ಪತ್ರಿಕಾ ಪ್ರಕಟಣೆ ದಿನಾಂಕ:
27-03-2021
ದಿನಾಂಕ 25-03-2021
ರಂದು ಸಂಜೆ 7-40 ಗಂಟೆ ಸಮಯದಲ್ಲಿ ಹಾಸನ ನಗರದ ಉದಯನಗರ ಬಡಾವಣೆಯ ವಾಸಿ
ಕೃಷ್ಣೇಗೌಡರವರು ಕುವೆಂಪು ನಗರ 16 ನೇ ಕ್ರಾಸ್ ನಲ್ಲಿರುವ ಬ್ರಿಡ್ಜ್ ಕೆಳಭಾಗದ
ರಸ್ತೆಯಲ್ಲಿ ತಮ್ಮ ಫೋನಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಅವರ ಹಿಂಬದಿಯಿಂದ ಕೆಎ-13
ಇ.ಎನ್-499 ನೇ ನಂಬರಿನ ಬಿಳಿ ಬಣ್ಣದ ಸ್ಕೂಟಿಯಲ್ಲಿ ಬಂದಂತಹ ಮೂರು
ಜನ ವ್ಯಕ್ತಿಗಳು ಏಕಾಏಕಿ ಅವರ ಸುಮಾರು 9,000/- ಬೆಲೆಯ ವಿವೋ ಮೊಬೈಲ್ ಅನ್ನು ಕಿತ್ತುಕೊಂಡು
ಪರಾರಿಯಾಗಿರುತ್ತಾರೆ, ಹುಡುಕಿಕೊಡಬೇಕೆಂದು ಕೃಷ್ನೇಗೌಡರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ: 25-03-2021
ರಂದು ಸಂಜೆ ಸುಮಾರು 06-30 ಗಂಟೆ ಸಮಯದಲ್ಲಿ ಹಾಸನದ ಹೇಮಾವತಿ ನಗರದ ವಾಸಿ
ತಿಮ್ಮೇಗೌಡ ರವರು ಹಾಸನ ರಿಂಗ್ ರಸ್ತೆಯ ಕೃಷ್ಣ ವೈನ್ಸ್ ಹತ್ತಿರ ರಸ್ತೆಯ ಎಡಬಾಗದಲ್ಲಿ
ನಡೆದುಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಅವರ ಹಿಂದಿನಿಂದ ಅಂದರೆ ಸಾಲಗಾಮೆ ರಸ್ತೆಯ
ಸುಬೆದಾರ್ ನಾಗೇಶ್ ವೃತ್ತ ಕಡೆಯಿಂದ ಬಂದ ಕೆಎ-25-ಎನ್-6641 ರ ಕಾರಿನ ಚಾಲಕ ತನ್ನ ಕಾರನ್ನು ಅತೀವೇಗವಾಗಿ
ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಿಮ್ಮೇಗೌಡ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಅವರು
ರಸ್ತೆಯ ಮೇಲೆ ಬಿದ್ದಾಗ ಅವರ ತಲೆಗೆ, ಕೈಕಾಳುಗಳಿಗೆ ಹಾಗು ದೇಹದ ಇತರೆ ಬಾಗಗಳಿಗೆ ಪೆಟ್ಟುಗಳು
ಬಿದ್ದು ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಪ್ರಜ್ಙೆ ತಪ್ಪಿದ್ದು ನಂತರ 108
ಅಂಬುಲೆನ್ಸ್ ನಲ್ಲಿ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ
ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ
ದಿನಾಂಕ: 25-03-2021 ರಂದು ರಾತ್ರಿ 07-45 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆಂದು
ಮೃತರ ಮಗಳು ಶ್ರೀಮತಿ ಪುನೀತಾರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೋಲಿಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ: 25-03-2021 ರಂದು ಮದ್ಯಾಹ್ನ ಸುಮಾರು 02-10
ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು ಅಗಲಹಳ್ಳಿ ಗ್ರಾಮದ ಹನುಮಂತೇಗೌಡ ರವರು ತಮ್ಮ ಪತ್ನಿ ಸಾವಿತ್ರರಮ್ಮ
ರವರೊಂದಿಗೆ ತಮ್ಮ ಕೆಎ-13-ವಿ-2584 ರ ಟಿ.ವಿ.ಎಸ್ ಎಕ್ಸೆಲ್ ಸೂಪರ್ ಬೈಕಿನಲ್ಲಿ ಅಗಲಹಳ್ಳಿ
ಗ್ರಾಮದಿಂದ ಸಂಬಂದಿಕರ ಮದುವೆ ಕಾಯರ್ಯಕ್ಕೆ ಹಾಸನ ನಗರಕ್ಕೆ ಬಂದಿದ್ದು ಮದುವೆ ಮುಗಿಸಿಕೊಂಡು
ವಾಪಸ್ ಅಗಲಹಳ್ಳಿ ಗ್ರಾಮಕ್ಕೆ ಹೋಗಲು ಮೇಲ್ಕಂಡ ಟಿ.ವಿ.ಎಸ್ ಎಕ್ಸೆಲ್ ಸೂಪರ್ ಬೈಕಿನಲ್ಲಿ
ದೊಡ್ಡಮಂಡಿಗನಹಳ್ಳಿ ರೇಷ್ಮೆ ಇಲಾಖೆಯ ಸಮೀಪ ಬಿ.ಎಂ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರ
ಹಿಂದಿನಿಂದ ಅಂದರೆ ಹಾಸನ ಟೌನ್ ಕಡೆಯಿಂದ ಬಂದ ಕೆಎ-28-ಎನ್-2235 ರ ಕಾರಿನ ಚಾಲಕ ತನ್ನ ಕಾರನ್ನು ಅತೀವೇಗವಾಗಿ
ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿ.ವಿ.ಎಸ್ ಎಕ್ಸೆಲ್ ಸೂಪರ್ ಗೆ ಹಿಂಬಾಗದಿಂದ ಡಿಕ್ಕಿ
ಮಾಡಿದ ಪರಿಣಾಮ ಇಬ್ಬರು ಕೆಳಕ್ಕೆ ಬಿದ್ದಾಗ ಹನುಮಂತೇಗೌಡ ರವರಿಗೆ ತಲೆಗೆ ಮತ್ತು ದೇಹದ ಇತರೆ
ಬಾಗಗಳಿಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಹಾಗೂ ಹಿಂಬಾಗ ಕುಳಿತಿದ್ದ
ಸಾವಿತ್ರಮ್ಮ ರವರಿಗೆ ತಲೆಗೆ ಮತ್ತು ಮೈಕೈಗೆ ಪೆಟ್ಟಾಗಿರುತ್ತದೆಂದು ಮೃತರ ಮಗ ಮಧು ರವರು ಕೊಟ್ಟ
ದೂರಿನ ಮೇರೆಗೆ ಹಾಸನ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ದಿನಾಂಕ:-26-03-2021
ರಂದು ಸಂಜೆ 07-30 ಗಂಟೆಯ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಡುವಿನ
ಹೊಸಹಳ್ಳಿ ಗ್ರಾಮದ ಚಂದ್ರಶೇಖರರವರು ತಮ್ಮ ಬಾಬ್ತು
ಕೆಎ-45 ಕೆ-6000ರ ಹೀರೊ ಹೊಂಡಾ ಸ್ಪೆಂಡರ್ ಬೈಕಿನಲ್ಲಿ ಬಸ್ ನಿಲ್ದಾಣದ
ಕಡೆಯಿಂದ ರಾಮನಾಥಪುರದ ಪಾರೆಸ್ಟ್ ಗೇಟಿನ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ
ಎದುರುಗಡೆಯಿಂದ ಅಂದರೆ ಸಾಲಿಗ್ರಾಮ ರಸ್ತೆಯ ಕಡೆಯಿಂದ ಬರುತ್ತಿದ್ದ ಕೆಎ-13
ಎಫ್-1830ರ ಕೆಎಸ್ಆರ್ ಟಿಸಿ ಬಸ್ಸಿನ ಚಾಲಕ ಅತಿವೇಗ ಮತ್ತು
ಅಜಾರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಕೆಳಕ್ಕೆ ಬಿದ್ದು ರಕ್ತಗಾಯವಾಗಿ
ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಸುದೀಶ್
ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ದಿನಾಂಕ: 26-03-2021
ರಂದು ಸಂಜೆ 04-30 ಗಂಟೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕು
ಜೋಡಿಗಟ್ಟೆ-ಹಿರೇಹಳ್ಳಿ ಗ್ರಾಮದ ಕಲ್ಯಾಣಮ್ಮ ರವರು ಜೋಡಿಗಟ್ಟೆ ಕಡೆಗೆ ಅಂಗಡಿಗೆ ಹೋಗಿ ವಾಪಸ್ಸು
ಹಿರೇಹಳ್ಳಿ ಕಡೆಗೆ ಬರಲು ಜೋಡಿಗಟ್ಟೆ-ಹಿರೇಹಳ್ಳಿ ಗೇಟ್ ಹತ್ತಿರ ಎನ್ ಹೆಚ್-75, ಚನ್ನರಾಯಪಟ್ಟಣ
ಕಡೆಯಿಂದ ಹಾಸನ ಕಡೆಗೆ ಹಾದು ಹೋಗಿರುವ ಏಕಮುಖ ಹೆದ್ದಾರಿ ಬಿಎಂ ರಸ್ತೆಯನ್ನು ದಾಟುತ್ತಿರುವಾಗ
ಸದರಿ ಏಕಮುಖ ಹೆದ್ದಾರಿ ರಸ್ತೆಯಲ್ಲಿ ಉದಯಪುರ ಕಡೆಯಿಂದ ಹಾಸನ ಕಡೆಗೆ ಹೋಗಲು ಬಂದ ನಂ: ಕೆಎ-13-ಇಸಿ-1803 ರ
ಬೈಕ್ ಸವಾರನು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಕಲ್ಯಾಣಮ್ಮ ರವರಿಗೆ
ಗುದ್ದಿಸಿದಾಗ ಕಲ್ಯಾಣಮ್ಮ ರವರು ರಸ್ತೆಯ ಮೇಲೆ ಬಿದ್ದು ತಲೆಗೆ, ಎದೆಗೆ
ಮತ್ತು ಮೈಕೈಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದರಿಂದ
ಹಾಸನದ ಮಂಗಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ, ಚಿಕಿತ್ಸೆ
ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 26-03-2021 ರಂದು 07-45 ಗಂಟೆಯಲ್ಲಿ ಮಂಗಳ ಆಸ್ಪತ್ರೆಯಲ್ಲಿ ಕಲ್ಯಾಣಮ್ಮ ರವರು
ಮೃತಪಟ್ಟಿರುತ್ತಾರೆಂದು ಕಲ್ಯಾಣಮ್ಮ ರವರ ಮಗ
ನಾಗರಾಜುರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಮತರ ಪೋಲಿಸ್ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆಯಲ್ಲಿರುತ್ತೆ.
No comments:
Post a Comment