ಪತ್ರಿಕಾ ಪ್ರಕಟಣೆ ದಿನಾಂಕ: 19-03-2018
ಮನುಷ್ಯ ಕಾಣೆ
ದಿನಾಂಕ: 08-03-2018 ರಂದು ಮಧ್ಯಾಹ್ನ 03-30
ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು,
ಹಳ್ಳಿಮೈಸೂರು ಹೋಬಳಿ, ಗೊಹಳ್ಳಿ ಗ್ರಾಮದ ಬಸವರಾಜಪ್ಪ
ರವರು ಸಕರ್ಾರದಿಂದ ಬರುವ ತಿಂಗಳ ಮಾಸಾಶನ ಹಣದ
ಬಗ್ಗೆ ಪೋಸ್ಟ್ ಆಫೀಸಿನವರನ್ನು ವಿಚಾರಿಸಿಕೊಂಡು ಬರುತ್ತೇನೆಂದು ಮನೆಯಿಂದ ಹೋದವರು ವಾಪಸ್ ಮನೆಗೆ
ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ
ಮಾಡಿಕೊಡಬೇಕೆಂದು ಬಸವರಾಜಪ್ಪ ರವರ ಮಗ ಶ್ರೀ ಕುಮಾರ ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
ಕಾಣೆಯಾದ ವ್ಯಕ್ತಿಯ ಚಹರೆ: ಬಸವರಾಜಪ್ಪ,
70 ವರ್ಷ, ಕೋಲುಮುಖ, ಎಣ್ಣೆಗೆಂಪು ಬಣ್ಣ, ಕಪ್ಪು ಮತ್ತು ಬಿಳಿ ಮಿಶ್ರಿತ ತಲೆ ಕೂದಲು, ತೆಳುವಾದ ಶರೀರ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ
ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಬಿಳಿ ಬಣ್ಣದ ಪಂಚೆ ಧರಿಸಿರುತ್ತಾರೆ. ಕಾಣೆಯಾದ
ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಳ್ಳಿಮೈಸೂರು ಠಾಣೆ ಫೋನ್ ನಂ. 08175-260100 ಕ್ಕೆ ಸಂಪರ್ಕಿಸುವುದು.
No comments:
Post a Comment