ಪತ್ರಿಕಾ ಪ್ರಕಟಣೆ ದಿ: 14-01-2019
ನೀರು ಹಿಡಿಯುವ
ಸಂಬಂಧ ಮಿತವಾಗಿ ಬಳಸಿ ಎಂದು ಹೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ:
ದಿನಾಂಕ: 10-01-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ
ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಚೌಳಂಗಾಲ ಗ್ರಾಮದ ವಾಸಿ ಶ್ರೀಮತಿ
ನಾಗಮ್ಮ, ರವರು ನಲ್ಲಿ ನೀರು ಹಿಡಿಯುತ್ತಿರುವ
ಹೆಂಗಸರನ್ನು ಉದ್ದೇಶಿಸಿ ನೀರನ್ನು ಹೆಚ್ಚಾಗಿ ಬಳಸಬೇಡಿ ಮಿತವಾಗಿ ಬಳಸಿ ಎಂದು ಹೇಳುತ್ತಿದ್ದಾಗ
ಪಕ್ಕದ ಮನೆಯ ವಾಸಿ ಶ್ರೀಮತಿ ದಾಕ್ಷಿಯಣಿ ಮತ್ತು ತಾಯಿ ಪಾರ್ವತಮ್ಮ, ಇಬ್ಬರು ನಮ್ಮನ್ನು ನೋಡಿ
ಬೈಯುತ್ತಿದ್ದೀಯಾ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ತಲೆಕೂದಲು ಹಿಡಿದು ಎಳೆದಾಡಿ ಕೈಯಿಂದ
ಹೊಡೆದು ಮಾಂಗಲ್ಯವನ್ನು ಕಿತ್ತುಹಾಕಿ, ಎಡಮಟ್ಟೆಯಿಂದ ಹೊಡೆದು ಬೆರಳಿಗೆ ನೋವುಂಟು ಮಾಡಿರುತ್ತಾರೆಂದು ಪಿರ್ಯಾದಿ ಕೊಟ್ಟ
ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಕಳ್ಳತನ
ಮಾಡಿಕೊಂಡು ಸಾಗಿಸುತ್ತಿದ್ದವನ ಬಂಧನ, ಲಾರಿ ಸಮೇತ ಕಲ್ಲುಗಳ ವಶ:
ದಿನಾಂಕ: 13-01-2018 ರಂದು ಬೆಳಗಿನ ಜಾವ 2-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಬೈರಾಪುರ ಗ್ರಾಮದ ಹತ್ತಿರ ಅಕ್ರಮವಾಗಿ
ಲಾರಿಯಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದಾರೆಂದು ಶ್ರೀ ಎಂ.ಎನ್. ಶಶಿಧರ್, ಡಿವೈಎಸ್ಪಿ ಸಕಲೇಶಪುರ ಉಪ-ವಿಭಾಗ, ರವರಿಗೆ ಬಂದ ಖಚಿತ ಮಾಹಿತಿ ಮೇರಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಎ-13, ಎ-4168, ರ ಲಾರಿಯನ್ನು ತಪಾಸಣೆ ನಡೆಸಲಾಗಿ
ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಕಲ್ಲುಗಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದವನ್ನು
ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ವೆಂಕಟೇಶ್ ಬಿನ್ ಲೇಟ್ ರಂಗಪ್ಪ, 36 ವರ್ಷ, ಹಳೇಪಾಳ್ಯ ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು ಎಂದು
ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಲಾರಿ ಸಮೇತ ಕಲ್ಲುಗಳನ್ನು ಅಮಾನತ್ತುಪಡಿಸಿಕೊಂಡು
ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಜೂಜಾಡುತ್ತಿದ್ದ 6 ಜನರ ಬಂಧನ, 6580/- ನಗದು ವಶ:
ದಿನಾಂಕ: 13-01-2019 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಹಾಸನದ ಸಂತೇಪೇಟೆ
ವೃತ್ತ, ಆರ್.ಎಂ.ಸಿ ಯಾಡರ್್ನಲ್ಲಿ ಅಕ್ರಮವಾಗಿ
ಜೂಜಾಡುತ್ತಿದ್ದಾರೆಂದು ಶ್ರೀ ಪ್ರಮೋದ್ಕುಮಾರ್, ಪಿಎಸ್ಐ ಹಾಸನ ನಗರ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗ 1) ಚಂದ್ರ ಬಿನ್ ತಮ್ಮಯ್ಯ, 26 ವರ್ಷ, ರಾಜ್ಕುಮಾರ್ ನಗರ, ಅಡ್ಡಿಮನೆಗೆ ಹಿಂಭಾಗ, ಹಾಸನ ನಗರ 2) ಮಹದೇವ ಬಿನ್ ಸಣ್ಣಯ್ಯ, 30 ವರ್ಷ, ಎಪಿಎಂಸಿಯಲ್ಲಿ ಕೂಲಿ ಕೆಲಸ, ರೇಷ್ಮೆ ಇಲಾಖೆ, ಹಿಂಭಾಗ, ಹಾಸನ ನಗರ. 3) ವಿನಯ್ ಬಿನ್ ಲೇಟ್ ಅಣ್ಣೇಗೌಡ, 24 ವರ್ಷ ಪವನಶ್ರೀ ಮಚೆಂಟ್ಸ್ನಲ್ಲಿ
ಪೈನಾನ್ಸ್ ನಲ್ಲಿ ಕೆಲಸ, ಶ್ರೀನಗರ ಹಾಸನ 4) ಜಯಣ್ಣ ಬಿನ್ ತಿಮ್ಮಶೆಟ್ಟಿ, 36 ವರ್ಷ,
ರಂಗವೈನ್ಸ್
ಹಿಂಭಾಗ, ತಣ್ಣೀರುಹಳ್ಳಿ, ಹಾಸನ ನಗರ 5) ಸ್ವೀವನ್ ಬಿನ್ ಅರಳಪ್ಪ, 28 ವರ್ಷ, ಆಟೋಚಾಲಕ, 3ನೇ ಕ್ರಾಸ್, ಹುಣಸಿನಕೆರೆ ಬೀದಿ, ಅಯ್ಯಪ್ಪ ಕ್ಯಾಂಟೀನ್ ಹತ್ತಿರ ಹಾಸನ 6) ಆಕಾಶ್ ಬಿನ್ ರಾಜಶೆಟ್ಟಿ 19 ವರ್ಷ, ಎಹೆಚ್ಪಿ ಕಂಪನಿ, ಅಲ್ಲಾನಾ ಕಾಫಿಕ್ಯೂರಿಂಗ್ ಹತ್ತಿರ, ಹಾಸನ ಎಂದು ತಿಳಿಸಿದ್ದವನನ್ನು
ದಸ್ತಗಿರಿ ಮಾಡಿಕೊಂಡು 6,580/- ನಗದು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಹಳೆ ದ್ವೇಷ
ಮಚ್ಚಿನಿಂದ ಹೊಡೆದು ರಕ್ತಗಾಯ, ಕೊಲೆ ಬೆದರಿಕೆ:
ದಿನಾಂಕ: 13-01-2019 ರಂದು ಸಂಜೆ 5-15 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಗಿಬೈಚನಹಳ್ಳಿ ಗ್ರಾಮದ ವಾಸಿ ಶ್ರೀ
ಈರೇಗೌಡ, ರವರು ಬಾಬ್ತು ತೋಟದಲ್ಲಿ ತೆಂಗು ಮತ್ತು
ಅಡಿಕೆ ತೋಟದಲ್ಲಿ ನೀರು ಹಾಕುತ್ತಿದ್ದಾಗ ಅದೇ ಗ್ರಾಮದ ಪಕ್ಕ ಜಮೀನನ ವಾಸಿ ಶ್ರೀ ಆನಂದ @ ಗುಂಡ, ರವರು ಪೈಪ್ ಲೈನ್ ವಿಚಾರದಲ್ಲಿ ಹಳೇ
ದ್ವೇಷದಿಂದ ಅವಾಚ್ಯಶಬ್ಧಗಳಿಂದ ಬೈದು ಜಗಳ ಮಾಡಿ ಮಚ್ಚಿನಿಂಡ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು
ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಕಾರು ಡಿಕ್ಕಿ, ಪಾದಚಾರಿಗೆ ರಕ್ತಗಾಯ:
ದಿನಾಂಕ: 12-01-2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ, ಹಂಜಲಿಗೆ ಗ್ರಾಮದ ವಾಸಿ ಶ್ರೀ ಜಗದೀಶ್, ರವರು ಸಂಬಂಧಿಕರಾದ ಶ್ರೀ ಮಧು, ರವರೊಂದಿಗೆ ಹಾಸನದ ತನ್ವಿತ್ರಿಷಾದ
ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-03, ಜೆಡ್-2777 ರ ಕಾರಿನ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಜಗದೀಶ್, ರವರಿಗೆ ಡಿಕ್ಕಿಯಾದ ಪರಿಣಾಮ
ರಕ್ತಗಾಯಗಳಾಗಿದ್ದು,
ಹಾಸನ
ಜನಪ್ರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ
ದಿನಾಂಕ: 09-01-2019 ರಂದು 8-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ
ತಾಲ್ಲೂಕು, ಬಾಗೂರು ಹೋಬಳಿ, ಬಿ. ಬೈರಾಪುರ ಗ್ರಾಮದ ವಾಸಿ ಶ್ರೀಮತಿ
ಮೀನಾಕ್ಷಿ, ಮನೆಯಿಂದ ಕಾರೇಹಳ್ಳಿ ಆಸ್ಪತ್ರೆಗೆ
ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ
ಮೀನಾಕ್ಷಿ ಕೋಂ ಮಲ್ಲೇಶಪ್ಪ, 65 ವರ್ಷ,
5 ಅಡಿ ಎತ್ತರ, ಎಣ್ಣೆಗಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ., ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ
ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-233033 ಕ್ಕೆ ಸಂಪರ್ಕಿಸುವುದು.
No comments:
Post a Comment