* * * * * * HASSAN DISTRICT POLICE

Friday, July 20, 2018

PRESS NOTE : 20-07-2018


ಪತ್ರಿಕಾ ಪ್ರಕಟಣೆ               ದಿನಾಂಕ: 20-07-2018

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು :   ದಿನಾಂಕ: 19-07-2018 ರಂದು ಮಧ್ಯಾಹ್ನ 02-10 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕಾಮಸಮುದ್ರ ಗ್ರಾಮದ ಶಿವಣ್ಣ ರವರ ಬಾಬ್ತು ಕೆಎ-13-ಇಜಿ-9041 ರ ಬೈಕಿನಲ್ಲಿ ಹಾಸನಕ್ಕೆ ಹೋಗಲು ಹೊಳೆನರಸೀಪುರ-ಹಾಸನ ರಸ್ತೆ, ಕೊಂತಗೌಡನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ  ಎದುರುಗಡೆಯಿಂದ ಬಂದ ಕೆಎ-06-ಎಂ-2562 ರ ಮಾರುತಿ ಕಾರು ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ  ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಬಿನ್ ಲೇಟ್ ಮರೀಗೌಡ, 48 ವರ್ಷ ರವರು ಮೃತಪಟ್ಟಿರುತ್ತಾರೆಂದು ಪಿರ್ಯಾದಿಯವರ ಸಂಬಂಧಿ ಶ್ರೀ ಅವಿನಾಶ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹುಡುಗ ಕಾಣೆ : ದಿನಾಂಕ: 02-07-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಹಾಸನ ನಗರ ಬೀರನಹಳ್ಳಿ ಕೆರೆ ವಾಸಿ ಸುರೇಶ್ ರವರ ಮಗ ವಾಸು  ಮನೆಯಿಂದ ಮಾಕರ್ೆಟ್ಗೆ ಹೋಗಿ ಬರುವುದಾಗಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ವಾಸು ರವರ ತಾಯಿ ಶ್ರೀಮತಿ ಲಕ್ಷ್ಮಿ ರವರು ದಿನಾಂಕ: 19-07-2018 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ವಾಸು ಬಿನ್ ಲೇಟ್ ಸುರೇಶ್, 19 ವರ್ಷ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

ಹೆಂಗಸು ಕಾಣೆ : ದಿನಾಂಕ: 09-07-2018 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಮರಿಯಾನಗರ ವಾಸಿ ಮಹೇಶ ರವರ ಪತ್ನಿ ಶ್ರೀಮತಿ ಸುಮಿತ್ರ ಮನೆಯಿಂದ  ಕೊಣನೂರು ಸಕರ್ಾರಿ ಆಸ್ಪತ್ರೆಗೆ ಹೋಗುವುದಾಗಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸುಮಿತ್ರ ರವರ ಪತಿ ಶ್ರೀ ಮಹೇಶ ರವರು ದಿನಾಂಕ: 19-07-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಸುಮಿತ್ರ ಕೋಂ ಮಹೇಶ, 30 ವರ್ಷ, 5'4'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ  ಕೊಣನೂರು ಠಾಣೆ ಫೋನ್ ನಂ.08175-226227 ಕ್ಕೆ ಸಂಪರ್ಕಿಸುವುದು.

No comments: