ಪತ್ರಿಕಾ
ಪ್ರಕಟಣೆ ದಿನಾಂಕ: 24-12-2017
ಜೂಜಾಡುತ್ತಿದ್ದ 5 ಜನರ
ಬಂಧನ, ಬಂಧಿತರಿಂದ 750/- ನಗದು ವಶ
ದಿನಾಂಕ: 23-12-2017 ರಂದು ಮಧ್ಯಾಹ್ನ 12-45
ಗಂಟೆ ಸಮಯದಲ್ಲಿ ಹಾಸನ ನಗರ ಬೈಪಾಸ್ ರಸ್ತೆಯಿಂದ
ಭೂವನಹಳ್ಳಿಗೆ ಹೋಗುವ ರಸ್ತೆಯ ಬದಿ ಇರುವ ಕುಮಾರ್ ರವರ ಕೋಳಿ ಫಾರಂ ಹತ್ತಿರ ಖಾಲಿ ಜಾಗದ
ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣವನ್ನು
ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಹರೀಶ್ ಕೆ.ಎನ್.
ಬಡಾವಣೆ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ
ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1)ಸ್ವಾಮಿ ಬಿನ್ ದೇವರಾಜೇಗೌಡ,
33 ವರ್ಷ, ಬೂವನಹಳ್ಳಿ ಗ್ರಾಮ 2) ಸುನಿಲ್ ಬಿನ್ ಶ್ರೀಕಂಠಪ್ಪ, 24 ವರ್ಷ ಬೂವನಹಳ್ಳಿ ಗ್ರಾಮ 3) ಪ್ರದೀಪ ಬಿನ್ ಮಂಜೇಗೌಡ, 34 ವರ್ಷ, ಬೂವನಹಳ್ಳಿ ಗ್ರಾಮ 4) ಪ್ರಕಾಶ್ ಬಿನ್
ಚನ್ನೇಗೌಡ, 36 ವರ್ಷ ಬೂವನಹಳ್ಳಿ ಗ್ರಾಮ 5) ರಘು ಬಿನ್
ಸುಬ್ಬೇಗೌಡ 34 ವರ್ಷ ದೊಡ್ಡಹೊನ್ನೇನಹಳ್ಳಿ ಗ್ರಾಮ ಎಲ್ಲರೂ ಹಾಸನ ತಾಲ್ಲೂಕು ಎಂದು
ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು
ಜೂಜಾಟದಲ್ಲಿಟ್ಟಿದ್ದ 750/- ನಗದನ್ನು
ಅಮಾನತ್ತುಪಡಿಸಿಕೊಂಡು ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
No comments:
Post a Comment