¥ÀwæPÁ ¥ÀæPÀluÉ ¢£ÁAPÀ: 30-01-2018.
ಕಾರು ಡಿವೈಡರ್ ಗೆ ಡಿಕ್ಕಿ, ಒಬ್ಬರ ಸಾವು, ಇನ್ನೊಬರಿಗೆ ಗಾಯ
ದಿನಾಂಕ: 30-01-2018 ರಂದು ಬೆಳಿಗ್ಗೆ 07-00 ಗಂಟೆ
ಸಮಯದಲ್ಲಿ ತುಮಕೂರು ಜಿಲ್ಲೆ, ತುರುವೆಕೆರೆ ತಾಲ್ಲೂಕು, ಸಂಪಿಗೆ ಗ್ರಾಮದ ಸಂತೋಷ ರವರ ಬಾಬ್ತು ಕೆಎ-06-ಪಿ-5236 ರ
ಕಾರಿನಲ್ಲಿ ಪತ್ನಿ ಶೀತಲ್ ಮತ್ತು ಪ್ರಸಾದ್ ರವರೊಂದಿಗೆ ಹಾಸನಕ್ಕೆ ಸಂಬಂಧಿಕರ ಮನಗೆ ಹೋಗಿ ವಾಪಸ್
ಹಾಸನದಿಂದ ಊರಿಗೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಉದಯಪುರ
ಹತ್ತಿರ ಇರುವ ಎ2ಬಿ ಹೋಟೆಲ್ ಹತ್ತಿರ ಎನ್ಹೆಚ್-75 ರಸ್ತೆಯಲ್ಲಿ
ಹೋಗುತ್ತಿದ್ದಾಗ ಸಂತೋಷ್ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ರಸ್ತೆ ಮಧ್ಯೆ ಇರುವ ಡಿವೈಡರ್ ಮೇಲೆ ಹತ್ತಿಸಿದ ಪರಿಣಾಮ
ಕಾರು ಪಲ್ಟಿಯಾಗಿ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ
ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮದ್ಯೆ ಸಂತೋಷ್ ಬಿನ್ ಶ್ರೀನಿವಾಸ
ಅಯ್ಯಂಗಾರ್,
25 ವರ್ಷ ರವರು
ಮೃತಪಟ್ಟಿರುತ್ತಾರೆ. ಗಾಯಗೊಂಡಿದ್ದ ಸಂತೋಷ್ ರವರ ಪತ್ನಿ ಶೀತಲ್ ರವರನ್ನು ಚಿಕಿತ್ಸೆಗಾಗಿ
ಆಸ್ಪತ್ರೆಗೆ ಸೇರಿಸಿರುತ್ತಾರೆಂದು ಶ್ರೀ ಪ್ರಸಾದ್ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
No comments:
Post a Comment