* * * * * * HASSAN DISTRICT POLICE

Friday, October 13, 2017

PRESS NOTE : 12-10-2017

                                      ಪತ್ರಿಕಾ ಪ್ರಕಟಣೆ             ದಿನಾಂಕ: 12-10-2017

ಮಟ್ಕಾ-ಜೂಜು ಅಡ್ಡೆ ಮೇಲೆ ಪಿಐ, ಸಿಇಎನ್ ಠಾಣೆ  ದಾಳಿ ಇಬ್ಬರ ಬಂಧನ, ಬಂಧಿತರಿಂದ ಸುಮಾರು 3,400/- ನಗದು ವಶ:
      ದಿನಾಂಕ: 11-10-2017 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಹಾಸನದ ಬೈಪಾಸ್ ರಸ್ತೆಯಲ್ಲಿರುವ ಹೆಚ್.ಕೆ.ಎಸ್ ಈಚರ್ ವಕ್ಸರ್್ ಶಾಪ್ ಹತ್ತಿರ ಮತ್ತು ಟಿಪ್ಪುನಗರದ ನಂದಿನಿ ಕ್ಷೀರಕೇಂದ್ರ ಮುಂಭಾಗದಲ್ಲಿ ಮಟ್ಕಾ-ಜೂಜಾಟಾಡುತ್ತಿದ್ದಾರೆಂದು ಶ್ರೀ ಡಿ. ಸತೀಶ್, ಪಿಐ, ಸಿಇಎನ್, ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಅತ್ತಾವುಲ್ಲಾ ಬಿನ್ ಅಜೀಜ್ ಖಾನ್, 34 ವರ್ಷ, ಆದರ್ಶನಗರ, 6ನೇ ಕ್ರಾಸ್, ಹಾಸನ ನಗರ 2) ಮುನ್ನ ಬಿನ್ ಲೇಟ್ ಬಿ.ಎಂ. ಖಾಸಿಂ ಶರೀಫ್, 46 ವರ್ಷ, 4ನೇ ಕ್ರಾಸ್, ಪೆನ್ಷನ್ ಮೊಹಲ್ಲಾ ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 3,400/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ಗೆ ನಾಯಿ ಅಡ್ಡ ಬೈಕ್ ಹಿಂಬದಿ ಕುಳಿತಿದ್ದವನ ಸಾವು


      ದಿನಾಂಕ: 10-10-2017 ರಂದು ಸಂಜೆ 4-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಚಿಕ್ಕಹೊನ್ನೇನಹಳ್ಳಿ ಗ್ರಾಮ ವಾಸಿ ಶ್ರೀ ಎನ್. ಕುಮಾರ, ರವರು ಸ್ನೇಹಿತರಾದ ಶ್ರೀ ಜನಾರ್ಧನ ರವರ ಬಾಬ್ತು ಕೆಎ-13-ಇಡಿ-2980ರ ಬೈಕ್ ಹಿಂಭಾಗ ಕುಳಿತುಕೊಂಡು ಹಾಸನದ ರಿಂಗ್ ರಸ್ತೆಯಲ್ಲಿರುವ ವೆಟರಿನರಿ ಕ್ಲಬ್ ಹತ್ತಿರ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ಬೈಕ್ಗೆ ಬ್ರೇಕ್ ಹಾಕಿದಾಗ ಬೈಕ್ ಹಿಂಬದಿ ಕುಳಿತ್ತಿದ್ದ ಶ್ರೀ ಕುಮಾರ್, ರವರು ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಮಂಗಳ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಕುಮಾರ ಬಿನ್ ಲೇಟ್ ನಾರಾಯಣಚಾರ್, ಚಿಕ್ಕಹೊನ್ನೇನಹಳ್ಳಿ ಗ್ರಾಮ, ಹಾಸನ ತಾಲ್ಲೂಕು ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತರ ಪತ್ನಿ ಶ್ರೀಮತಿ ಟಿ. ಶಾಂತಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: