* * * * * * HASSAN DISTRICT POLICE

Friday, September 14, 2018

PRESS NOTE 13-09-2018



             ಪತ್ರಿಕಾ ಪ್ರಕಟಣೆ                  ದಿನಾಂಕ:13-09-2018

ಪಾದಚಾರಿಗೆ ಬೈಕ್ ಡಿಕ್ಕಿ ಪಾದಚಾರಿ ಸಾವು :

     ದಿನಾಂಕ:11-09-2018 ರಂದು ಅರಕಲಗೂಡು ತಾಲ್ಲೂಕ್ ಕಬ್ಬಳಿಗೆರೆ ಗ್ರಾಮದ ವಾಸಿ ಮಂಜೇಗೌಡ ರವರು ಹಾಸನದ ವಿಜಯನಗರ ಬಡಾವಣೆಯಲ್ಲಿ ವಾಸವಾಗಿರುವ ತಮ್ಮ ಮಗಳು ಅಶ್ಚಿನಿ ರವರಿಗೆ ಬಾಗಿನ ಕೊಡಲು ಬಂದಿದ್ದು, ರಾತ್ರಿ 8.00 ಗಂಟೆ ಸಮಯದಲ್ಲಿ ಬೇಲೂರು ರಸ್ತೆಯ ಎಸ್.ಆರ್.ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ-46-ಜೆ-4262 ರ ಬೈಕ್ ಚಾಲಕ ತನ್ನ ಬೈಕ್ ಅನ್ನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಮಂಜೇಗೌಡರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗೆ ಎಸ್.ಸಿ. ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಮಂಜೇಗೌಡ, 48ವರ್ಷ, ಕಬ್ಬಳಿಗೆರೆಗ್ರಾಮ, ಅರಕಲಗೂಡು ತಾಲ್ಲೂಕ್ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗಳು ಅಶ್ಚಿನಿ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ

No comments: