ಪತ್ರಿಕಾ
ಪ್ರಕಟಣೆ ದಿನಾಂಕ: 08-12-2017
ಕೆಎಸ್ಆರ್ಟಿಸಿ ಬಸ್ ಬುಲೆರೋ ಪಿಕಫ್
ವಾಹನಕ್ಕೆ ಡಿಕ್ಕಿ ಸವಾರ ಸಾವು
ದಿನಾಂಕ: 07-12-2017 ರಂದು
ಮಧ್ಯಾಹ್ನ 3-30 ಗಂಟೆ
ಸಮಯದಲ್ಲಿ ಕೇರಳ ರಾಜ್ಯ, ವೈನಾಡು ಜಿಲ್ಲೆ, ಅಂಡೂರು ವೀಡು, ಚಿರ್ಲ್ ಗ್ರಾಮದ ವಾಸಿ ಶ್ರೀ ಗರ್ವಸಿಸ್, ರವರ ಬಾಬ್ತು ಕೆಎಲ್-26-ಸಿ 8438 ರ ಬುಲೇರೋ
ಪಿಕಫ್ ವಾಹನದಲ್ಲಿ ಕೇರಳದಿಂದ-ಅರಸೀಕೆರೆ ಬಂದು ಟಮೋಟೋವನ್ನು ಲೋಡ್ ಮಾಡಿಕೊಂಡು ವಾಪಸ್ ಕೇರಳಕ್ಕೆ
ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಚನ್ನರಾಯಪಟ್ಟಣ-ಅರಸೀಕೆರೆ ಕಡೆಗೆ ಹೋಗುವ ರಸ್ತೆಯ
ಎಡಬದಿಯಲ್ಲಿ ಹೋಗುತ್ತಿದ್ದಾಗ ಅರಸೀಕೆರೆ ಕಡೆಯಿಂದ ಬಂದ ಕೆಎ-0-ಎಫ್-5038 ರ ಕೆಎಸ್ಆರ್ಟಿಸಿ ಬಸ್ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಗರ್ವಸಿಸ್ ಬಿನ್ ಸ್ಕಾರಿಯಾ, 41 ವರ್ಷ ರವರು
ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಜೇಮ್ಸ್ ರವರು
ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ.
ಹುಡುಗಿ ಕಾಣೆ
ದಿನಾಂಕ: 04-12-2017 ರಂದು
ಬೆಳಿಗ್ಗೆ 09-00 ಗಂಟೆ
ಸಮಯದಲ್ಲಿ ಹಾಸನ ನಗರ, ಚನ್ನಪಟ್ಟಣ ಹೌಸಿಂಗ್ ಬೋರ್ಡ, 3 ನೇ ಕ್ರಾಸ್ ವಾಸಿ, ಕೃಷ್ಣೇಗೌಡ
ರವರ ಮಗಳು ಕಾವ್ಯ ಎಂದಿನಂತೆ ಕೆ.ಆರ್.
ಪುರಂನಲ್ಲಿರುವ ಚೇತನ್ ಮೆಡಿಕಲ್ಸ್ ಏಜೆನ್ಸಿಗೆ ಕೂಲಿ ಕೆಲಸಕ್ಕೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ.
ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಕಾವ್ಯಳ ತಾಯಿ
ಶ್ರೀಮತಿ ವಿನೋದ ರವರು ದಿನಾಂಕ: 08-12-2017 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕಾವ್ಯ ಬಿನ್ ಲೇಟ್ ಕೃಷ್ಣೇಗೌಡ, 18 ವರ್ಷ, 5' ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು
ಬಣ್ಣ, ಕನ್ನಡ ಭಾಷೆ
ಮಾತನಾಡುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪರ್ಕಿಸುವುದು.
No comments:
Post a Comment