* * * * * * HASSAN DISTRICT POLICE

Monday, March 5, 2018

PRESS NOTE : 04-03-2018


ಪತ್ರಿಕಾ ಪ್ರಕಟಣೆ         ದಿನಾಂಕ: 04-03-2018.
ಲಾರಿ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು
            ದಿನಾಂಕ: 26-02-2018 ರಂದು ರಾತ್ರಿ 09-45 ಗಂಟೆ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ಹೋಬಳಿ, ಕಾಳೆಂಜಿ ಗ್ರಾಮದ ಹೆಚ್. ಜಗದೀಶ್ ರವರು ಹಾಸನ ಹೊರವಲಯದ ಬಿ.ಎಂ. ಬೈಪಾಸ್ ರಸ್ತೆಯ ಚಿಕ್ಕಮಂಡಿಗನಹಳ್ಳಿಯ ಹಾಲುಬಾಗಿಲು ಸರ್ಕಲ್ ಹತ್ತಿರ ರಸ್ತೆಯನ್ನು ನಡೆದುಕೊಂಡು ದಾಟುತ್ತಿರುವಾಗ ಸಕಲೇಶಪುರ ಕಡೆಯಿಂದ ಬಂದ ಕೆಎ-13-1585 ರ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 03-03-2018 ರಂದು ಹೆಚ್. ಜಗದೀಶ್ ಬಿನ್ ಲೇಟ್ ಅಣ್ಣಪ್ಪ, 27 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಸ್ವಾಮಿ ಹೆಚ್. ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: