ಪತ್ರಿಕಾ ಪ್ರಕಟಣೆ ದಿನಾಂಕ: 31-03-2021
ಅಕ್ರಮವಾಗಿ ಮದ್ಯ ವಿತರಿಸಿ
ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ:
ದಿನಾಂಕ: 30-03-2021
ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಶ್ರೀ ಆನಂದ, ಪಿಎಸ್ಐ, ಬಾಣಾವರ
ಪೊಲೀಸ್ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ ಅರಸೀಕೆರೆ ತಾಲ್ಲೂಕು, ಬಾಣಾವರ
ಹೋಬಳಿ, ಗರುಡನಗಿರಿ ಗ್ರಾಮದೊಳಗೆ ಸಾರ್ವಜನಿಕರ ಸ್ಥಳದಲ್ಲಿ
ಸಾರ್ವಜನಿಕರಿಗೆ ಮದ್ಯ ವಿತರಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ
ಸ್ಥಳಕ್ಕೆ ಹೋಗಿ ನೊಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ವಿತರಿಸಿ ಹಾಗೂ
ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸಿದ್ದಮಲ್ಲಪ್ಪ ಬಿನ್
ಶಂಕರಪ್ಪ, 45 ವರ್ಷ, ಗರುಡನಗಿರಿ ಗ್ರಾಮ, ಕಣಕಟ್ಟೆ ಹೋಬಳಿ, ಅರಸೀಕೆರೆ
ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆಯಲ್ಲಿರುತ್ತೆ.
ಕಾಲೇಜು ಕಾಮಗಾರಿ ಕೆಲಸಕ್ಕೆ
ಅಡ್ಡಿಪಡಿಸಿ ಹಾಗೂ ಕೊಲೆ ಬೆದರಿಕೆ
ಈಗ್ಗೆ 3
ತಿಂಗಳಿನಿಂದ ಕೊಳ್ಳೆಗಾಲ ತಾಲ್ಲೂಕು, ಸರಗೂರು ಗ್ರಾಮದ ವಾಸಿ ಶ್ರೀ ವಿನೋದಕುಮಾರ್, ರವರು
ಶ್ರೀನಿವಾಸ ಕನ್ಸಸ್ಟ್ರಕ್ಷನ್ ಇಂಡಿಯಾ ಲಿಮಿಟೆಡ್ ಟೆಂಡರ್ ಆಧಾರದ ಮೇರೆಗೆ ಅರಸೀಕೆರೆ ತಾಲ್ಲೂಕು, ಕೆಲ್ಲಂಗೆರೆ
ಮತ್ತು ಲಕ್ಷ್ಮೀದೇವರಹಳ್ಳಿ ಗ್ರಾಮದ ಸರ್ಕಾರಿ ಇಂಜಿನಿಯರ್ ಕಾಲೇಜ್ ಮಂಜೂರಾಗಿದ್ದು, ಪಿರ್ಯಾದಿಯವರು
ಸದರಿ ಕಾಲೇಜಿನ ಕಾಮಗಾರಿಯನ್ನು ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ದಿನಾಂಕ:
30-03-2021 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಇಂಜಿನಿಯರ್ ಕಾಲೇಜು
ಅವರಣದಲ್ಲಿ ಕೈಲಾಶ್ ಯಾದವ್ ಮತ್ತು ಶ್ರೀ ಜವಹರ್ ಚೌದರಿ ರವರುಗಳು ಕೆಲಸ ಮಾಡುತ್ತಿದ್ದಾಗ
ಅರಸೀಕೆರೆ ನಗರ ವಾಸಿ ಶ್ರೀ ಚಂದ್ರಶೇಖರ್ ಯಾದವ್, ರವರು ಕೆಲಸಕ್ಕೆ ಅಡ್ಡಿಪಡಿಸಿ, ಕೆಲಸಮಾಡದಂತೆ
ತಡೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಕೆಲಸಗಾರರಿಗೆ ಕೈಯಿಂದ ಹೊಡೆದು ಕೆಲಸಗಾರರು ಹಾಗೂ
ಪಿರ್ಯಾದಿಯನ್ನು ಉದ್ದೇಶಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಹಾಗೂ ಆರೋಪಿಗಳ ವಿರುದ್ಧ ಕ್ರಮ
ಕೈಗೊಳ್ಳಬೇಕೆಂದು ಶ್ರೀ ವಿನೋದಕುಮಾರ್, ರವರು ದಿನಾಂಕ: 30-03-2021 ರಂದು ಕೊಟ್ಟ
ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
No comments:
Post a Comment