* * * * * * HASSAN DISTRICT POLICE

Friday, June 22, 2018

PRESS NOTE 22-06-2018




                              ಪತ್ರಿಕಾ ಪ್ರಕಟಣೆ                          ದಿನಾಂಕ: 22-06-2018.


ಕಾರು ಡಿಕ್ಕಿ, ಹಸು ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿ ಸಾವು:

      ದಿನಾಂಕ: 21-006-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಸಂಪಿಗೆಮರದಕೊಪ್ಪಲು ಗ್ರಾಮದ ವಾಸಿ ಶ್ರೀ ಹನುಮೇಗೌಡ, ರವರು ಜಮೀನು ಹತ್ತಿರದಿಂದ ಹಸುವನ್ನು ಹೊಡೆದುಕೊಂಡು ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಸಂಪಿಗೆ ಮರದ ಕೊಪ್ಪಲು ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13, ಎಂ-4110 ರ ಓಮ್ನಿನಿ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಹನುಮೇಗೌಡ ರವರಿಗೆ ಮತ್ತು ಹಸುವಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹನುಮೇಗೌಡ ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕಿತ್ಸೆಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಹನುಮೇಗೌಡ ಬಿನ್ ಸಣ್ಣತಮ್ಮೇಗೌಡ, 60 ವರ್ಷ, ಸಂಪಿಗೆಮರದಕೊಪ್ಪಲು ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಟಿ.ಎಸ್. ಶಿವಸ್ವಾಮಿ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: