ಪತ್ರಿಕಾ ಪ್ರಕಟಣೆ ದಿನಾಂಕ: 30-11-2017
ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ
ಟ್ರ್ಯಾಕ್ಟರ್ ವಶ:
ದಿನಾಂಕ: 29-11-2017
ರಂದು ಸಂಜೆ 6-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ
ತಾಲ್ಲೂಕು, ಕಸಬಾ ಹೋಬಳಿ, ಜನಿವಾರ ಗ್ರಾಮದ ಹತ್ತಿರ ಟ್ರ್ಯಾಕ್ಟರ್ನಲ್ಲಿ ಮರಳು ತುಂಬಿಕೊಂಡು
ಹೋಗುತ್ತಿದ್ದಾರೆಂದು ಶ್ರೀ ಎಸ್.ಪಿ. ವಿನೋದ್ರಾಜ್, ಪಿಎಸ್ಐ, ಚನ್ನರಾಯಪಟ್ಟಣ ನಗರ ಠಾಣೆ ರವರಿಗೆ ಬಂದ
ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ
ಅಕ್ರಮವಾಗಿ ನೊಂದಣಿಯಿಲ್ಲದ ಟ್ರ್ಯಾಕ್ಟರ್ನಲ್ಲಿ ಮರಳು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು
ವಿಳಾಸ ಕೇಳಲಾಗಿ ಸ್ವಾಮಿ ಬಿನ್ ಪುಟ್ಟಸ್ವಾಮಿ, 24
ವರ್ಷ, ಪಿ. ದಾಸಪುರ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು
ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಟ್ರ್ಯಾಕ್ಟರ್ ಸಮೇತ ಮರಳನ್ನು ಅಮಾನತ್ತುಪಡಿಸಿಕೊಂಡು
ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಗಂಡಸು ಕಾಣೆ
ದಿನಾಂಕ: 15-11-2017
ರಂದು ಮಧ್ಯಾಹ್ನ 12-00 ಗಂಟೆಗೆ ಸಕಲೇಶಪುರ ಪಟ್ಟಣದ ಕುಶಾಲನಗರ
ಬಡಾವಣೆ ವಾಸಿ ಶ್ರೀ ಸುರೇಶ್, ರವರು ಮನೆಯಿಂದ ಹೊರಗೆ ಹೋದವರು
ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಸುರೇಶ್, ರವರ ಮಗ ಶ್ರೀ ಕಿರಣ್, ರವರು ದಿನಾಂಕ: 15-11-2017 ರಂದು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಸುರೇಶ್ ಬಿನ್
ಪಾಂಡುರಂಗಯ್ಯ, 42 ವರ್ಷ, 5'6 ಅಡಿ ಎತ್ತರ, ಗೋಧಿಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ
ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.
ಹೆಂಗಸು ಕಾಣೆ
ದಿನಾಂಕ: 23-11-2017
ರಂದು ಬೆಳಿಗ್ಗೆ 10-30 ಗಂಟೆಗೆ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ತಾಂಡ್ಯ ಗ್ರಾಮದ ವಾಸಿ ಧನಂಜಯನಾಯ್ಕ್, ರವರ ಪತ್ನಿ ಶ್ರೀಮತಿ ರೇಖಾ, ರವರು ಮನೆಯಿಂದ ಹೊರಗೆ ಹೋದವರು
ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ರೇಖಾ, ರವರ ಪತಿ ಶ್ರೀ ಧನಂಜಯನಾಯ್ಕ್, ರವರು ದಿನಾಂಕ: 29-11-2017 ರಂದು ಕೊಟ್ಟ ದೂರಿನ ಮೇರೆಗೆ ಬಾಣಾವರ
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ರೇಖಾ ಕೋಂ
ಧನಂಜಯನಾಯ್ಕ್, 21 ವರ್ಷ, 4'5' ಅಡಿ ಎತ್ತರ, ದುಂಡು ಮುಖ, ಸಾಧಾರಣಾ ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪು
ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಹಸಿರು ಬಣ್ಣದ ಜಕರ್ಿನ್ ಧರಿಸಿರುತ್ತಾರೆ. ಈ
ಹೆಂಗಸಿನ ಸುಳಿವು ಸಿಕ್ಕಲ್ಲಿ 08174-235633 ಕ್ಕೆ ಸಂಪರ್ಕಿಸುವುದು.
No comments:
Post a Comment