* * * * * * HASSAN DISTRICT POLICE

Wednesday, March 7, 2018

PRESS NOTE : 07-03-2018


ಪತ್ರಿಕಾ ಪ್ರಕಟಣೆ     ದಿನಾಂಕ: 07-03-2018.
ಕೆಎಸ್ಆರ್ಟಿಸಿ ಬಸ್ ಆಟೋಗೆ ಡಿಕ್ಕಿ ಆಟೋದಲ್ಲಿದ್ದ ಇಬ್ಬರ ಸಾವು, ಇಬ್ಬರಿಗೆ ಗಾಯ.
             ದಿನಾಂಕ: 06-03-2018 ರಂದು ರಾತ್ರಿ 12-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಹಳೆಕಲ್ಲನಾಯ್ಕನಹಳ್ಳಿ ಗ್ರಾಮದ ಮಂಜುನಾಥ  ರವರು ಕೆಎ-18-ಬಿ-2736 ರ ಆಟೋದಲ್ಲಿ ಅಣ್ಣನ ಮಕ್ಕಳಾದ ವಿನಯ್, ಹರ್ಷ ಮತ್ತು ಅಂಚೆ ಕೊಪ್ಪಲು ಗ್ರಾಮದ  ಸಂತೋಷ ರವರೊಂದಿಗೆ  ಅರಸೀಕೆರೆ ತಾಲ್ಲೂಕು, ಕುರುವಾಂಕ ಗ್ರಾಮದ ರಾಜಣ್ಣ ರವರ ಮನೆಗೆ ಹಬ್ಬಕ್ಕೆ ಹೋಗಿ ವಾಪಸ್ ಊರಿಗೆ ಹೋಗಲು ಅರಸೀಕೆರೆ ಆರ್ಎಂಸಿ ಮಾಕರ್ೆಟ್ ಮುಂದೆ ಬಿಹೆಚ್ ರಸ್ತೆಯಲ್ಲಿ ಅರಸೀಕೆರೆ ನಗರದ ಲಕ್ಷ್ಮಿಪುರ ಕಡೆಗೆ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕೆಎ-14-ಎಫ್-0008 ರ ಕೆಎಸ್ಆರ್ಟಿಸಿ ಬಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬಂದು ಡಿಕ್ಕಿ ಮಾಡಿದ ಪರಿಣಾಮ       1) ಮಂಜುನಾಥ ಬಿನ್ ಬಸವರಾಜು, 36 ವರ್ಷ  2) ಸಂತೋಷ, 38 ವರ್ಷ, ಅಂಚೆಕೊಪ್ಪಲು, ಅರಸೀಕೆರೆ ಪಟ್ಟಣ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆಟೋದಲ್ಲಿದ್ದ ವಿನಯ್ ಮತ್ತು ಹರ್ಷನ ಮೈಕೈಗೆ ರಕ್ತಗಾಯವಾಗಿರುತ್ತದೆಂದು  ಮೃತ ಮಂಜುನಾಥ ರವರ ಅಣ್ಣ  ಶ್ರೀ ವೆಂಕಟೇಶ ರವರು ಕೊಟ್ಟ ದೂರಿನ ಮೇರೆಗೆ  ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಹುಡುಗಿ ಕಾಣೆ
      ದಿನಾಂಕ: 05-03-2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕಘನ್ನಿ ಗ್ರಾಮದ ಸ್ವಾಮಿಗೌಡ ಸಿ.ಕೆ. ರವರ ಮಗಳು  ಪ್ರಿಯಾಂಕ ಮನೆಯಿಂದ ಎಕ್ಸಾಮ ಪೀಜ್ ಕಟ್ಟಿ ಬರುವುದಾಗಿ ಚನ್ನರಾಯಪಟ್ಟಣಕ್ಕೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪ್ರಿಯಾಂಕ ರವರ ತಂದೆ ಶ್ರೀ  ಸ್ವಾಮಿಗೌಡ  ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಪ್ರಿಯಾಂಕ ಸಿ.ಎಸ್. ಬಿನ್ ಸ್ವಾಮಿಗೌಡ, 22 ವರ್ಷ, 5'5'' ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋದಿ ಮೈಬಣ್ಣ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪಕರ್ಿಸುವುದು.

No comments: