* * * * * * HASSAN DISTRICT POLICE

Tuesday, December 26, 2017

PRESS NOTE 23-12-2017

                                   

                                   ಪತ್ರಿಕಾ ಪ್ರಕಟಣೆ                     ದಿನಾಂಕ: 23-12-2017.

ಯಾವುದೋ ಕಾರು ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು

        ದಿನಾಂಕ: 23-12-2017 ರಂದು ಬೆಳಿಗ್ಗೆ 06-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಪಿಳ್ಳಳ್ಳಿ ಗ್ರಾಮದ ವಾಸಿ ವಸಂತಕುಮಾರ್ ರವರು ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಪಿಳ್ಳಳ್ಳಿ-ಕಲ್ಲೇನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಜಮೀನಿನ ಹತ್ತಿರ ಹೋಗಲು ನಡೆದುಕೊಂಡು ಹೋಗುತ್ತಿದ್ದಾಗ  ಕಲ್ಲೇನಹಳ್ಳಿ ಗೇಟ್ ಕಡೆಯಿಂದ ಬಂದ ಯಾವುದೋ ಕಾರು ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ವಸಂತ್ಕುಮಾರ್ ಪಿ.ಎನ್. ಬಿನ್ ನಂಜುಂಡೇಗೌಡ, 33 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಉಮೇಶ ಪಿ.ಎನ್ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ

     ದಿನಾಂಕ: 12-12-2017 ರಂದು ಮಧ್ಯಾಹ್ನ  02-00 ಗಂಟೆ ಸಮಯದಲ್ಲಿ  ಹಾಸನ ನಗರ ರಂಗೋಲಿಹಳ್ಳ ವಾಸಿ  ದೇವರಾಜ ರವರ ಹೆಂಡತಿ ಪ್ರೇಮಕುಮಾರಿ ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪ್ರೇಮಕುಮಾರಿ ರವರ ಪತಿ ಶ್ರೀ ದೇವರಾಜ ರವರು ದಿನಾಂಕ: 22-12-2017 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಪ್ರೇಮಕುಮಾರಿ ಕೋಂ ದೇವರಾಜ್, 32 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪರ್ಕಿಸುವುದು.

No comments: