ಪತ್ರಿಕಾ ಪ್ರಕಟಣೆ ದಿನಾಂಕ: 12-09-2018.
ಕೆಎಸ್ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿ,
ಬೈಕ್
ಸವಾರ ಸಾವು:
ದಿನಾಂಕ:
11-09-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅನಿಕೆ ಗ್ರಾಮದ ವಾಸಿ ಶ್ರೀ ಚಂದ್ರಶೇಖರ್, ರವರ ಬಾಬ್ತು ಕೆಎ-46 ಹೆಚ್-1111 ರ ಬೈಕ್ ನಲ್ಲಿ ಹಗರೆ ಗ್ರಾಮದಲ್ಲಿರುವ ಕಾವೇರಿ
ಗ್ರಾಮೀಣಾ ಬ್ಯಾಂಕ್ಗೆ ಹೋಗಲು ಬೇಲೂರು-ಹಾಸನ ರಸ್ತೆಯಲ್ಲಿ ಹಗರೆ ಗ್ರಾಮದ ಹತ್ತಿರ ಹೋಗುತ್ತಿದ್ದಾಗ
ಎದುರುಗಡೆಯಿಂದ ಬಂದ ಕೆಎ-09, ಎಫ್-5081 ರ ಕೆಎಸ್ಆರ್ ಟಿಸಿ
ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ
ಮಾಡಿದ ಪರಿಣಾಮ ಶ್ರೀ ಚಂದ್ರಶೇಖರ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಎಸ್ಎಸ್ಎಂ ಆಸ್ಪತ್ರೆಗೆ
ದಾಖಲಿಸಿದ್ದು, ಶ್ರೀ ಚಂದ್ರಶೇಖರ್
ಬಿನ್ ಬಸವಯ್ಯ, 45 ವರ್ಷ, ಅನಿಕೆ ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು ರವರು ಚಿಕಿತ್ಸೆ ಫಲಕಾರಿಯಾಗದೇ
ಮೃತಪಟ್ಟಿರುತ್ತಾರೆಂದು ಮೃತ ಭಾವ ಶ್ರೀ ಧರ್ಮೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಗೂಡ್ಸ್
ವಾಹನ ಬೈಕ್ ಗೆ ಡಿಕ್ಕಿ, ಬೈಕ್ ಸವಾರ ಸಾವು.
ದಿನಾಂಕ:
11-09-2018 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಹೊಳೆನರಸೀಪುರ
ತಾಲ್ಲೂಕು, ಹನುಮನಹಳ್ಳಿ
ಗ್ರಾಮದ ವಾಸಿ ಶ್ರೀ ಸಾಗರ್ ಗೌಡ , ರವರ ಬಾಬ್ತು ಕೆಎ-13, ಇಎಫ್-6509 ರ ಬೈಕ್ ನಲ್ಲಿ
ಹಾಸನ ಸೆಂಟ್ಜೋಸೆಫ್ ಕಾಲೇಜಿಗೆ ಹೋಗಲು ಹಾಸನದ ರಾಜೀವ್ ಇಂಜಿನಿಯಿಂಗ್ ಕಾಲೇಜಿನ ರೈಲ್ವೆ
ಬ್ರಿಡ್ಜ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಎ-5988, ರ 407 ಗೂಡ್ಸ್ ಗಾಡಿಯ
ಚಾಲಕ ತನ್ನ ಲಾರಿಯನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ
ಪರಿಣಾಮ ಶ್ರೀ ಸಾಗರ್ ಗೌಡ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆ ಕರೆದುಕೊಂಡು
ಹೋಗುತ್ತಿದ್ದಾಗ ಶ್ರೀ ಸಾಗರ್ ಗೌಡ ಬಿನ್ ಸುರೇಶ್ ಗೌಡ, 18 ವರ್ಷ, ಹನುಮನಹಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು ರವರು ಮಾರ್ಗ ಮಧ್ಯೆ
ಮೃತಪಟ್ಟಿರುತ್ತಾರೆಂದು ಮೃತರ ಅಕ್ಕ ಶ್ರೀಮತಿ ಚೈತ್ರಾ ರವರು ಕೊಟ್ಟ ದೂರಿನ ಮೇರೆಗೆಹಾಸನ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು
ಕಾಣೆ:
ದಿನಾಂಕ:
27-08-2018 ರಂದು ಬೆಳಿಗ್ಗೆ 8- 00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಶಾಂತಮಲ್ಲಾಪುರ ಗ್ರಾಮದ ವಾಸಿ ಶ್ರೀ ಶಂಕರಯ್ಯ, ರವರ ಪತ್ನಿ ಶ್ರೀಮತಿ ಶಾರದ ರವರು, ಬೊಮ್ಮೆನೇಹಳ್ಳಿ ಗ್ರಾಮದ ಸೇವಕರ ಮನೆಗೆ ಕೆಲಸಕ್ಕೆ
ಹೋಗಿದ್ದು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಶಾರದ, ರವರು ದಿನಾಂಕ: 11-09-2018 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಶಾರದ ಕೋಂ ಶಂಕರಯ್ಯ
40 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ
ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂಪರ್ಕಿಸುವುದು.
No comments:
Post a Comment