ಪತ್ರಿಕಾ ಪ್ರಕಟಣೆ ದಿನಾಂಕ: 06-07-2018
ಆಟೋ ಪಲ್ಟಿ ವ್ಯಕ್ತಿ ಸಾವು : ದಿನಾಂಕ: 05-07-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು,
ಕಾಳಮ್ಮ ದೇವಸ್ಥಾನದ ಬೀದಿ ವಾಸಿ ಶಶಿಕುಮಾರ ರವರು ಕೆಎ-13-ಸಿ-1129 ರ ಆಪೆ ಗೂಡ್ಸ್ ಆಟೋದಲ್ಲಿ ಶ್ರವಣಬೆಳಗೊಳ
ತಾಲ್ಲೂಕು ಹಡೇನಹಳ್ಳಿ ಗೇಟ್ ಹತ್ತಿರ ಶ್ರವಣಬೆಳಗೊಳ-ಚನ್ನರಾಯಪಟ್ಟಣ ರಸ್ತೆಯಲ್ಲಿ
ಹೋಗುತ್ತಿದ್ದಾಗ ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋದ ಪರಿಣಾಮ ಆಟೋ ಪಲ್ಟಿಯಾಗಿ
ಆಟೋದಿಂದ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶಶಿಕುಮಾರ್
ಬಿನ್ ರಾಜು, 35 ವರ್ಷ ರವರು ಸ್ಥಳದಲ್ಲಿಯೇ
ಮೃತಪಟ್ಟಿರುತ್ತಾರೆಂದು ಶ್ರೀ ಕೆಂಚಪ್ಪ ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹೆಂಗಸು ಕಾಣೆ : ದಿನಾಂಕ: 03-07-2018 ರಂದು ಬೆಳಿಗ್ಗೆ 07-00 ಗಂಟೆ ಸಮಯದಲ್ಲಿ ಹಾಸನ ನಗರ ವಲ್ಲಭಾಯಿರಸ್ತೆ,
2 ನೇ ಕ್ರಾಸ್ ವಾಸಿ ನಾಗಭೂಷಣಗೌಡ ರವರ ಪತ್ನಿ ಸೋನವಿ
ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಸೋನವಿ ರವರ ಪತಿ ಶ್ರೀ ನಾಗಭೂಷಣಗೌಡ ರವರು
ದಿನಾಂಕ: 05-07-2018 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್
ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಸೋನವಿ ಕೊಂ
ನಾಗಭೂಷಣಗೌಡ, 26 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ
ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ಷನ್ ಮೊಹಲ್ಲಾ
ಪೊಲೀಸ್ ಠಾಣೆ ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು.
No comments:
Post a Comment