* * * * * * HASSAN DISTRICT POLICE

Sunday, December 10, 2017

PRESS NOTE 09-12-2017

ಪತ್ರಿಕಾ ಪ್ರಕಟಣೆ                                      ದಿನಾಂಕ: 09-12-2017
ಹುಡುಗಿ ಕಾಣೆ

        ದಿನಾಂಕ: 07-12-2017 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮೆಲ್ಲಳ್ಳಿ ಗ್ರಾಮದ ದಿನೇಶ್ ರವರ ಮಗಳು ಪ್ರೇಮ ಮನೆಯವರೆಲ್ಲರೂ ಮಲಗಿದ್ದಾಗ ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪ್ರೇಮ ರವರ ತಂದೆ ಶ್ರೀ ದಿನೇಶ್ ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಪ್ರೇಮ ಬಿನ್ ದಿನೇಶ್, 21 ವರ್ಷ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಶಾಂತಿಗ್ರಾಮ ಠಾಣೆ ಫೋನ್ ನಂ. 08172-258038 ಕ್ಕೆ ಸಂಪರ್ಕಿಸುವುದು.                                          

ಬೈಕ್ಗೆ  ನಾಯಿ ಅಡ್ಡ ಬೈಕ್ ಸವಾರನ ಸಾವು


        ದಿನಾಂಕ: 08-12-2017 ರಂದು ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಸಿಂಧುವಳ್ಳಿ ಗ್ರಾಮದ ವೆಂಕಟೇಶ್ ರವರ ಬಾಬ್ತು ಕೆಎ-13-ಇಹೆಚ್-7367 ರ ಟಿವಿಎಸ್ ಎಕ್ಸ್ಎಲ್ ಬೈಕಿನ ಹಿಂಬದಿಯಲ್ಲಿ ತಮ್ಮ ಪತ್ನಿ ಮೀನಾಕ್ಷಿ ರವರನ್ನು ಕೂರಿಸಿಕೊಂಡು  ಆಲೂರು ತಾಲ್ಲೂಕು, ಕಸಬಾ ಹೋಬಳಿ, ಬೇಡಚವಳ್ಳಿ ಕಾಲೋನಿ ಹತ್ತಿರ ಆಲೂರು-ಬೈರಾಪುರ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆಯಲ್ಲಿ ಬಂದ ನಾಯಿಗೆ ಡಿಕ್ಕಿ ಮಾಡಿ ಬೈಕ್ ಸಮೇತ ರಸ್ತೆಗೆ ಬಿದ್ದುತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ವೆಂಕಟೇಶ್, 50 ವರ್ಷ ರವರು ಮೃತಪಟ್ಟಿರುತ್ತಾರೆಂದು ಶ್ರೀ ಕಿರಣ್ಕುಮಾರ್ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

No comments: