ಪತ್ರಿಕಾ ಪ್ರಕಟಣೆ ದಿನಾಂಕ: 04-05-2018.
ಅಪರಿಚಿತ ವಾಹನ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು
ದಿನಾಂಕ: 02-05-2018 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಚೆಲುವನಹಳ್ಳಿ ಗ್ರಾಮದ ರವಿ ಮತ್ತು ಗ್ರಾಮದ ನಾಗರಾಜು ಇಬ್ಬರೂ ಸಹ ಗವಿಮಠದ ರಸ್ತೆ ಪಕ್ಕ ಇರುವ ಶಿವಣ್ಣನ ಕೋಳಿ
ಪಾರಂನಲ್ಲಿ ಕೆಲಸ ಮುಗಿಸಿ ಇಬ್ಬರೂ ಟೀ ಕುಡಿದು ಬರಲು ಗವಿಮಠದ ಹತ್ತಿರದ ಹೋಟೆಲ್ ಗೆ ಹೋಗಿ ಟೀ ಕುಡಿದು ಎನ್ ಹೆಚ್-206 ಟಾರ್ ರಸ್ತೆಯ ಎಡಭಾಗದಲ್ಲಿ ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯ ಮುಂಭಾಗ
ಹೋಗುತ್ತಿದ್ದಾಗ ಹಿಂಬದಿಯಿಂದ ಅಂದರೆ ಬಾಣಾವಾರದಿಂದ ಅರಸೀಕೆರೆ ಕಡೆಗೆ ಹೋಗುತ್ತಿದ್ದ ಯಾವುದೋ
ಒಂದು ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಮಾಡಿದ
ಪರಿಣಾಮ ರವಿ ಬಿನ್ ಈರಪ್ಪ, 38 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ
ಅಣ್ಣ ಶ್ರೀ ನಾಗೇಶ ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ.
No comments:
Post a Comment