* * * * * * HASSAN DISTRICT POLICE

Monday, March 19, 2018

PRESS NOTE : 18-03-2018


ಪತ್ರಿಕಾ ಪ್ರಕಟಣೆ            ದಿನಾಂಕ: 18-03-2018.

ಜೂಜಾಡುತ್ತಿದ್ದ 11 ಜನರ ಬಂಧನ, ಬಂಧಿತರಿಂದ 25200/- ನಗದು ವಶ :

           ದಿನಾಂಕ: 16-03-2018 ರಂದು ರಾತ್ರಿ 09-05 ಗಂಟೆ ಸಮಯದಲ್ಲಿ  ಗೊರೂರು ಪಟ್ಟಣ ಪೇಟೆ ಬೀದಿ, ಕಲೀಂಖಾನ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ರವಿಕುಮಾರ್, ಗೊರೂರು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಭಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ದರ್ಶನ್ ಬಿನ್ ಚಂದ್ರಶೇಖರ, 23 ವರ್ಷ, ಪೇಟೆಬೀದಿ, ಗೊರೂರು 2) ರಾಜಶೇಖರ ಬಿನ್ ಮಲ್ಲೇಶ, 38 ವರ್ಷ, ಮರಡಿ ಗ್ರಾಮ,ಅರಕಲಗೂಡು ತಾಲ್ಲೂಕು 3) ಅಭಿನಂದನ್ ಬಿನ್ ತಮ್ಮಣ್ಣ, 25 ವರ್ಷ, ಹೆಬ್ಬಾಲೆ, ಅರಕಲಗೂಡು ತಾಲ್ಲೂಕು 4) ಚಂದನ ಬಿನ್ ಪುಟ್ಟರಾಜು, 24 ವರ್ಷ, ಹಚ್ಆರ್ಪಿ ಕ್ವಾಟ್ರರ್ಸ್ ಗೊರೂರು 5) ಪ್ರಕಾಶ ಬಿನ್ ನಾಗವಡ್ಡರಹಳ್ಳಿ ಗ್ರಾಮ, ಅರಕಲಗೂಡು ತಾಲ್ಲೂಕು 6) ಮದನ್ಕುಮಾರ್ ಬಿನ್ ಮಾದೇಗೌಡ, 25 ವರ್ಷ, ಹಚ್ಆರ್ಪಿ ಕ್ವಾಟ್ರರ್ಸ್ ಗೊರೂರು 7) ಸಲೀಂ ಖಾನ್ ಬಿನ್ ಲತೀಫ್ ಖಾನ್, 55 ವರ್ಷ, ಪೇಟೆ ಬೀದಿ, ಗೊರೂರು 8) ಶಿವರಾಜು ಬಿನ್ ಮುತ್ತಣ್ಣ, 28 ವರ್ಷ, ಹಚ್ಆರ್ಪಿ ಕ್ವಾಟ್ರರ್ಸ್ ಗೊರೂರು 9) ಮಣಿಕಂಠ ಬಿನ್ ನಾಗರಾಜ್, 35 ವರ್ಷ, ಕೋಟೆ, ಅರಕಲಗೂಡು ಪಟ್ಟಣ 10) ಸುದರ್ಶನ ಬಿನ್ ಸುಬ್ಬಣ್ಣ, 24 ವರ್ಷ, ಕೋಟೆ, ಅರಕಲಗೂಡು ಪಟ್ಟಣ 11) ಕಲೀಂಖಾನ್ ಬಿನ್ ಲತೀಫ್ಖಾನ್, 53 ವರ್ಷ, ಪೇಟೆಬೀದಿ, ಗೊರೂರು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 25200/- ನಗದನ್ನು ಅಮಾನತ್ತುಪಡಿಸಿಕೊಂಡು ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಗಂಡಸು ಕಾಣೆ

     ದಿನಾಂಕ: 11-03-2018 ರಂದು ಸಂಜೆ 07-00 ಗಂಟೆ ಸಮಯದಲ್ಲಿ  ಅರಸೀಕೆರೆ ಪಟ್ಟಣ ಪೇಟೆ ಬೀದಿಯಲ್ಲಿ ಅಣ್ಣ ಸುರೇಶ್ಕುಮಾರ್ ರವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗೋಪಾಲ್ರಾಜ್ ರವರು ಹೊರಗಡೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಗೋಪಾಲ್ರಾಜ್ ರವರ ಅಣ್ಣ ಶ್ರೀ ಸುರೇಶ್ಕುಮಾರ್ ರವರು ದಿನಾಂಕ: 17-03-2018 ರಂದು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಗೋಪಾಲ್ರಾಜ್ ಬಿನ್ ಲೇಟ್ ಸುನ್ನಿ ಲಾಲ್, 30 ವರ್ಷ,  ರಜಪ್ರತ ಜನಾಂಗ, ಶೆಟ್ಟಿ ಗಾಮರ್ೆಂಟ್ಸ್ ನಲ್ಲಿ ಕೆಲಸ, ಪೇಟೆ ಬೀದಿ, ಅರಸೀಕೆರೆ, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಸುಳಿವು ಸಿಕ್ಕಲ್ಲಿ ಅರಸೀಕೆರೆ ನಗರ ಠಾಣೆ ಫೋನ್ ನಂ. 08174-232233 ಕ್ಕೆ ಸಂಪರ್ಕಿಸುವುದು.

ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ ಇಬ್ಬರು ಸಾವು.

          ದಿನಾಂಕ: 17-03-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್, ಕಸಬಾ ಹೋಬಳಿ, ಚಿಕ್ಕಗೊಂಡನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣೇಗೌಡ, ರವರು ತಮ್ಮ ಪರಿಚಯಸ್ಥ ಶ್ರೀ ರಂಗೇಗೌಡ, ಕರಿಮಾರನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕ್, ರವರೊಂದಿಗೆ ತಮ್ಮ ಕೆಎ-05-ಇ-5636 ನಂಬರಿನ ಹೀರೋ ಹೊಂಡಾ ಸಿಡಿ 100 ಬೈಕಿನಲ್ಲಿ ನುಗ್ಗೇಹಳ್ಳಿ ಕ್ರಾಸ್ನಿಂದ ಹಾಸನ ಕಡೆಗೆ ಎನ್ಹೆಚ್-75 ರ ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13-ಎಫ್-2246 ರ ಕೆಎಸ್ಆರ್ಟಿಸಿ ಬಸ್ನ ಚಾಲಕ ತನ್ನ ವಾಹನವನ್ನು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ  ಡಿಕ್ಕಿ ಮಾಡಿದ ಪರಿಣಾಮ, ಬೈಕಿನಲ್ಲಿದ್ದ  ಶ್ರೀ ಕೃಷ್ಣೇಗೌಡ ಮತ್ತು ಶ್ರೀ ರಂಗೇಗೌಡರವರು ಕೆಳಗೆ ಬಿದ್ದು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತ ಕೃಷ್ಣೇಗೌಡರವರ ಅಳಿಯ ಶ್ರೀ ದಿಲೀಪ್ಕುಮಾರ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚಿತ ವಾಹನ ಡಿಕ್ಕಿ ಹೆಂಗಸು ಸಾವು.
           ದಿನಾಂಕ: 18-03-2018 ರಂದು ಬೆಳಗಿನ ಜಾವ 4-30 ರಿಂದ 5-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕ್, ಅರೇಹಳ್ಳಿ ಹೋಬಳಿ, ಮೈಲಹಳ್ಳಿ ಗ್ರಾಮದ  ಶ್ರೀಮತಿ ಚಂದ್ರಮ್ಮ, ರವರು ಬಳ್ಳೂರು ಗ್ರಾಮದ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶ್ರೀಮತಿ ಚಂದ್ರಮ್ಮ, ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಮಲ್ಲೇಶ್, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: