ಪತ್ರಿಕಾ ಪ್ರಕಟಣೆ ದಿನಾಂಕ: 28-12-2017
ಮಟ್ಕಾ-ಜೂಜಾಡುತ್ತಿವನ ಬಂಧನ, ಬಂಧಿತನಿಂದ ಸುಮಾರು 1,220/- ನಗದು ವಶ:
ದಿನಾಂಕ: 27-12-2107 ರಂದು
ಮಧ್ಯಾಹ್ನ 12-30 ಗಂಟೆ
ಸಮಯದಲ್ಲಿ ಹಾಸನದ ಹೊಸಲೈನ್ ರಸ್ತೆಯಲ್ಲಿರುವ
ಸುಮಂತ,
ರವರ ಕ್ಯಾಂಟೀನ್ ಮುಂಭಾಗದಲ್ಲಿರುವ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಡುತ್ತಿದ್ದಾರೆಂದು
ಶ್ರೀ ಡಿ. ಸತೀಶ್,
ಪಿಐ,
ಸಿಇಎನ್,
ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ಮಟ್ಕಾ-ಜೂಜಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರಂಜು ಬಿನ್ ಕೆ.ಬಿ.
ಕಾಳಪ್ಪ,
21 ವರ್ಷ,
ಕ್ಯಾಂಟೀನ್ ಕೆಲಸ, ಬನಶಂಕರಿ ಕಲ್ಯಾಣ ಮಂಟಪದ ಹತ್ತಿರ ವಲ್ಲಭಾಯಿ ರಸ್ತೆ, ಹಾಸನ ಎಂದು
ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,220/-ನಗದನ್ನು
ಅಮಾನತ್ತುಪಡಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ
ಬೈಕ್ಗೆ ಬೈಕ್ ಡಿಕ್ಕಿ, ಒಂದು ಸಾವು ಒಬ್ಬರಿಗೆ ಸಾವು
ದಿನಾಂಕ: 27-12-2017 ರಂದು
ಬೆಳಿಗ್ಗೆ 11-00 ಗಂಟೆ
ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಚೀರನಹಳ್ಳಿ
ಹೊಸೂರು ಗ್ರಾಮದ ವಾಸಿ ಶ್ರೀ ಕೇಶವಶೆಟ್ಟಿ ರವರ ಬಾಬ್ತು ಕೆಎ-13 ಇಎ-965 ರ ಬೈಕ್ನಲ್ಲಿ
ಅಕ್ಕನ ಮಗಳಾದ ಕು||
ಕಲ್ಪನಾಳನ್ನು ಕೂರಿಸಿಕೊಂಡು ಅಣ್ಣೇನಹಳ್ಳಿ ಗ್ರಾಮಕ್ಕೆ ಹೋಗಲು, ಚನ್ನರಾಯಪಟ್ಟಣ
ತಾಲ್ಲೂಕು,
ದಂಡಿಗನಹಳ್ಳಿ ಹೋಬಳಿ, ಅಣ್ಣೇನಹಳ್ಳಿ ಗೇಟ್, ಎನ್ ಹೆಚ್-75, ಬಿ.ಎಂ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13 ಇಎ-965 ರ ಬೈಕ್
ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ
ಶ್ರೀ ಕೇಶವಶೆಟ್ಟಿ ಬಿನ್ ದೊಡ್ಡಯ್ಯಶೆಟ್ಟಿ, 25 ವರ್ಷ, ಚೀರನಹಳ್ಳಿ ಹೊಸೂರು ಗ್ರಾಮ, ದುದ್ದ ಹೋಬಳಿ, ಹಾಸನ
ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ
ಗಾಯಗೊಂಡ ಕು||
ಕಲ್ಪನಾ,
ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿಕರಾದ
ಶ್ರೀ ಧರ್ಮಶೆಟ್ಟಿ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 3,403/- ಬೆಲೆಯ ಮದ್ಯ ವಶ:
ದಿನಾಂಕ: 27-12-2017 ರಂದು
ಬೆಳಿಗ್ಗೆ 11-00 ಗಂಟೆ
ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಉಳ್ಳೇನಹಳ್ಳಿ
ಸೇತುವೆ ಹತ್ತಿರ ಯಾರೋ ಒಬ್ಬ ವ್ಯಕ್ತಿ ಬ್ಯಾಗಿನಲ್ಲಿ ಮದ್ಯ ಪಾಕೇಟ್ಗಳನ್ನು ತೆಗೆದುಕೊಂಡು
ಹೋಗುತ್ತಿದ್ದಾರೆಂದು ಶ್ರೀ ರಾಜನಾಯ್ಕ್, ಪಿಎಸ್ಐ, ಕೊಣನೂರು
ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು
ವಿಳಾಸ ಕೇಳಲಾಗಿ ಶ್ರೀ ಕುಮಾರ ಬಿನ್ ಮಾಳೇಗೌಡ, 36 ವರ್ಷ, ಸೀಗೋಡು
ಗ್ರಾಮ,
ಸಾಲಿಗ್ರಾಮ ಹೋಬಳಿ, ಕೆ.ಆರ್. ನಗರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸುಮಾರು 3,403/- ಬೆಲೆಯ 121 ಟೆಟ್ರಾ
ಪ್ಯಾಕೇಟ್ ಗಳನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಮನುಷ್ಯ ಕಾಣೆ
ದಿನಾಂಕ:
23-10-2017 ರಂದು
ಬೆಳಿಗ್ಗೆ 9-00 ಗಂಟೆ
ಸಮಯದಲ್ಲಿ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಮಂದಿರ ಗ್ರಾಮದ ವಾಸಿ ಶ್ರೀ ಪುಟ್ಟಣ್ಣಯ್ಯ, ರವರು ವೈದ್ಯಾಪ್ಪ ವೇತನವನ್ನು ನೋಡಿಕೊಂಡು ಬರಲು ಬ್ಯಾಡರಹಳ್ಳಿ ಗ್ರಾಮದ ವಾಸಿ ಶ್ರೀ
ಸೋಮಶೇಖರ್, ರವರ
ಬೈಕ್ನಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿದ್ದು, ವಾಪಸ್ ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಪುಟ್ಟಣ್ಣಯ್ಯ, ರವರ ಸಂಬಂಧಿಕರಾದ ಶ್ರೀ ಬಸವಲಿಂಗಪ್ಪ, ರವರು
ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ
ಹೆಂಗಸಿನ ಚಹರೆ: ಶ್ರೀ ಪುಟ್ಟಣ್ಣಯ್ಯ, 75 ವರ್ಷ, 5 ಅಡಿ
ಎತ್ತರ, ಎಣ್ಣೆಗೆಂಪು
ಬಣ್ಣ, ಸಾಧಾರಾಣ
ಮೈಕಟ್ಟು, ಮನೆಯಿಂದ
ಹೋಗುವಾಗ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-225475 ಕ್ಕೆ
ಸಂಪರ್ಕಿಸುವುದು.
No comments:
Post a Comment