ಪತ್ರಿಕಾ ಪ್ರಕಟಣೆ ದಿನಾಂಕ: 18-02-2018.
ಕೆಎಸ್ಆರ್ಟಿಸಿ ಬಸ್ ಬೈಕಿಗೆ ಡಿಕ್ಕಿ
ಬೈಕ್ ಸವಾರ ಸಾವು
ದಿನಾಂಕ: 17-02-2018 ರಂದು ರಾತ್ರಿ 07-20 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಅಡಗೂರು ಗ್ರಾಮದ
ಕೃಷ್ಣೇಗೌಡ ರವರ ಬಾಬ್ತು ಕೆಎ-13-ಇಕೆ-8384 ರ ಟಿವಿಎಸ್ ಜುಪಿಟರ್ ಸ್ಕೂಟಿಯಲ್ಲಿ ಶ್ರವಣಬೆಳಗೊಳದಿಂದ
ಚನ್ನರಾಯಪಟ್ಟಣಕ್ಕೆ ಹೋಗಲು ಚನ್ನರಾಯಪಟ್ಟಣ ಎನ್ ಹೆಚ್-75 ರಸ್ತೆ
ಗದ್ದೆಹಳ್ಳ ಪೆಟ್ರೋಲ್ ಬಂಕ್ ಹತ್ತಿರ
ಹೋಗುತ್ತಿದ್ದಾಗ ಹಿಂದಿನಿಂದ ಅಂದರೆ ಬೆಂಗಳೂರು
ಕಡೆಯಿಂದ ಬಂದ ಕೆಎ-23-ಎಫ್-1014 ರ ಕೆಎಸ್ಆರ್ ಟಿಸಿ ಬಸ್ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ
ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಕೃಷ್ಣೇಗೌಡ @ ಕೃಷ್ಣಪ್ಪ, 60 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗ
ಶ್ರೀ ಮಂಜೇಗೌಡ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹೆಂಗಸು ಕಾಣೆ
ದಿನಾಂಕ: 16-02-2018 ರಂದು ಮಧ್ಯಾಹ್ನ 03-00 ಗಂಟೆ
ಸಮಯದಲ್ಲಿ ಹಾಸನ ಸಿದ್ದಯ್ಯನಗರ ವಾರ್ಡ್ ನಂ. 31 ರ ವಾಸಿ ಶ್ರೀ ವಿಶ್ವನಾಥ ಹೆಚ್.ಎಸ್. ರವರ ಪತ್ನಿ ಶ್ರೀಮತಿ ದಿವ್ಯ ಮನೆಯಿಂದ ಹೊರಗೆ ಹೋದವರು
ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ದಿವ್ಯ ರವರ ಪತಿ ಶ್ರೀ ವಿಶ್ವನಾಥ ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್
ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ದಿವ್ಯ ಕೋಂ
ವಿಶ್ವನಾಥ, 24 ವರ್ಷ,
5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ
ಸುಳಿವು ಸಿಕ್ಕಲ್ಲಿ ಪೆನ್ ಷನ್ ಮೊಹಲ್ಲಾ ಠಾಣೆ ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು.
No comments:
Post a Comment