ಪತ್ರಿಕಾ
ಪ್ರಕಟಣೆ ದಿನಾಂಕ: 20-08-2018
ಆಟೋ ಗೂಡ್ಸ್ ವಾಹನ
ಡಿಕ್ಕಿ, ಪಾದಚಾರಿ ಸಾವು: ದಿನಾಂಕ: 18-08-2018 ರಂದು
ರಾತ್ರಿ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ
ಹೋಬಳಿ, ಕಬ್ಬಳಿ ಗ್ರಾಮದ ವಾಸಿ ಶ್ರೀ ಕಾಂತರಾಜ, ಅದೇ ಗ್ರಾಮದ
ವಾಸಿ ಶ್ರೀ ಸೋಮಶೇಖರ್, ರವರೊಂದಿಗೆ ಹಾಸನದ ರಿಂಗ್ ರಸ್ತೆ, ತಮ್ಲಾಪುರ
ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13-ಸಿ-0271 ರ ಗೂಡ್ಸ್
ಆಟೋ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಕಾಂತರಾಜ್, ರವರಿಗೆ
ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ
ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ
ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಕಾಂತರಾಜ
ಬಿನ್ ನಂಜೇಗೌಡ, 42 ವರ್ಷ, ಕಬ್ಬಳಿ
ಗ್ರಾಮ, ದುದ್ದ ಹೋಬಳಿ, ಹಾಸನ
ತಾಲ್ಲೂಕು ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ದರ್ಶನ್, ರವರು ಕೊಟ್ಟ
ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗ ಕಾಣೆ : ದಿನಾಂಕ: 15-08-2018 ರಂದು
ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು
ಟೌನ್ನ ಕೆರೆ ಬೀದಿ ವಾಸಿ ಶ್ರೀ ಎಂ.ಡಿ. ಪರಾಜ್ಖಾನ್, ರವರು
ಮನೆಯಿಂದ ರಾಮನಾಥಪುರ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆಗೆ
ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು
ಶ್ರೀ ರಿಯಾಜ್ಖಾನ್, ರವರು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಎಂ.ಡಿ. ಪರಾಜ್ಖಾನ್
ಬಿನ್ ರಿಯಾಜ್ ಖಾನ್, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು
ಬಣ್ಣ, ಸಾಧಾರಾಣಾ ಮೈಕಟ್ಟು, ಮನೆಯಿಂದ
ಹೋಗುವಾಗ ಕೆಂಪು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ. ಈ ಹುಡುಗನ
ಸುಳಿವು ಸಿಕ್ಕಲ್ಲಿ 08175-226227 ಕ್ಕೆ ಸಂಪರ್ಕಿಸುವುದು
No comments:
Post a Comment