* * * * * * HASSAN DISTRICT POLICE

Saturday, June 23, 2018

PRESS NOTE : 23-06-2018


ಪತ್ರಿಕಾ ಪ್ರಕಟಣೆ                            ದಿನಾಂಕ: 23-06-2018.

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು :      ದಿನಾಂಕ: 22-06-2018 ರಂದು ಮಧ್ಯಾಹ್ನ 03-50 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಸಂಕೋಡನಹಳ್ಳಿ ಗ್ರಾಮದ ಮಲ್ಲಿಕಾಜರ್ುನಸ್ವಾಮಿ ರವರ ಬಾಬ್ತು ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕಿನಲ್ಲಿ ಅರಸೀಕೆರೆ ತಾಲ್ಲೂಕು, ಜಾಜೂರು ಗ್ರಾಮದ ಹತ್ತಿರ ಬಿ.ಹೆಚ್.206 ರಸ್ತೆಯ ಪಕ್ಕದಲ್ಲಿರುವ ವೇ ಬ್ರಿಡ್ಜ್ ಹತ್ತಿರ ಬಾಣಾವರ ಕಡೆಯಿಂದ ಅರಸೀಕೆರೆ ಕಡೆಗೆ ಹೋಗುತ್ತಿದ್ದಾಗ ಬೈಕ್ನ್ನು ಏಕಾಏಕಿ ಬಲಭಾಗಕ್ಕೆ ತಿರುಗುಸುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಬಂದಂತಹ ಕೆಎ-01-ಎಂಕೆ-1080 ರ ಬಿಳಿ ಬಣ್ಣದ ಕಾರು ಚಾಲಕ ತನ್ನ  ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮಲ್ಲಿಕಾರ್ಜುನಸ್ವಾಮಿ ಬಿನ್ ಚಂದ್ರಪ್ಪ, 28 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಮೋಹನ್ಕುಮಾರ್ ಜಿ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಜೂಜಾಡುತ್ತಿದ್ದ 5 ಜನರ ಬಂಧನ, ಬಂಧಿತರಿಂದ 7220/- ನಗದು ವಶ :       ದಿನಾಂಕ: 23-06-2018 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಹಾಸನ ನಗರ ಕೊಲ್ಲಾಪುರದಮ್ಮ ದೇವಸ್ಥಾನದ ಹತ್ತಿರ ಪಿಎಸ್ಐ ಶ್ರೀ ಸುರೇಶ್ ಬೊಪಣ್ಣ, ಪೆನ್ಷನ್ ಮೊಹಲ್ಲಾ ಠಾಣೆ ರವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಿ.ಎಂ. ರಸ್ತೆ, ಆರ್.ಎಂ.ಸಿ ಯಾಡರ್್ನ ಎದುರುಗಡೆ ಇರುವ ಕಾಂತರಾಜು, ರವರ ಕ್ಯಾಂಟೀನ್ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಧು ಬಿನ್ ಕೃಷ್ಣೇಗೌಡ, 30 ವರ್ಷ, ಕ್ರೈಸ್ಟ್ ಶಾಲೆ ಹಿಂಭಾಗ ವಿದ್ಯಾನಗರ, ಹಾಸನ 2) ಶಿವಪ್ರಕಾಶ್ ಬಿನ್ ಲೇಟ್ ಲಕ್ಷ್ಮಣ, 46 ವರ್ಷ, 1 ನೇ ಕ್ರಾಸ್, ವಿದ್ಯಾನಗರ, ಹಾಸನ. 3) ಮಣಿಕಂಠ ಬಿನ್ ರಾಜಶೇಖರ, 34 ವರ್ಷ, 2 ನೇ ಕ್ರಾಸ್, ವಲ್ಲಭಾಯಿ ರಸ್ತೆ, ಹಾಸನ 4) ಹರೀಶ ಬಿನ್ ರಾಮಸ್ವಾಮಿ, 34 ವರ್ಷ, 3 ನೇ ಕ್ರಾಸ್, ಕೆ.ಆರ್.ಪುರಂ, ಹಾಸನ 5) ನಾಗೇಶ ಬಿನ್ ಸಣ್ಣಸ್ವಾಮಿ, 39 ವರ್ಷ, 5 ನೇ ಕ್ರಾಸ್,  ವಿದ್ಯಾನಗರ, ಹಾಸನ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿಟ್ಟಿದ್ದ 7,220/- ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

ಹುಡುಗಿ ಕಾಣೆ :        ದಿನಾಂಕ: 20-06-2018 ರಂದು ಬೆಳಿಗ್ಗೆ 9-45 ಗಂಟೆ ಸಮಯದಲ್ಲಿ ಹಾಸನದ ಬಳೆಗಾರರ ಬೀದಿ, ವಾಸಿ ಶ್ರೀ ಬಲರಾಮ, ರವರ ಮಗಳು ಕು|| ವರ್ಷಿತ ನಮೋ ಹೋಮಿಯೋಪತಿ ಶಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವೆರವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ವಷರ್ಿತಳ ತಾಯಿ ಶ್ರೀಮತಿ ಗೀತಾ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ವಷರ್ಿತಾ ಬಿನ್ ಬಲರಾಮ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಗೋಧಿ ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಈ ಹುಡುಗಿಯ ಬಗ್ಗೆ ಸುಳಿವು  ಸಿಕ್ಕಲ್ಲಿ  ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪರ್ಕಿಸುವುದು.

No comments: