ಪತ್ರಿಕಾ ಪ್ರಕಟಣೆ
ದಿನಾಂಕ: 29-11-2017
ಮಹೇಂದ್ರ ಬುಲೆರೋ ಮತ್ತು ಇಟಿಎಸ್ ವಾಹನ ಡಿಕ್ಕಿ
ಪಾದಾಚಾರಿ ಮಹಿಳೆ ಸಾವು
ದಿನಾಂಕ: 28-11-2017 ರಂದು ಸಂಜೆ 06-15 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ತಿರುಪತಿಹಳ್ಳಿ ಗ್ರಾಮದ ಗಿರಿಜಮ್ಮ @ ಸಣ್ಣಮ್ಮ ರವರು ಅರಸೀಕೆರೆ-ಮೈಸೂರು ರಸ್ತೆ, ತಿರುಪತಿಹಳ್ಳಿ ಗ್ರಾಮದ ಹತ್ತಿರ ರಸ್ತೆಯನ್ನು ದಾಟುತ್ತಿದ್ದಾಗ ಅರಸೀಕೆರೆ ಕಡೆಯಿಂದಬಂದ ಕೆಎ-32-ಎನ್-0449 ರ ಮಹೇಂದ್ರ ಬುಲೆರೋ ವಾಹನದ ಚಾಲಕನು
ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ್ದು, ಗಿರಿಜಮ್ಮ ರವರು ರಸ್ತೆಯ ಮೇಲೆ ಬಿದ್ದಾಗ
ಅದೇ ವೇಳೆಗೆ ಗಂಡಸಿ ಕಡೆಯಿಂದ ಬಂದ ಯಾವುದೋ ಇಟಿಎಸ್ ವಾಹನದ ಚಾಲಕ ಗಿರಿಜಮ್ಮ ರವರ ಮೇಲೆ ಹತ್ತಿಸಿಕೊಂಡು ನಿಲ್ಲಿಸದೇ
ಹೋಗಿದ್ದು, ಗಿರಿಜಮ್ಮ @ ಸಣ್ಣಮ್ಮ, 60 ವರ್ಷ ರವರಿಗೆ ತಲೆ, ಹೊಟ್ಟೆ
ಮತ್ತು ಕೈಕಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು
ಪ್ರತ್ಯಕ್ಷದರ್ಶಿ ಶ್ರೀ. ಜಗದೀಶ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ಕ್ರಮ ಕೈಗೊಂಡಿರುತ್ತದೆ.
ತಾಯಿ ಮಕ್ಕಳೊಂದಿಗೆ ಕಾಣೆ
ದಿನಾಂಕ: 13-11-2017
ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಹಾಸನದ ಅಂಬೇಡ್ಕರ್
ನಗರದ ವಾಸಿ ಶ್ರೀ ಮುಷೀರ್ ಪಾಷ್,
ರವರ ಪತ್ನಿ
ಶ್ರೀಮತಿ ಯಾಸ್ಮಿನ್, ಮಕ್ಕಳಾದ
ಕು|| ನೂರ್ ಫಾತಿಮಾ ಮತ್ತು ರೆಹಾನ್ ಪಾಷ, ರವರೊಂದಿಗೆ ಮನೆಯಿಂದ ಹೊರೆಗೆ ಹೋದವರು
ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ
ಯಾಸ್ಮಿನ್, ರವರ ಪತಿ ಶ್ರೀ ಮುಷೀರ್ ಪಾಷ್, ರವರು ದಿನಾಂಕ: 28-11-2017 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್
ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ವಿವರ: 1) ಶ್ರೀಮತಿ ಯಾಸ್ಮಿನ್ ಕೋಂ ಮುಷೀರ್ ಪಾಷ, 32 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ
ಚೂಡಿದಾರ ಧರಿಸಿರುತ್ತಾರೆ. 2)
ರೆಹಾನ್ ಪಾಷ
ಬಿನ್ ಮುಷೀರ್ ಪಾಷ, 9 ವರ್ಷ 3) ನೂರ್ ಫಾತಿಮಾ ಬಿನ್ ಮುಷೀರ್ ಪಾಷ, 10 ವರ್ಷ, ಕನ್ನಡ ಮತ್ತು ಉರ್ದು ಭಾಷೆ
ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ಷನ್ ಮೊಹಲ್ಲಾ ಠಾಣೆ ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು.
No comments:
Post a Comment