* * * * * * HASSAN DISTRICT POLICE

Monday, January 21, 2019

HASSAN DISTRICT PRESS NOTE 21-01-2019


ಪತ್ರಿಕಾ ಪ್ರಕಟಣೆ                                               ದಿ: 21-01-2019

ಜೂಜಾಡುತ್ತಿದ್ದ ಐವರ ಬಂಧನ, ಬಂಧಿತರಿಂದ 5 ಸಾವಿರ ನಗದು ವಶ:
     ದಿನಾಂಕ: 20-01-2019 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಶ್ರೀಮತಿ ರೇಖಾಬಾಯಿ, ಪಿಎಸ್ಐ, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಸಾಲಗಾಮೆ ಕಡೆ ಗಸ್ತು ಕರ್ತವ್ಯದಲ್ಲಿದ್ದಾಗ  ಹಾಸನ ತಾಲ್ಲೂಕು, ಬಲ್ಲೇನಹಳ್ಳಿ ಗ್ರಾಮದ ಸೀಗೆ ಗುಡ್ಡ ಕಾವಲ್ ನ ಪಾರೆಸ್ಟ್ ನಲ್ಲಿ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಪವನ ಬಿನ್ ಪುಟ್ಟರಾಜ, 19 ವರ್ಷ, ಕ್ಯಾಟೀನ್ ಕೆಲಸ, ಸಂಜೀವಿನಿ ಆಸ್ಪತ್ರೆ ಹಿಂಭಾಗ, ಹಾಸನ 2) ಶ್ರೀ ಸೋಮಶೇಖರ್ ಬಿನ್ ತಿಮ್ಮೇಗೌಡ, 38 ವಷ್, ಹಳೆಕೊಪ್ಪಲು ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು 3) ಶ್ರೀ ಮುನ್ನ ಬಿನ್ ಅಬ್ದುಲ್ ಸಲಾಂ, 30 ವರ್ಷ, 1ನೇ ಕ್ರಾಸ್, ಅಂಬೇಡ್ಕರ್ ನಗರ, ಹಾಸನ 4) ಶ್ರೀ ಆದಿಲ್ ಜಾವಿದ್ ಖಾನ್, 37 ವರ್ಷ, 1ನೇ ಕ್ರಾಸ್, ಅಂಬೇಡ್ಕರ್ ನಗರ, ಹಾಸನ. ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕಟ್ಕಿದ್ದ 5,000/-ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.  
ಟ್ರ್ಯಾಕ್ಟರ್ ಬೈಕ್ ಡಿಕ್ಕಿ, ಇಬ್ಬರ ಸಾವು:
      ದಿನಾಂಕ: 20-01-2019 ರಂದು ಮಧ್ಯಾಹ್ನ 2-45 ಗಂಟೆ ಸಮಯಯದಲ್ಲಿ ಚನ್ನರಾಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಚಿಕ್ಕಸೋರೆಕಾಯಿಪುರ ಗ್ರಾಮದ ವಾಸಿ ಶ್ರೀ ಗೌರೀಶ್, ರವರ ಬಾಬ್ತು ಕೆಎ-13, ಇಎಂ-7566 ರ ಪಲ್ಸರ್ ಬೈಕ್ ನಲ್ಲಿ ಅದೇ ಗ್ರಾಮದ ವಾಸಿ ಶ್ರೀ ನಂದನ್, ರವರೊಂದಿಗೆ ಹಿರೀಸಾವೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ನಂಬರ್ ಪ್ಲೇಟ್ ಇಲ್ಲದೆ ಹುಲ್ಲು ತುಂಬಿದ ಮಹಿಂದ್ರಾ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಗೌರೀಶ್ ಬಿನ್  ರಮೇಶ್, 24 ವರ್ಷ, ಮತ್ತು ಶ್ರಿ ನಂದನ್ ಬಿನ್  ನಾಗರಾಜು,  23  ವರ್ಷ, ಚಿಕ್ಕಸೋರೆಕಾಯಿಪುರ ಗ್ರಾಮ, ಹಿರೀಸಾವೆ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ಗಿರೀಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಯಾರೋ ಕಳ್ಳರು ಮನೆಯ ಬೀಗ ಮುರಿದು ಬೆಳ್ಳಿ ಮತ್ತು ಚಿನ್ನಾಭರಣ ಕಳವು:
     ದಿನಾಂಕ: 19-01-2019 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಮಡಿವಾಳರ ಬೀದಿ ವಾಸಿ ಶ್ರೀಮತಿ ನಾಗಮ್ಮ, ರವರು  ಮನೆಗೆ ಬೀಗ ಹಾಕಿಕೊಂಡು ಮಗನ ಮನೆಯ ಗೃಹಪ್ರವೇಶಕ್ಕೆ ಕುಶಾಲನಗರಕ್ಕೆ ಹೋಗಿದ್ದು, ದಿನಾಂಕ: 20-01-2019 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ 60 ಗ್ರಾಂ 2 ಬೆಳ್ಳಿ ದೀಪ, 20 ಗ್ರಾಂ ತೂಕದ ಬೆಳ್ಳಿಲೋಟ, 6 ಗ್ರಾಂ ತೂಕದ 01 ಚಿನ್ನದ ಕಪಾಲಿ ಉಂಗುರ, 3 ಗ್ರಾಂ ತೂಕದ ಚಿನ್ನದ ತಾಳಿ, 5 ಗ್ರಾಂ ತೂಕದ ಚಿನ್ನದ ಚಿಕ್ಕ ಉಂಗುರ 6 ಗ್ರಾಂ ತೂಕದ ಚಿನ್ನದ ಹರಳಿನ ಓಲೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.       
ಕ್ಲುಲಕ ಕಾರಣ, ದೊಣ್ಣೆಯಿಂದ ಹೊಡೆದು ರಕ್ತಗಾಯ ಹಾಗೂ ಕೊಲೆ ಬೆದರಿಕೆ:
     ದಿನಾಂಕ:20-01-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಅಗ್ಗುಂದ ಗ್ರಾಮದ ವಾಸಿ ಶ್ರೀಮತಿ ರೇಖಾ, ರವರು ತಂದೆ ಶ್ರೀ ರಂಗಪ್ಪ ತಾಯಿ ಶ್ರೀಮತಿ ಗಂಗಮ್ಮ, ಅಕ್ಕ ಶಂಕರಮ್ಮ, ರವರೊಂದಿಗೆ ಮನೆಯಲ್ಲಿದ್ದಾಗ ಪಿರ್ಯಾದಿ ದೊಡ್ಡಪ್ಪ, ಶ್ರೀ ಗಂಗಾಧರಯ್ಯ ರವರ ಮನೆಯವರಿಗೂ ಮನೆ ಪಾಲು ಮಾಡಿಕೊಳ್ಳುವ ವಿಚಾರದಲ್ಲಿ ದ್ವೇಷದಿಂದ ಶ್ರಿ ಗಂಗಾಧರಯ್ಯ, ರವರ ಮಗ ಶ್ರೀ ನಾಗರಾಜ ಮತ್ತು ಸೊಸೆ ಶ್ರೀಮತಿ ಕೆಂಪಮ್ಮ, ರವರುಗಳು ಏಕಾ-ಏಕಿ ಜಗಳ ತೆಗೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಶ್ರೀಮತಿ ರೇಖಾ, ರವರು ತಂದೆ ಶ್ರೀ ರಂಗಪ್ಪ ತಾಯಿ ಶ್ರೀಮತಿ ಗಂಗಮ್ಮ, ಅಕ್ಕ ಶಂಕರಮ್ಮ, ರವರುಗಳಿಗೆ ದೊಣ್ಣೆಯಿಂದ ರಕ್ತಗಾಯಪಡಿಸಿ, ಕೊಲೆರುತ್ತಾರೆಂದು ಪಿರ್ಯಾದಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆ ಪ್ರಕರಣ ದಾಖಲಿಸಿ, ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.     
ಸೆಲ್ವೆದೊರೈ @ ಜಾಕಿಜಾನ್, ರವರನ್ನು ಮಚ್ಚುಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ:
      ದಿನಾಂಕ: 26-10-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಕಾಕನಮನೆ ಗ್ರಾಮದ ವಾಸಿ ಶ್ರೀ ಸೆಲ್ವದೊರೈ @ ಜಾಕಿಜಾನ್, ರವರು ಪತ್ನಿ ಶ್ರೀಮತಿ ಅಂಬಿಕಾ, ರವರು ಅದೇ ಗ್ರಾಮದ ವಾಸಿಗಳಾದ 1) ಶ್ರೀ ಮೋಹನ್ 2) ಶ್ರೀ ಚಂದ್ರ @ ಚಂದ್ರಧೇಖರ್, 3) ಶ್ರೀ ಆರ್. ಗಣೇಶ್, ರವರುಗಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿರುವ ಬಗ್ಗೆ ಪತ್ನಿ ಶ್ರೀಮತಿ ಅಂಬಿಕಗಳೊಂದಿಗೆ ಗಲಾಟೆ ಮಾಡಿದ್ದಕ್ಕೆ  ಶ್ರೀ ಅಂಬಿಕ, 3 ಜನರುನ್ನು ಮನೆಗೆ ಕರೆಯಿಸಿ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಕೊಲೆ ಮಾಡುವಂತೆ ಕುಮ್ಮಕ್ಕು ನೀಡಿದ್ದರಿಂದ ಈ ಮೇಲ್ಕಂಡ 3 ಆರೋಪಿಗಳು ಶ್ರೀ ಸೆಲ್ವದೊರೈ@ಜಾಕಿ ಜಾನ್, ವಿನಾಯಕ ಎಸ್ಟೇಟ್ ಕರೆದುಕೊಂಡು ಹೋಗಿ ಡ್ರಿಂಗ್ಸ್ ಮಾಡಿಸುತ್ತಿರುವಾಗ 1) ಮೋಹನ್ & 2) ಚಂದ್ರ @ ಚಂದ್ರಶೇಖರ್, ಮಚ್ಚುಕತ್ತಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ಕೊಲೆ ಮಾಡಿ ಸಾಕ್ಯಾಧಾರಗಳನ್ನು ಮೆರೆ ಮಾಚುವ ಉದ್ದೇಶದಿಂದ ಗುಂಡಿಯಲ್ಲಿ ಮುಚ್ಚಿಹಾಕಿದ್ದು, ಈ ಸಂಬಂದ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ತನಿಖೆಯನ್ನು ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು,, ಹಾಸನದ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಚಂದ್ರಶೇಖರ್, ಮರಗೂರು, ಪ್ರಕರಣ ವಿಚಾರಣೆ ನಡೆಸಿ, ಆರೋಪಿತರ ಮೇಲೆ ದೋಷಾರೋಪಣಾ ಸಾಬೀತಾಗಿ ಆರೋಪಿ 1) ಮೋಹನ, 2) ಚಂದ್ರ @ ಚಂದ್ರಶೇಖರ, 3) ಆರ್. ಗಣೇಶ, ಇವರುಗಳಿಗೆ 302 ರಡಿಯಲ್ಲಿ ಎಸಗಿದ ಅಪಾಧನೆಗೆ ಜೀವಾವಧಿ ಶಿಕ್ಷೆ, ಹಾಗೂ 10,000 /- ದಂಡ ಹಾಗೂ 1) ಮೋಹನ್ 2) ಚಂದ್ರ @ ಚಂದ್ರಶೇಖರ್, 3) ಆರ್. ಗಣೇಶ್, ಇವರುಗಳಿಗೆ 201 ರಡಿಯಲ್ಲಿ 3 ವರ್ಷಗಳ ಕಠಿಣ ಕಾರಗೃಹ ವಾಸ ಮತ್ತು 5 ಸಾವಿರ ದಂಡ ಮತ್ತು ದಂಡದ ಮೊತ್ತವನ್ನು ಮೃತ ಸೆಲ್ವೆದೊರೈ ರವರ ಮಕ್ಕಳಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ದಿನಾಂಕ: 18-01-2019 ರಂದು ತೀರ್ಪಿ ವಿಧಿಸಿ, ಆದೇಶಿಸಿರುತ್ತಾರೆ ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸರ್ಕಾರಿ ಅಭಿಯೋಜಕರು) ಶ್ರೀ ಕೃಷ್ಣ ಜಿ. ದೇಶಭಂಡಾರಿ, ರವರು ವಾದ ಮಂಡಿಸಿದ್ದರು.                                 

No comments: