* * * * * * HASSAN DISTRICT POLICE

Wednesday, January 23, 2019

ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ : 22-01-2019


ಪತ್ರಿಕಾ ಪ್ರಕಟಣೆ                           ದಿ: 22-01-2019


ಯಾರೋ ಕಳ್ಳರು ದೇವಸ್ಥಾನದ ಬೀಗ ಮುರಿದು, ಪೂಜಾ ಸಾಮಗ್ರಿಗಳ ಕಳವು:

ದಿನಾಂಕ: 18-01-2019 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಸಂಕಲಾಪುರ ಗ್ರಾಮದ ವಾಸಿ ಶ್ರೀ ಮಹಾದೇವ, ರವರು ಗ್ರಾಮದ ಶ್ರೀ ದಂಡಿನ ಮಾರಮ್ಮ ದೇವಸ್ಥಾನದ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ: 19-01-2019 ರಂದು ಮಧ್ಯಾಹ್ನ 3-00 ಗಂಟೆಗೆ ದೇವಸ್ಥಾನದ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ 4 ಅಡಿ ಉದ್ದದ ಒಂದು ದೀಪಾಲೆ ಕಂಬ, 3 ಅಡಿ ಉದ್ದದ 1 ಜೊತೆ ದೀಪಾಲೆ ಕಂಬ 5 ಹಿತ್ತಾಳೆ ಬಿಂದಿಗೆಗಳು ಮತ್ತು ಹಿತ್ತಾಳೆ ಚಂಬು, 1/2 ತೂಕದ 01 ಬೆಳ್ಳಿ ಛತ್ರಿ ಮತ್ತು ಬೆಳ್ಳಿ ಸರ, 3 ಗ್ರಾಂ ತೂಕದ ಚಿನ್ನದ ಗುಂಡು, 4 ದೊಡ್ಡ ಗಂಟೆ, 2 ಚಿಕ್ಕ ಗಂಟೆ 2 ಹಿತ್ತಾಳೆ ತಟ್ಟೆಗಳನ್ನು ಕಳವು ಮಾಡಿಕೊಂಡು ಹೋಗಿತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪತ್ನಿ, ಪತಿಯೊಂದಿಗೆ ಜಗಳ ಪತಿಗೆ ಮಾರಣಾಂತಿಕ ಹಲ್ಲೆ:

ದಿನಾಂಕ: 20-01-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ವಿಜಾಪುರ ಗ್ರಾಮದ ವಾಸಿ ಶ್ರೀ ಚಿಕ್ಕಣ, ರವರ ಪತ್ನಿ ಶ್ರೀಮತಿ ರುಕ್ಮಣಿ, ರವರೊಂದಿಗೆ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದೆ ಸಣ್ಣ-ಪುಟ್ಟ ವಿಚಾರಗಳಿಗೆ ಅಗಾಗ್ಗೆ ಜಗಳವಾಡುತ್ತಿದ್ದು, ಶ್ರೀ ಚಿಕ್ಕಣ್ಣ, ರವರು ಕೂಲಿ ಕೆಲಸ ಮಾಡಿಕೊಂಡು ಮನೆಗೆ ಬಂದಿದ್ದಾಗ ಪತ್ನಿ ಶ್ರೀಮತಿ ರುಕ್ಮಣಿ, ರವರು ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಸೀಮೆಎಣ್ಣೆ ದೀಪದಿಂದ ಹೊಡೆದಾಗ ಸೀಮೆಎಣ್ಣೆ ಮೈಮೇಲೆ ಚಲ್ಲಿದಾಗ ಹಣೆ, ಮುಖ, ಬಲಭುಜಕ್ಕೆ ಸುಟ್ಟಗಾಯಗಳಾಗಿರುತ್ತದೆಂದು ಪಿರ್ಯಾದಿಯವರು ಅಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕೆಎಸ್ಆರ್ಟಿ ಬಸ್ ಬೈಕ್ಗೆ ಡಿಕ್ಕಿ, ಬೈಕ್ ಹಿಂಬದಿ ಕುಳಿತಿದ್ದವನ ಸಾವು:      

ದಿನಾಂಕ:  21-01-2019 ರಂದು ಸಂಜೆ 5-20 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಜಾನೆಕೆರೆ ಗ್ರಾಮದ ವಾಸಿ ಶ್ರೀ ಮೋಹನ್, ರವರು ಅದೇ ಗ್ರಾಮದ ವಾಸಿ ಶ್ರೀ ಲಕ್ಷ್ಮಣ, ರವರ ಬಾಬ್ತು ಕೆಎ-46, ಹೆಚ್-6476 ರ ಟಿವಿಎಸ್ ಬೈಕ್ನಲ್ಲಿ ಬಾಳ್ಳುಪೇಟೆಗೆ ಹೋಗಲು ಸಕಲೇಶಪುರ ತಾಲ್ಲೂಕು, ಕೊಲ್ಲಹಳ್ಳಿ ಬಿ.ಎಂ. ರಸ್ತೆ ಹತ್ತಿರ ಹೋಗುತ್ತಿದ್ದಾಗ ಎದುಗಡೆಯಿಂದ ಬಂದ ಕೆಎ-18, ಎಫ್-687 ರ ಕೆಎಸಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯೆತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ಮೋಹನ್ ಬಿನ್ ದೊಡ್ಡಯ್ಯ, 35 ವರ್ಷ, ಜಾನೆಕೆರೆ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ದೊಡ್ಡಯ್ಯ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.  
                  
ಅಪರಿಚಿತ ವ್ಯಕ್ತಿ ವೃದ್ದೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಹೆದರಿಸಿ 45 ಸಾವಿರ ಬೆಲೆ ಬಾಳುವ ಚಿನ್ನದ ಸರವನ್ನುಕಿತ್ತುಕೊಂಡು ಪರಾರಿ :

ದಿನಾಂಕ: 15-01-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬೂವನಹಳ್ಳಿ ಗ್ರಾಮದ 70 ವರ್ಷ ವಯಸ್ಸಿನ ಸಾವಿತ್ರಮ್ಮರವರು ಹಾಸನ ತಾಲ್ಲೂಕು, ಕೌಶಿಕ ಹಿರಿಹಳ್ಳಿ ಗ್ರಾಮದ ದೇವಸ್ಥಾನಕ್ಕೆ ಹೋಗಲು ಹಾಸನಕ್ಕೆ ಬಂದು ದೇವರ ಪೂಜೆ ಸಾಮಾನು ತರಲು ಗಣಪತಿ ಪೆಂಡಾಲ್ ಹತ್ತಿರ ಹೋಗುತ್ತಿದ್ದಾಗ ಯಾರೋ ಒಬ್ಬಅಪರಿಚಿತ ವ್ಯಕ್ತಿ ಯಾವುದೋ ಒಂದು ಬೈಕಿನಲ್ಲಿ ಸಾವಿತ್ರಮ್ಮರವರ ಹತ್ತಿರ ಬಂದು ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿ ತುಂಬಾ ಏಟಾಗಿದೆ ಬನ್ನಿ ಕರೆದುಕೊಂಡು ಹೋಗುತ್ತೇನೆಂದು ಬೈಕಿನಲ್ಲಿ ಕೂರಿಸಿಕೊಂಡು ಪವನಪುತ್ರ ರೆಸಾರ್ಟ್ ಹತ್ತಿರದ ನಿರ್ಜನ ಪ್ರದೇಶಕ್ಕೆಕರೆದುಕೊಂಡು ಹೋಗಿ ಕುತ್ತಿಗೆಯಲ್ಲಿದ್ದ 45 ಸಾವಿರ ಬೆಲೆ ಬಾಳುವ 30 ಗ್ರಾಂ ತೂಕದ ಚಿನ್ನದ  ಸರವನ್ನು ಬಿಚ್ಚಿಸಿಕೊಂಡು ಇಲ್ಲೆ ಇರಬೇಕು ಎಂದು ಹೆದರಿಸಿ, ನಿಮ್ಮ ಮೊಮ್ಮಗನನ್ನುಕರೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಸ್ ಬರಲಿಲ್ಲ,  ನನಗೆ ಸುಳ್ಳು ಹೇಳಿ ನನ್ನ ಸರವನ್ನು ಲಪಟಾಯಿಸಿಕೊಂಡು ಹೋಗಿರುವ ಕಳ್ಳನನ್ನು ಪತ್ತೆ ಮಾಡಿ ಸರವನ್ನು ಕೊಡಿಸಿಕೊಡಬೇಕೆಂದು ಶ್ರೀಮತಿ ಸಾವಿತ್ರಮ್ಮರವರು ದಿನಾಂಕ: 21-01-2018 ರಂದು ಕೊಟ್ಟದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

10,76,600/- ರೂ ಬೆಲೆಯಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳವು                                                             

ದಿನಾಂಕ: 19-01-2019 ರಂದು ಸಕಲೇಶಪುರ ಪಟ್ಟಣ ಲಕ್ಷ್ಮಿಪುರ ಬಡಾವಣೆ ವಾಸಿ ಹೆಚ್.ಎಸ್. ಸೂರ್ಯನಾರಾಯಣಶೆಟ್ಟಿರವರು  ಮನೆಗೆ ಹೋಗಿ ಬೀಗ ಹಾಕಿಕೊಂಡುತಮ್ಮನ ಮಗನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿ ದಿನಾಂಕ: 21-01-2019 ರಂದು ಬೆಳಿಗ್ಗೆ 09-00 ಗಂಟೆಗೆ ಮನೆಯ ಹತ್ತಿರ  ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನುಯಾರೋ ಕಳ್ಳರು ಯಾವುದೋಆಯುಧದಿಂದ ಮೀಟಿ ಮನೆಯೊಳಗೆ ಹೋಗಿ ಮನೆಯ ರೂಮಿನಲ್ಲಿಟ್ಟದ್ದ ಕಬ್ಬಿಣದ ಗಾಡ್ರೇಜ್ ಬೀರುವಿಗೆ ಹಾಕಿದ್ದ ಬೀಗವನ್ನುಯಾವುದೋ ಆಯುಧದಿಂದ ಮೀಟಿ ಬೀರುವಿನ ಲಾಕರ್ನಲ್ಲಿದ್ದ 10,76,600/- ಬೆಲೆಯಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಶ್ರೀ ಹೆಚ್.ಎಸ್. ಸೂರ್ಯನಾರಾಯಣಶೆಟ್ಟಿರವರು ನೀಡಿದದೂರಿನ ಮೇರೆಗೆ ಸಕಲೇಶಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.


ಹೆಂಗಸು ಕಾಣೆ :

ದಿನಾಂಕ: 16-01-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿಅರಕಲಗೂಡುತಾಲ್ಲೂಕು, ಹೆಬ್ಬಾಲೆಗ್ರಾಮದ  ಮಹೇಶ ರವರ ಪತ್ನಿ ಶ್ರೀಮತಿ ಮಂದಾಕಿನಿ ಸಂಕ್ರಾಂತಿ ಹಬ್ಬಕ್ಕೆಂದುತಾಯಿ ಮನೆ ಅಗ್ರಹಾರಗ್ರಾಮಕ್ಕೆ ಹೋಗಿ ವಾಪಸ್ಊರಿಗೆ ಹೋಗಲು ಮಂದಾಕಿನಿ ಅಣ್ಣನೊಂದಿಗೆಕೊಣನೂರಿಗೆ ಬಸ್ ನಿಲ್ದಾಣಕ್ಕೆ ಬಿಡಿಸಿಕೊಂಡಿದ್ದು, ಕೊಣನೂರು ಬಸ್ ನಿಲ್ದಾಣದಿಂದ ಮಂದಾಕಿನಿ ಗಂಡನ ಮನೆಗೆ ಹೋಗದೆ ಕಾಣೆಯಾಗಿರುತ್ತಾಳೆ. ಎಲ್ಲಾಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಮಂದಾಕಿನಿ ರವರ ಪತಿ ಶ್ರೀ ಮಹೇಶ ರವರು ದಿನಾಂಕ: 21-01-2019 ರಂದುಕೊಟ್ಟದೂರಿನ ಮೇರೆಗೆಕೊಣನೂರುಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಮಂದಾಕಿನಿ ಕೋಂ ಮಹೇಶ, 28 ವರ್ಷ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ   ಕೊಣನೂರುಠಾಣೆ ಫೋನ್ ನಂ.08175-226227 ಕ್ಕೆ ಸಂಪಕರ್ಿಸುವುದು.

ಹುಡುಗಿ ಕಾಣೆ

ದಿನಾಂಕ: 16-01-2019 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ನಿಟ್ಟೂರು ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಮಗಳು ಕು|| ನೇತ್ರಾವತಿ, ಹಾಸನದ ಮಹಿಳಾ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ನೇತ್ರಾವತಿ ಬಿನ್ ರಾಜೇಗೌಡ, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268630 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ

ದಿನಾಂಕ: 20-01-2019 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ದುದ್ದ ಆರ್.ಎಸ್. ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿ, ರವರ ಮಗಳು ಕು|| ರಶ್ಮಿ @ ರೇಖಾ, ನಾಯಿಗೆ ಊಟ ಹಾಕುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋದವರು ಇದುರವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರಶ್ಮಿ @ ರೇಖಾಳ ತಂದೆ ಶ್ರೀ ಪುಟ್ಟಸ್ವಾಮಿ, ರವರು ಕೊಟ್ಟ ದೂರಿನ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ ಹುಡುಗಿಯ ಚಹರೆ: ಕು|| ರಶ್ಮಿ @ ರೇಖಾ ಬಿನ್ ಪುಟ್ಟಸ್ವಾಮಿ, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು 08172-223935 ಕ್ಕೆ ಸಂಪರ್ಕಿಸುವುದು.
                            
ಹೆಂಗಸು ಕಾಣೆ

ದಿನಾಂಕ: 19-01-2019 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಕೆ. ಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಕೆ.ಎನ್. ನಾಗರಾಜು, ರವರ ಮಗಳು ಶ್ರೀಮತಿ ಅರ್ಪಿತಾ, ಮನೆಯಿಂದ ತೋಟಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಅರ್ಪಿತಾಳ ತಂದೆ ಶ್ರೀ ನಾಗರಾಜು, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಅರ್ಪಿತಾ ಕೋಂ ಪ್ರಶಾಂತ, 26 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪರ್ಕಿಸುವುದು.

No comments: