ಪತ್ರಿಕಾ ಪ್ರಕಟಣೆ
ದಿನಾಂಕ:06-11-2017
ಮೋಟಾರ್ ಬೈಕಿಗೆ ಕಾರು ಡಿಕ್ಕಿ ಒಂದು ಸಾವು : ದಿನಾಂಕ: 04-11-2017 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕ್, ಸಾಲಗಾಮೆ ಹೋಬಳಿ, ಗೌಡಗೆರೆ ಗ್ರಾಮದ
ವಾಸಿ ಕೃಷ್ಣಮೂರ್ತಿ ರವರ ಮಾವ ಚನ್ನೇಗೌಡ @ ಮರೀಗೌಡ ರವರು ತಮ್ಮ
ಪರಿಚಯಸ್ಥರಾದ ದುಶ್ಯಂತ್ ಕುಮಾರ್ ರವರು ಹೆರಗು ಗ್ರಾಮದ ಯೋಗೇಶ್ ರವರ ಬೈಕ್ ನಂ.ಕೆಎ-13-ಎಕ್ಸ್-3407 ರ ಬೈಕ್ ಅನ್ನು
ಪಡೆದುಕೊಂಡು ಚನ್ನೇಗೌಡರ ಮೊಮ್ಮಗಳ ಮದುವೆ ಲಗ್ನಪತ್ರಿಕೆ ಹಂಚಲು ಬೆಳಗುಲಿಯ ಸಂಬಂಧಿಕರ ಮನೆಗೆ
ಹೋಗಿ ಪತ್ರಿಕೆ ಕೊಟ್ಟು ವಾಪಸ್ಸು ಹೆರಗು ಗ್ರಾಮಕ್ಕೆ ಬರಲು ಬೆಳಗುಲಿ-ಹೆರಗು ರಸ್ತೆ ಅಮೃತ್ಮಹಲ್
ಫಾರೆಸ್ಟ್ ಮಧ್ಯೆಭಾಗದಲ್ಲಿರುವ ಟಾರು ರಸ್ತೆಯಲ್ಲಿ ಬರುವಾಗ ಅದೇ ಸಮಯಕ್ಕೆ ಹೆರಗು ಕಡೆಯಿಂದ ಬಂದ
ಕಾರೊಂದು ಅದರ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬೈಕಿಗೆ ಡಿಕ್ಕಿ ಮಾಡಿದ
ಪರಿಣಾಮ ಬೈಕ್ನ ಹಿಂಬದಿ ಕುಳಿತಿದ್ದ ಚನ್ನೇಗೌಡ @ ಮರೀಗೌಡರವರಿಗೆ
ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗೆ
ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಚನ್ನೇಗೌಡ @ ಮರೀಗೌಡ, 65ವರ್ಷ, ಹೆರಗು ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕ್ ರವರು
ಮೃತಪಟ್ಟಿರುತ್ತಾರೆಂದು ಮೃತರ ಅಳಿಯ ಕೃಷ್ಣಮೂತರ್ಿ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.
ಮಗುವಿನೊಂದಿಗೆ
ತಾಯಿ ಕಾಣೆ
ದಿನಾಂಕ:04-11-2017 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್ ಚಾಮುಡಿಹಳ್ಳಿಗ್ರಾಮದ ವಾಸಿ ಅಶೋಕ ರವರ
ಹೆಂಡತಿ ಶಾರದ ರವರು ತಮ್ಮ 2 ವರ್ಷ ಮಗ
ವಿಜಯಕುಮಾರನೊಂದಿಗೆ ಕೂಲಿ ಕೆಲಸಕ್ಕೆ ಹೋದವರು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆ
ಮಾಡಿಕೊಡಬೇಕೆಂದು ಶಾರದ ರವರ ಗಂಡ ಅಶೋಕ ರವರು ದಿನಾಂಕ:05-11-2017 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶಾರದ ಕೋಂ
ಅಶೋಕ, 30ವರ್ಷ, ಸುಮಾರು 4 ಅಡಿ ಎತ್ತರ, ಕೋಲು ಮುಖ ಸಾದಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಕೆಂಪು ನೈಟಿ ಧರಿಸಿರುತ್ತಾರೆ. ವಿಜಯಕುಮಾರ ಬಿನ್ ಅಶೋಕ, 8ವರ್ಷ, ಸುಮಾರು 3 ಅಡಿ ಎತ್ತರ, ಕೋಲು ಮುಖ, ತೆಳುವಾದ ಶರೀರ, ಕೆಂಪು ಬಣ್ಣ, ಕನ್ನಡ ಭಾಷೆ
ಮಾತನಾಡುತ್ತಾರೆ. ಆಕಾಶ ಬಣ್ಣದ ನೀಲಿ ಅರ್ಧ ತೋಳಿನ ಶರ್ಟ್, ನೀಲಿ
ಬಣ್ಣ ಚಡ್ಡಿ ಧರಿಸಿರುತ್ತೆ, ಇವರ ಸುಳಿವು
ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ
ಪೋನ್ ನಂ. 08176-252333ಕ್ಕೆ ಸಂಪರ್ಕಿಸುವುದು.
No comments:
Post a Comment