ಪತ್ರಿಕಾ ಪ್ರಕಟಣೆ ದಿನಾಂಕ: 30-12-2017
ಕೆಎಸ್ಆರ್ಟಿಸಿ ಹರಿದು ಬೈಕ್ ಚಾಲಕ ಸಾವು : ದಿನಾಂಕ:
29-12-2017 ರಂದು ಸಂಜೆ 6-20 ಗಂಟೆ ಸಮಯದಲ್ಲಿ
ಅರಸೀಕೆರೆ ತಾಲ್ಲೂಕು, ಜೇನುಕಲ್ಲು ಸಿದ್ದಾಪುರ ಗ್ರಾಮದ ವಾಸಿ ಶ್ರೀ
ಚಂದ್ರಪ್ಪ, ರವರು ಕೆಎ-04 ಹೆಚ್ಯು-4626 ರ ಪಲ್ಸರ್ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಅರಸೀಕೆರೆ-ಹಾಸನ
ರಸ್ತೆ, ಗೀಜಿಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್ಸನ್ನು ಓವರ್
ಟೇಕ್ ಮಾಡಿಕೊಂಡು ಪಿರ್ಯಾದಿ ಶ್ರೀ ದಯಾನಂದ, ರವರ ಬೈಕ್ಗೆ ಡಿಕ್ಕಿ, ಮಾಡಿ
ಪರಿಣಾಮ ಶ್ರೀ ಚಂದ್ರಪ್ಪ, ರವರು ಬೈಕ್ ಸಮೇತ ರಸ್ತೆಗೆ ಬಿದ್ದ ತಕ್ಷಣ ಅರಸೀಕೆರೆ
ಕಡೆಯಿಂದ ಬಂದ ಕೆಎಸ್ಆರ್ಟಿಸಿ ಬಸ್ಸ್ ಆತನ ಮೇಲೆ ಹರಿದು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ
ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ ಶ್ರೀ
ಚಂದ್ರಪ್ಪ ಬಿನ್ ಲೇಟ್ ಬಸಪ್ಪ, ಜೇನುಕಲ್ಲು ಸಿದ್ದಾಪುರ ಗ್ರಾಮ, ಅರಸೀಕೆರೆ
ತಾಲ್ಲೂಕು ರವರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಪ್ರತ್ಯಕ್ಷದರ್ಶಿ ಶ್ರೀ
ದಯಾನಂದ, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗ ಕಾಣೆ ದಿನಾಂಕ: 22-12-2017 ರಂದು ಸಕಲೇಶಪುರ
ತಾಲ್ಲೂಕು, ಹೆಬ್ಬಸಾಲೆ ಗ್ರಾಮದ ವಾಸಿ ಶ್ರೀ ಗಿರೀಶ್, ರವರು
ರಾತ್ರಿ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ ಎದ್ದು ನೋಡಲಾಗಿ ಮನೆಯಲ್ಲಿ
ಇರಲಿಲ್ಲ, ಎಲ್ಲಾ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀ ಗಿರೀಶ್ನ ಅಣ್ಣ ಶ್ರೀ ಹರೀಶ್, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಶ್ರೀ ಗಿರೀಶ್ ಬಿನ್ ಕುಮಾರ್, 20 ವರ್ಷ, 5 ಅಡಿ
ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ
ಹೋಗುವಾಗ ನೀಲಿ ಬಣ್ಣದ ಶರ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗನ ಸುಳಿವು
ಸಿಕ್ಕಲ್ಲಿ 08173-244100 ಕ್ಕೆ ಸಂಪರ್ಕಿಸುವುದು.
No comments:
Post a Comment