* * * * * * HASSAN DISTRICT POLICE

Friday, October 13, 2017

PRESS NOTE : 11-10-2017

ಪತ್ರಿಕಾ ಪ್ರಕಟಣೆ             ದಿನಾಂಕ: 11-10-2017
ಅಕ್ರಮವಾಗಿ ಓಮ್ನಿ ಕಾರುಗಳಲ್ಲಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ 2 ಓಮ್ನಿ ಕಾರುಗಳ ವಶ:
      ದಿನಾಂಕ: 09-10-2017 ರಂದು ಬೆಳಗಿನ ಜಾವ 3-00 ಗಂಟೆ ಸಮಯದಲ್ಲಿ ಸಕಲೇಶಪುರ ನಗರದ ಕಪ್ಪೆಗುಂಡಿ ಸಮೀಪ ಹೇಮಾವತಿ ಹೊಳೆಯಲ್ಲಿ ಮರಳನ್ನು ಅಕ್ರಮವಾಗಿ 2 ಓಮ್ನಿ ವ್ಯಾನ್ಗಳಲ್ಲಿ ಸಾಗಾಟ ಮಾಡುತ್ತಿದ್ದಾರೆಂದು ಶ್ರೀ ನಾಗೇಶ್, ಎಎಸ್ಐ ಸಕಲೇಶಪುರ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬೀಟ್ ಕರ್ತವ್ಯದ ಸಿಬ್ಬಂದಿ ರಂಗೇಗೌಡ, ಹೆಚ್ಸಿ-78 ರವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಎ-02-ಪಿ- 7017 ರ ಓಮ್ನಿ ವ್ಯಾನ್ ನಿಲ್ಲಿಸಿಕೊಂಡು ಚೀಲಗಳಿಗೆ ಮರಳು ತುಂಬಿಕೊಂಡು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಹೀಲ್ ಬಿನ್ ಬಾಬು, 21 ವರ್ಷ, ಡ್ರೈವರ್, ಮಹೇಶ್ವರಿನಗರ, ಸಕಲೇಶಪುರ ನಗರ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಕೆಎ-02-ಪಿ-7017 ಮತ್ತು ಕೆಎ-04, ಎನ್-1663 ರ ಓಮ್ನಿ ವಾಹನಗಳ ಸಮೇತ ಸುಮಾರು 35 ಚೀಲಗಳ ಮರಳನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ತಾಯಿ ಮಗುವಿನೊಂದಿಗೆ ಕಾಣೆ
  ದಿನಾಂಕ: 06-10-2017 ರಂದು ಬೆಳಿಗ್ಗೆ 11-00 ಗಂಟೆಗೆ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಅಡಗೂರು ಗ್ರಾಮದ ವಾಸಿ ಶ್ರೀ ಸಂತೋಷ್, ರವರ ಪತ್ನಿ ಶ್ರೀಮತಿ ವಿದ್ಯಾ, ರವರು ಕು|| ಶ್ರೇಯಸ್, ಎಂಬ ಮಗುವನ್ನು ಚನ್ನರಾಯಪಟ್ಟಣದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಂಡು ಶ್ರೀಮತಿ ವಿದ್ಯಾ, ರವರ ಪತಿ ಶ್ರೀ ಸಂತೋಷ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆ ಪ್ರಕರಣ ದಾಖಲಾಗಿರುತ್ತದೆ ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ: ಶ್ರೀಮತಿ ವಿದ್ಯಾ ಕೋಂ ಸಂತೋಷ್, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿಧಾರ ಧರಿಸಿರುತ್ತಾರೆ ಶ್ರೇಯಸ್ ಬಿನ್ ಸಂತೋಷ್, 1 ವರ್ಷ, ಬಿಳಿ ಶಟರ್್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿರುತ್ತೆ
ಹುಡುಗಿ ಕಾಣೆ
   ದಿನಾಂಕ: 09-10-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನದ ಉತ್ತರ ಬಡಾವಣೆ ವಾಸಿ ಶ್ರೀ ಮುರುಳಿ, ರವರ ಪತ್ನಿ ಶ್ರೀಮತಿ ರಾಧ, ಮಗಳು ಕು|| ಮೇಘನಳೊಂದಿಗೆ ಹಾಸನದ ಸಾಲಗಾಮೆ ರಸ್ತೆಯಲ್ಲಿರುವ ಸಾಯಿಬಾಬಾ  ದೇವಸ್ಥಾನಕ್ಕೆ ಹೋಗಿದ್ದು, ಮಗಳು ಕು|| ಮೇಘನ, ದೇವಸ್ಥಾನದಿಂದ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಮೇಘನಳ ತಂದೆ  ಶ್ರೀ ಮುರುಳಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಕಾಣೆಯಾದ ಹುಡುಗಿಯ ಚಹರೆ: ಕು|| ಮೇಘನ ಬಿನ್ ಮುರುಳಿ, 21 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.
ಗಂಡಸು ಕಾಣೆ
ದಿನಾಂಕ: 10-10-2017 ರಂದು ಬೆಳಿಗ್ಗೆ 5-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಜಿನ್ನೇನಹಳ್ಳಿ ಗ್ರಾಮದ ವಾಸಿ ಶ್ರೀ ಜೆ.ಸಿ. ವಿಜಯ್ಕುಮಾರ್, ರವರು ಕೆಲಸ ನಿಮಿತ್ತ ಹಾಸನಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ವಿಜಯ್ಕುಮಾರ್, ರವರ ತಾಯಿ ಶ್ರೀಮತಿ ಸರೋಜ, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಜಿ.ಸಿ. ವಿಜಯ್ಕುಮಾರ್ ಬಿನ್ ಲೇಟ್ ಚಿಕ್ಕಪುಟ್ಟೇಗೌಡ, 32 ವರ್ಷ, ಗ್ರಾಮಲೆಕ್ಕಾಧಿಕಾರಿ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪರ್ಕಿಸುವುದು.

No comments: