರಾಮ, ರಂಗಾಪುರ
ಕಾವಲು, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು
ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು 424/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಸಿಇಎನ್
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment