ಪತ್ರಿಕಾ ಪ್ರಕಟಣೆ
ದಿನಾಂಕ: 14-07-2018.
ಮಟ್ಕಾ ಜೂಜಾಡುತ್ತಿದ್ದ ಒಬ್ಬರ ಬಂಧನ, ಬಂಧಿತನಿಂದ 635/- ರೂ ನಗದು ವಶ
: ದಿನಾಂಕ: 13-07-2018 ರಂದು ಸಂಜೆ 5-00 ಗಂಟೆ
ಸಮಯದಲ್ಲಿ ಅರಸೀಕೆರೆ ನಗರದ, ಗರುಡನಗಿರಿ ಆಟೋ ನಿಲ್ದಾಣದ ಬಳಿ ಮಟ್ಕಾ
ಜೂಜಾಡುತ್ತಿದ್ದಾರೆಂದು ಶ್ರೀ ಸದಾನಂದ ತಿಪ್ಪಣ್ಣನವರ, ಪೊಲೀಸ್
ಉಪಾಧೀಕ್ಷಕರು, ಅರಸೀಕೆರೆ ಉಪ ವಿಭಾಗ, ರವರಿಗೆ ಬಂದ
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ಸಾರ್ವಜನಿಕರಿಗೆ
1 ರೂ ಗೆ 70 ರೂ ಹಣ
ಕೊಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾ ಮಟ್ಕಾ
ಜೂಜಾಟವಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಅಲ್ತಾಫ್ ಬಿನ್ ಇಬ್ರಾಹಿಂ ಸಾಬ್, 45 ವರ್ಷ, ಮುಸ್ಲಿಂ
ಜನಾಂಗ,
ಆಟೋಚಾಲಕ, 2ನೇ ಕ್ರಾಸ್, ಇಂದಿರಾನಗರ, ಅರಸೀಕೆರೆ
ಟೌನ್ ಎಂದು ತಿಳಿಸಿದವನನ್ನು ದಸ್ತಗಿರಿ
ಮಾಡಿಕೊಂಡು ಆತನ ವಶದಲ್ಲಿದ್ದ 635/- ರೂ ಹಣ, ಮಟ್ಕಾ ಚೀಟಿ, ಒಂದು ಲಿನ್ಸ್
ಮಾಕ್ಸೋ ಬಾಲ್ ಪೆನ್ನನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಕ್ರಮ ಕೈಗೊಂಡಿರುತ್ತೆ.
ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಒಂದು ಸಾವು
: ದಿನಾಂಕ: 12-07-2018 ರಂದು ರಾತ್ರಿ ಸುಮಾರು 9-40 ಗಂಟೆ
ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್, ಶ್ರವಣಬೆಳಗೊಳ ಹೋಬಳಿ, ಬೆಕ್ಕ
ಗ್ರಾಮದ ನಾಗರಾಜ, ರವರು ಕೆಎ-13-ಇಎಂ-0856 ನಂಬರಿನ
ಟಿವಿಎಸ್ 100 ಬೈಕಿನಲ್ಲಿ ಸ್ನೇಹಿತ ಗೋಪಾಲರವರನ್ನು ಕೂರಿಸಿಕೊಂಡು
ನಾಗಮಂಗಲ-ಚನ್ನರಾಯಪಟ್ಟಣ ರಸ್ತೆಯ ಗೈಡ್ ಲೈನ್ ಶಾಲೆಯ ಹತ್ತಿರ ಇರುವ ಇಟ್ಟಿಗೆ ಫ್ಯಾಕ್ಟರಿಯ
ಮುಂಭಾಗ ಹೋಗುತ್ತಿದ್ದಾಗ ಕೆಎ-54-3426 ನಂಬರಿನ ಟಿಪ್ಪರ್ ಲಾರಿಯ
ಚಾಲಕ ಯಾವುದೇ ಇಂಡಿಕೇಟರ್ ಅಥವಾ ಸೂಚನೆ ನೀಡಿದೆ ಲಾರಿ ಸಡನ್ ಆಗಿ ನಿಲ್ಲಿಸಿದ್ದರಿಂದ ಲಾರಿಯ
ಹಿಂದೆ ಹೋಗುತ್ತಿದ್ದ ನಾಗರಾಜುರವರು ಹಿಂದಿನಿಂದ ಟಿಪ್ಪರ್ ಲಾರಿಗೆ ಡಿಕ್ಕಿ ಮಾಡಿ ಬೈಕ್ ಸಮೇತ
ರಸ್ತೆಯ ಮೇಲೆ ಬಿದ್ದಿದ್ದರಿಂದ ನಾಗರಾಜುರವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾರೆಂದು, ಶ್ರೀ ಗೋಪಾಲ ಬಿನ್ ಬೋರೇಗೌಡ, ಶ್ರೀಕಂಠನಗರ, ಶ್ರವಣಬೆಳಗೊಳ
ಟೌನ್ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
No comments:
Post a Comment