* * * * * * HASSAN DISTRICT POLICE

Saturday, July 7, 2018

PRESS NOTE : 07-07-2018


ಪ್ರತಿಕಾ ಪ್ರಕಟಣೆ                    ದಿನಾಂಕ: 07-07-2018.

ಕೆಎಸ್ಆರ್ಟಿಸಿ ಬಸ್ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು :    ದಿನಾಂಕ: 06-07-2018 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು, ಅರೇಹಳ್ಳಿ ಗ್ರಾಮದ ಖತೀಬ್ ಖಾನ್ ರವರ ಬಾಬ್ತು ಕೆಎ-46-ಇ-3740 ರ ಬೈಕಿನಲ್ಲಿ ಹಳೇಬೀಡಿನಿಂದ ಅರೇಹಳ್ಳಿಗೆ ಹೋಗಲು ಹಳೇಬೀಡು-ಬೇಲೂರು ರಸ್ತೆಯಲ್ಲಿ ಕಲ್ಲಹಳ್ಳಿ ಗುಡ್ಡದ ಹತ್ತಿರ ಹೋಗುತ್ತಿದ್ದಾಗ ಬೇಲೂರು ಕಡೆಯಿಂದ ಬಂದ ಕೆಎ-18-ಎಫ್-459 ರ ಕೆಎಸ್ಆರ್ಟಿಸಿ ಬಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಖತೀಬ್ ಖಾನ್ ಬಿನ್ ಖಾಲಿದ್ ಖಾನ್, 22 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಯಸೂಫ್ಖಾನ್ ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಆಟೋ ಮರಕ್ಕೆ ಡಿಕ್ಕಿ ಆಟೋದಲ್ಲಿದ್ದ ಒಬ್ಬರ ಸಾವು, ಮೂವರಿಗೆ ಗಾಯ :      ದಿನಾಂಕ: 05/06-07-2018 ರಂದು ರಾತ್ರಿ ಸಮಾರು 12-45 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕು, ಪಂಚನಹಳ್ಳಿ ಹೋಬಳಿ, ಜಿ. ತಿಮ್ಮಾಪುರ ಗ್ರಾಮದ ರಂಗಾನಾಯ್ಕ ರವರು ಗ್ರಾಮದ ಲೋಕೇಶ ಇವರ ಪತ್ನಿ ಮಧು ರವರೊಂದಿಗೆ ದಿಡಗ ಗ್ರಾಮದ ನಂಜಪ್ಪ ರವರ ಮನೆಗೆ ತೆಂಗಿನ ಸಸಿಗಳನ್ನು ಕೆಎ-18-ಸಿ-1757 ರ ಆಪೆ ಆಟೋದಲ್ಲಿ ತುಂಬಿಕೊಂಡು ಹೋಗಿ ವಾಪಸ್ ಊರಿಗೆ ಹೋಗಲು ಡಿ.ಎಂ.ಕುಕರ್ೆ-ಹೊಳಲ್ಕೆರೆ ಮದ್ಯೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ಚಾಲಕ ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡ ಹೋಗಿ ಪುಟ್ಬಾತ್ನಲ್ಲಿದ್ದ ಮರಕ್ಕೆ ಡಿಕ್ಕಿ ಮಾಡಿದ  ಪರಿಣಾಮ ಆಟೋ ಜಖಂಗೊಂಡು ಆಟೋದಲ್ಲಿದ್ದ ಎಲ್ಲರಿಗೂ ಪೆಟ್ಟು ಬಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ರಂಗಾನಾಯ್ಕನಿಗೆ ತುಂಭಾ ಪೆಟ್ಟಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಸೇರಿಸಿ, ವೈದ್ಯರ ಸಲಹೆ ಮೇರೆಗೆ  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮದ್ಯೆ ರಂಗನಾಯ್ಕ, 50 ವರ್ಷ ರವರು ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಲೋಕೇಶ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹುಡುಗಿ ಕಾಣೆ : ದಿನಾಂಕ: 03-07-2018 ರಂದು ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಎಂ.ಹೊಸಕೊಪ್ಪಲು ಗ್ರಾಮದ ಸುರೇಶ ರವರ ಮಗಳು ಪ್ರೀತಿ ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪ್ರೀತಿ ರವರ ತಂದೆ ಶ್ರೀ ಸುರೇಶ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಪ್ರೀತಿ ಬಿನ್ ಸುರೇಶ, 18 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

No comments: