* * * * * * HASSAN DISTRICT POLICE

Tuesday, December 26, 2017

PRESS NOTE 26-12-2017

                                                          

                                                            ಪತ್ರಿಕಾ ಪ್ರಕಟಣೆ                      ದಿನಾಂಕ: 26-12-2017

ಬೈಕ್ಗೆ ಬೈಕ್ ಡಿಕ್ಕಿ, ಒಬ್ಬನ ಸಾವು, ಒಬ್ಬರಿಗೆ ಗಾಯ:

ದಿನಾಂಕ: 24-12-2107 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಸಿಗರನಹಳ್ಳಿ ಗ್ರಾಮದ ವಾಸಿ ಶ್ರೀ ಲೋಕೇಶ್, ರವರು ಸ್ನೇಹಿತರಾದ ಶ್ರೀ ವಿಜಯ್ಕುಮಾರ್, ರವರ ಬಾಬ್ತು ಕೆಎ-13 ಇಹೆಚ್-5103 ರ ಬೈಕ್ನಲ್ಲಿ ಹೊಳೆನರಸೀಪುರ ತಾಲ್ಲೂಕು, ಹಾಸನ-ಮೈಸೂರು ರಸ್ತೆ, ನ್ಯಾಮನಹಳ್ಳಿ ಗ್ರಾಮ ಕ್ರಶರ್ ಹತ್ತಿರ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಮಾಡಿದ  ಪರಿಣಾಮ ಶ್ರೀ ಲೋಕೇಶ್ ಮತ್ತು ಶ್ರೀ ವಿಜಯ ಕುಮಾರ್, ರವರು ಬೈಕ್ ಸಮೇತ ಕೆಳಕ್ಕೆ ಬಿದಿದ್ದು, ಶ್ರೀ ಲೋಕೇಶ್ ಬಿನ್ ವೆಂಕಟೇಶ್, 22ವರ್ಷ, ಸಿಗರನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಗಾಯಗೊಂಡ ಶ್ರೀ ವಿಜಯ ಕುಮಾರ್, ರವರು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಶ್ರೀಧರ್, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ



ದಿನಾಂಕ: 18-12-2017 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಚನ್ನರಾಯಪ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಕೋಡಿಬೆಳಗೊಳ ಗ್ರಾಮದ ವಾಸಿ ಶ್ರೀಮತಿ ಕಮಲಮ್ಮ, ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಕಮಲಮ್ಮ, ರವರ ಪತಿ ಶ್ರೀ ರಾಮಚಂದ್ರಯ್ಯ, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಕಮಲಮ್ಮ ಕೋಂ ರಾಮಚಂದ್ರಯ್ಯ, 55 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣ ಸೀರೆ ಮತ್ತು ರವಿಕೆ ಧಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪಕರ್ಿಸುವುದು.

No comments: