ಪತ್ರಿಕಾ ಪ್ರಕಟಣೆ ದಿನಾಂಕ: 19-02-2018.
ಅಪರಿಚಿತ
ವಾಹನ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು.
ದಿನಾಂಕ: 17-02-2018 ರಂದು
ರಾತ್ರಿ 10-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಂಕರನಹಳ್ಳಿ ಗ್ರಾಮದ ಧರಣೇಶ ರವರ ಬಾಬ್ತು
ಕೆಎ-13-ಇಎಫ್-0451 ರ ಯಮಹಾ ಬೈಕಿನಲ್ಲಿ ಸಂಬಂಧಿಕರ ಮದುವೆಗೆ ಹೋಗಿ ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು ಹಾಸನ ತಾಲ್ಲೂಕು, ಹನುಮಂತಪುರದ ಕಡೆಗೆ ಹೋಗುವ ಜೋಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ
ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ
ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ
ಫಲಕಾರಿಯಾಗದೆ ಧರಣೇಶ, ಎಸ್.ಜಿ. ಬಿನ್ ಗೋಪಾಲೇಗೌಡ, 29 ವರ್ಷ ರವರು ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ರಂಗಸ್ವಾಮಿ ರವರು ಕೊಟ್ಟ
ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಕೆಎಸ್ಆರ್ ಟಿಸಿ
ಬಸ್ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು
ದಿನಾಂಕ: 19-02-2018 ರಂದು ಬೆಳಗಿನ ಜಾವ 05-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಮಂಜಲಗೂಡು ಗ್ರಾಮದ ನಿಂಗರಾಜು ರವರ
ಬಾಬ್ತು ಕೆಎ-46-ಇ-0319 ರ ಬೈಕಿನಲ್ಲಿ ಆಲೂರು ತಾಲ್ಲೂಕು, ಹೆದ್ದುರ್ಗ ಎನ್ಹೆಚ್-75 ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹೈವೆ ನರ್ಸರಿಯ
ನೇರದ ರಸ್ತೆಯ ಎಡಭಾಗದಲ್ಲಿ ಸಕಲೇಶಪುರ ಕಡೆಯಿಂದ
ಬರುತ್ತಿದ್ದಾಗ ಸಕಲೇಶಪುರ ಕಡೆಯಿಂದ ಬಂದ ಕೆಎ-18-ಎಫ್-624 ರ ಕೆಎಸ್ಆರ್ ಟಿಸಿ ಬಸ್ಸಿನ
ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್
ಸಮೇತ ಬಸ್ಸಿನ ಮುಂಭಾಗದ ಬಂಪರ್ ಅಡಿಗೆ
ಸಿಲುಕಿಕೊಂಡು ನಿಂಗರಾಜು ಬಿನ್ ಚೌಡೇಗೌಡ, 43 ವರ್ಷ ರವರು ಮೃತಪಟ್ಟಿರುತ್ತಾರೆಂದು
ಮೃತರ ಪತ್ನಿ ಶ್ರೀಮತಿ ಮಂಜುಳ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ
ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
No comments:
Post a Comment