* * * * * * HASSAN DISTRICT POLICE

Tuesday, December 26, 2017

PRESS NOTE 25-12-2017

                                         

                                          ಪತ್ರಿಕಾ ಪ್ರಕಟಣೆ                                    ದಿನಾಂಕ:25-12-2017

ಟ್ರಾಕ್ಟರ್ ಮಗುಚಿ ಒಂದು ಸಾವು :
 ದಿನಾಂಕ: 24-12-2017 ರಂದು ಮಧ್ಯಾಹ್ನ 1.00  ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕ್ ಅಂಜನಹೊಸಳ್ಳಿಗ್ರಾಮದ ರಾಮಚಂದ್ರೇಗೌಡರ ಮಗ ಮಹೇಶ ಮತ್ತು ಕೆಎ-13-ಟಿಬಿ-5694-95 ರ ಟ್ರಾಕ್ಟರ್ ಚಾಲಕ ಇಬ್ಬರು  ಅಂಜನಹೊಸಳ್ಳಿಯಿಂದ ಮುದುಗನೂರಿಗೆ ಕ್ರಷರ್ನಿಂದ ಜಲ್ಲಿ ತರಲು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಅಂದರೆ ಸುಬ್ಬೇಗೌಡರ ಜಮೀನಿನ ಹತ್ತಿರ ರಸ್ತೆಯಲ್ಲಿ ಟ್ರಾಕ್ಟರ್ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಟ್ರಾಕ್ಟರ್ ಮಗುಚಿದ ಕಾರಣ ಮಹೇಶ ಬಿನ್ ರಾಮಚಂದ್ರೇಗೌಡ, 28ವರ್ಷ, ಅಂಜನಹೊಸಳ್ಳಿಗ್ರಾಮ, ಅರಕಲಗೂಡು ತಾಲ್ಲೂಕ್ ರವರು ಸ್ಥಳದಲ್ಲಿ ಮೃತಪಟ್ಟಿರುತ್ತಾರೆಂದು ಮೃತರ ತಂದೆ ರಾಮಚಂದ್ರೇಗೌಡ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.
ಬೈಕಿಗೆ ಹಾಲಿನ ಗೂಡ್ಸ್ ವಾಹನ ಡಿಕ್ಕಿ ಬೈಕ್ ಚಾಲಕ ಸಾವು :
ದಿನಾಂಕ: 24-12-2017 ರಂದು ಸಂಜೆ 7.30  ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕ್ ಉಗನೆಹಳ್ಳಿಗ್ರಾಮದ ವಾಸಿ ಕಾಂತರಾಜು ರವರ ಅಕ್ಕನ ಮಗ ರಂಜಿನ್ ತನ್ನ ಬಾಬ್ತು ಕೆಎ-13-ಇಜೆ-6657 ರ ಬೈಕಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ವಾಪಸ್ಸು ಹಾಸನಕ್ಕೆ ಬರಲು ಕಾಂತರಾಜು ರವರ ಮಗ ರಕ್ಷಿತನನ್ನು ಬೈಕಿನ ಹಿಂಭಾಗದಲ್ಲಿ ಕೂರಿಸಿಕೊಂಡು ಬೇಲೂರು ಹಾಸನ ರಸ್ತೆ ಸಂಕೇನಹಳ್ಳಿ ರಸ್ತೆ ಕ್ರಾಸ್ ಹತ್ತಿರ ಹಾಸನ ಕಡೆಯಿಂದ ಅಂದರೆ ಎದುರುಗಡೆಯಿಂದ ಕೆಎ-04-ಟಿಆರ್-001321 ಟೆಂಪ್ರವರಿ ನಂಬರಿನ ಹಾಲಿನ ಗೂಡ್ಸ್ ವಾಹನದ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರು ರಸ್ತೆ ಮೇಲೆ ಬಿದ್ದಾಗ ಚಿಕಿತ್ಸೆಗೆಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ರಂಜಿತ ಬಿನ್ ರವಿಕುಮಾರ, 22 ವರ್ಷ, ಕಸಿಗೆ, ಚಿಕ್ಕಮಗಳೂರು ಜಿಲ್ಲೆ ರವರು ಮೃತಪಟ್ಟಿರುತ್ತಾರೆಂದು ಮೃತರ ಮಾವ ಕಾಂತರಾಜು ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

ಜೂಜಾಡುತ್ತಿದ್ದ 5 ಜನರ ಬಂಧನ 5523/- ನಗದು ವಶ
      ದಿನಾಂಕ:24-12-2017 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಹಾಸನ ನಗರದ ಜಿ.ಎಂ.ಶಾಲೆಯ ಎದುರು ಇರುವ ಕಬರ್ಸ್ಥಾನದ ಖಾಲಿ ಜಾಗದಲ್ಲಿ ಲೈಟ್ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಪೆನ್ಷನ್ಮೊಹಲ್ಲಾ ಠಾಣೆಯ ಎಎಸ್ಐ ಶ್ರೀ.ಚಿಕ್ಕಣ್ಣ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಹೆಸರು ವಿಳಾಸ ಕೇಳಲಾಗಿ 1) ಸುಹಿಲ್ ಪಾಷ ಬಿನ್ ಮಮ್ತಾಜ್ ಅಹಮದ್, 36ವರ್ಷ, ಮಟನ್ ಮಾಕರ್ೆಟ್, ಹಾಸನ  2) ಮುನ್ನಾ ಬಿನ್ ದಸ್ತಗಿರ, 30ವರ್ಷ, ಮಟನ್ ಮಾಕರ್ೆಟ್, ಹಾಸನ  3) ಕಬೀರ್ ಬಿನ್ ಅಬ್ದುಲ್ ರೋಪ್, 30ವರ್ಷ, ಮೆಹಬೂಬ್ನಗರ, ಹಾಸನ 4) ಸುಹಿಲ್ ಬಿನ್ ಮಹಮದ್ ಪೀರ್, 38ವರ್ಷ, ಮಟನ್ ಮಾಕರ್ೆಟ್, ಹಾಸನ  5) ಬಾಬು ಬಿನ್ ಮಹಮದ್ ಗೌಸ್, 48ವರ್ಷ, ಮಟನ್ ಮಾಕರ್ೆಟ್, ಹಾಸನ  ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ  5523=00 ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಜೂಜಾಡುತ್ತಿದ್ದ 5 ಜನರ ಬಂಧನ 1100/- ನಗದು ವಶ


      ದಿನಾಂಕ:24-12-2017 ರಂದು ಸಂಜೆ 5.30 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಗುಂಡ್ಕಾನಹಳ್ಳಿ ರೈಲ್ವೆ ಟ್ರಾಕ್ ಹತ್ತಿರ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಅರಸೀಕೆರೆ ನಗರ ಠಾಣೆಯ ಪಿಐ ಶ್ರೀ.ಪ್ರಭಾಕರ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಹೆಸರು ವಿಳಾಸ ಕೇಳಲಾಗಿ 1)ಸತ್ತಾರ್ ಬಿನ್ ರಹೀಂಸಾಬ್, 34ವರ್ಷ, ಜೇನುಕಲ್ ನಗರ, ಅರಸೀಕೆರೆ  2) ಜಮೀಲ್ಪಾಷ ಬಿನ್ ಮಹಮದ್ ರಸೂಲ್ಸಾಬ್, 29ವರ್ಷ, ಮುಜಾವರ್ಮೊಹಲ್ಲಾ, ಅರಸೀಕೆರೆ 3) ಮೆಹಬೂಬ್ಪಾಷ ಬಿನ್ ಮಹಮದ್ ಇಸಾಕ್, 34ವರ್ಷ, ಮುಜಾವರ್ಮೊಹಲ್ಲಾ, ಅರಸೀಕೆರೆ 4) ಬಾಬು ಬಿನ್ ಸೈಯದ್ ಖಲಂದರ್, 34ವರ್ಷ, ಮುಜಾವರ್ಮೊಹಲ್ಲಾ, ಅರಸೀಕೆರೆ 5) ಮಂಜುನಾಥ ಬಿನ್ ಕರೀಗೌಡ, 47ವರ್ಷ, ಕಂತೇನಹಳ್ಳಿ, ಅರಸೀಕೆರೆ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ  1100=00 ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: