* * * * * * HASSAN DISTRICT POLICE

Monday, July 23, 2018

PRESS NOTE : - 21-07-2018


ಪತ್ರಿಕಾ ಪ್ರಕಟಣೆ          ದಿನಾಂಕ: 21-07-2018.

ಜೂಜಾಡುತ್ತಿದ್ದ 7 ಜನರ ಬಂಧನ, ಬಂಧಿತರಿಂದ 19,350/-ನಗದು ವಶ :         ದಿನಾಂಕ: 20-07-2018 ರಂದು ಸಂಜೆ 06-15 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಅಣಚಿಹಳ್ಳಿ ಗ್ರಾಮದ ಶಾಮಿಯಾನ ಶಿವಣ್ಣ ರವರ ಮನೆಯ ಹಿಂಭಾದ ಹಿತ್ತಲಿನ ಬಳಿ ಅಂದರ್-ಬಾಹರ್ ಇಸ್ಫೀಟ್ ಜೂಜಾಟ ಆಡುತ್ತಿದ್ದಾರೆಂದು ಪಿಎಸ್ಐ ಶ್ರೀ ಸುರೇಶ್ ಪಿ. ಹಾಸನ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ  ಅಂದರ್-ಬಾಹರ್ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಾಮಕೃಷ್ಣ ಬಿನ್ ರಂಗೇಗೌಡ, 32 ವರ್ಷ, ಕಂದಲಿ ಗ್ರಾಮ, ಹಾಸನ ತಾಲ್ಲೂಕು 2) ನಾಗರಾಜ ಬಿನ್ ಬೋರಣ್ಣ, 46 ವರ್ಷ, ಕಂದಲಿ ಗ್ರಾಮ, ಹಾಸನ ತಾಲ್ಲೂಕು 3) ಮೋಹನಕುಮಾರ ಬಿನ್ ಕೃಷ್ಣೇಗೌಡ, 31 ವರ್ಷ, ಕಂದಲಿ ಗ್ರಾಮ, ಹಾಸನ ತಾಲ್ಲೂಕು 4) ಕುಮಾರ ಬಿನ್ ತಿಮ್ಮೇಗೌಡ, 42 ವರ್ಷ, ಅಣಚಿಹಳ್ಳಿ ಗ್ರಾಮ, ಹಾಸನ ತಾಲ್ಲೂಕು, 5) ವೆಂಕಟೇಶ ಬಿನ್ ತಿಮ್ಮಯ್ಯ, 35 ವರ್ಷ, ಅಣಚಿಹಳ್ಳಿ ಹಾಸನ ತಾಲ್ಲೂಕು 6) ಹರೀಶ ಬಿನ್ ತಿಮ್ಮೇಗೌಡ, 44 ವರ್ಷ, ಹೊಳೆತಿಮ್ಮನಹಳ್ಳಿ ಗ್ರಾಮ, ಹಾಸನ ತಾಲ್ಲೂಕು 7) ಮೂತರ್ಿ ಬಿನ್ ಭೀಮೇಗೌಡ, 32 ವರ್ಷ, ಕಂದಲಿ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 19,350/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಯಾವುದೋ ವಾಹನ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು :      ದಿನಾಂಕ: 19-07-2018 ರಂದು ರಾತ್ರಿ 08-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಬಿ.ಕಾಟೀಹಳ್ಳಿ, ಎಸ್ಬಿಎಂ ಕಾಲೋನಿ ವಾಸಿ ಲಕ್ಷ್ಮೇಗೌಡ ರವರು ಮನೆಯಿಂದ ಹಾಲನ್ನು ತೆಗೆದುಕೊಂಡು ಹೋಗಿ ಬಿ.ಕಾಟೀಹಳ್ಳಿಯ ಡೈರಿಗೆ ಹೋಗಿ ಹಾಲು ಹಾಕಿ ನಂತರ ಮನೆಗೆ ಹೋಗಲು ಹಾಸನ-ಅರಸೀಕೆರೆ ರಸ್ತೆ, ಬಿ.ಕಾಟೀಹಳ್ಳಿ ಗ್ರಾಮಪಂಚಾಯಿತಿ ಕಛೇರಿ ಸಮೀಪ ಅನ್ನಪೂಣರ್ೇಶ್ವರಿ ಹೋಟೆಲ್ ಮುಂಭಾಗ ನಡೆದುಕೊಂಡು ಹೋಗುತ್ತಿದ್ದಾಗ ಹಾಸನದ ಕಡೆಯಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ  ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಜನಪ್ರಿಯ ಆಸ್ಪತ್ರೆಗೆ ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು ಲಕ್ಷ್ಮೇಗೌಡ ಬಿನ್ ಲೇಟ್ ವೆಂಕಟೇಗೌಡ, 63 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ವೇಣು ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: