ಪತ್ರಿಕಾ
ಪ್ರಕಟಣೆ ದಿನಾಂಕ: 29-12-2017.
ಬೈಕ್ ಮರಕ್ಕೆ ಡಿಕ್ಕಿ ಬೈಕ್ ಸವಾರನ ಸಾವು
: ದಿನಾಂಕ: 28-12-2017
ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ಅಕ್ಕಿಹಬ್ಬಾಳು
ಹೋಬಳಿ, ಅಲಾಂಬಡಿ ಕಾವಲು ಗ್ರಾಮದ ಸೋಮಶೇಖರ್ ಪಿ ರವರು
ಹೊಳೆನರಸೀಪುರ ತಾಲ್ಲೂಕು ಬಾಗೀವಾಳು ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಊರಿಗೆ ಹೋಗಲು
ತಮ್ಮ ಬಾಬ್ತು ನಂಬರ್ ಇಲ್ಲದ ಮೋಟಾರ್ ಬೈಕಿನಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು
ಹೋಬಳಿ, ದೊಡ್ಡಹಳ್ಳಿ ಗ್ರಾಮದ ಹತ್ತಿರ
ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ಬಲಬದಿಯ
ಹತ್ತಿರವಿರುವ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸೋಮಶೇಖರ್ ಪಿ.,
51 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು
ಮೃತರ ಮಗ ಶ್ರೀ ಲಲ್ಲು ಶೇಖರ್ ಎ.ಎಸ್. ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಮನುಷ್ಯ ಕಾಣೆ :
ದಿನಾಂಕ; 12-05-2017 ರಂದು ಹಾಸನದ ಶ್ರೀನಗರ ವಾಸಿ ಜಮೃದ್ಖಾನ್ ರವರು ಮನೆಯಿಂದ ಹೋದವರು ವಾಪಸ್ ಮನೆಗೆ
ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಜಮೃದ್ಖಾನ್ ರವರ ತಂದೆ ಶ್ರಿ
ಗೌಸ್ಖಾನ್ ರವರು ದಿನಾಂಕ: 28-12-2017 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ:
ಜಮೃದ್ ಖಾನ್ ಬಿನ್ ಗೌಸ್ ಖಾನ್, 36 ವರ್ಷ, 5'6'' ಅಡಿ ಎತ್ತರ, ಕನ್ನಡ ಮತ್ತು ಉದರ್ು ಭಾಷೆ ಮಾತನಾಡುತ್ತಾರೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333
ಕ್ಕೆ ಸಂಪರ್ಕಿಸುವುದು.
No comments:
Post a Comment