* * * * * * HASSAN DISTRICT POLICE

Tuesday, November 7, 2017

PRESS NOTE : 07-11-2017

ಪತ್ರಿಕಾ ಪ್ರಕಟಣೆ                        ದಿನಾಂಕ: 07-11-2017

ಅಪರಿಚಿತ ವಾಹನ ಡಿಕ್ಕಿ ಪಾದಾಚಾರಿ ಸಾವು

        ದಿನಾಂಕ: 06-11-2017 ರಂದು ಸಂಜೆ 07-00 ಗಂಟೆ ಸಮಯದಲ್ಲಿ ಶಿವಮೊಗ್ಗ ಟೌನ್, ಸಿದ್ದೇಶ್ವರ ನಗರ ವಾಸಿ ಅಲ್ಲಾ ಬಕಾಶ್ ರವರು ಹಾಸನ ನಗರ ಇಂಡಸ್ಟ್ರೀಯಲ್ ಏರಿಯಾದ ಟೈರ್ ರೀಸೋಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ತಮ್ಮ ಜೊತೆ ಕೆಲಸ ಮಾಡುವ ಶಫಿಇಬ್ಬರೂ ರಾಜೀವ್ ಇಂಜಿನಿಯರಿಂಗ್ ಕಾಲೇಜಿನ ಬಿ.ಎಂ. ಬೈಪಾಸ್ ರಸ್ತೆಯ ಕೌಶಿಕ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯನ್ನು ದಾಟುತ್ತಿದ್ದಾಗ ಹಾಸನದ ಚನ್ನಪಟ್ಟಣ ಸರ್ಕಲ್ ಕಡೆಯಿಂದ ಬಂದ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಅಲ್ಲಾ ಬಕಾಶ್ ರಸ್ತೆಯ ಮೇಲೆ ಬಿದ್ದಾಗ ಸದರಿ ವಾಹನದ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಅಲ್ಲಾ ಬಕಾಶ್ ಬಿನ್ ಮಹಮದ್ ಸಲಿಯಾ @ ಇಸ್ಮಾಯಿಲ್, 38 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ಸಮೀವುಲ್ಲಾ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಗಂಡಸು ಕಾಣೆ


     ದಿನಾಂಕ: 04-11-2017 ರಂದು  ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ  ಹಾಸನ ವಿದ್ಯಾನಗರ, ಎಂಸಿಇ ಕಾಲೇಜ್ ಹತ್ತಿರ ವಾಸಿ, ಟಿ.ದಾಮೋದರ್ ಪೈ ರವರ ಮಗ ಟಿ. ಗುರುರಾಜ್ ಪೈ ರವರು ಬೆಂಗಳೂರಿನ ಮದುವೆ ಸಮಾರಂಭಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಟಿ. ಗುರುರಾಜ ಪೈ ರವರ ತಂದೆ ಶ್ರೀ ಟಿ.ದಾಮೋದರ ಪೈ ರವರು ದಿನಾಂಕ: 06-11-2017 ರಂದು ಕೊಟ್ಟ ದೂರಿನ ಮೇರೆಗೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಟಿ.ಗುರುರಾಜ ಪೈ ಬಿನ್ ಟಿ. ದಾಮೋದರ ಪೈ, 37 ವರ್ಷ, 5'7'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ  ಬಡಾವಣೆ ಠಾಣೆ ಫೋನ್ ನಂ. 08172-268967 ಕ್ಕೆ ಸಂಪರ್ಕಿಸುವುದು.

No comments: