ಪತ್ರಿಕಾ ಪ್ರಕಟಣೆ ದಿನಾಂಕ:20-02-2018
ಲಾರಿ ಡಿಕ್ಕಿ, ಪಾದಚಾರಿ ಸಾವು.
ದಿನಾಂಕ: 20-02-2018 ರಂದು
ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಹಾಸನದ ಹಾಸನಾಂಬ ವೃತ್ತ, ವಲ್ಲಬಾಯಿ ರಸ್ತೆ ವಾಸಿ ಶ್ರೀ ಮಂಜುನಾಥ್, ರವರು ಹಾಸನ-ಬೇಲೂರು ರಸ್ತೆ, ವಿಜಯನಗರ ಬಡಾವಣೆ ಬಸ್ ನಿಲ್ದಾಣದ ಹತ್ತಿರ ಹಂಮ್ಸ್ ರಸ್ತೆಯ
ಎಡಭಾಗದಿಂದ ರಸ್ತೆಯ ಭಾಗಕ್ಕೆ ರಸ್ತೆಯನ್ನು ದಾಟುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-16 ಬಿ-6036ರ
ಟ್ಯಾಂಕರ್ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕೆಎ-27-ಬಿ- 9320 ರ
ಅಶೋಕ ಲೈಲ್ಯಾಂಡ್ ಲಾರಿಗೆ ಡಿಕ್ಕಿ ಮಾಡಿ ರಸ್ತೆ ದಾಟುತ್ತಿದ್ದ ಶ್ರೀ ಮಂಜುನಾಥ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹೆಚ್.ಆರ್. ಮಂಜುನಾಥ
ಬಿನ್ ರಂಗಸ್ವಾಮಿ,
38 ವರ್ಷ, ವಲ್ಲಬಾಯಿ ರಸ್ತೆ, ಹಾಸನ ರವರಿಗೆ
ತೀವ್ರ ಸ್ವರೂಪ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಹೆಚ್.
ಆರ್. ಪ್ರಸನ್ನ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment