ಪತ್ರಿಕಾ ಪ್ರಕಟಣೆ ದಿನಾಂಕ: 24-09-2017
ಅಕ್ರಮವಾಗಿ ಲಾರಿಗೆ ಮರಳು ತುಂಬುತ್ತಿದ್ದವನ ಬಂಧನ ಮರಳು ಸಮೇತ ಲಾರಿ ವಶ:
ದಿನಾಂಕ:
24-09-2017 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಹಾಸನದ ಬೇಲೂರು ರಸ್ತೆ ವಿಜಯನಗರ ಬಡಾವಣೆಯ
ಆದಾಯ ತೆರಿಗೆ ಇಲಾಖೆಯ ಹಿಂಭಾಗದಲ್ಲಿ ಅಕ್ರಮವಾಗಿ ಲಾರಿಗೆ ಮರಳನ್ನು ತುಂಬಿಕೊಂಡು ಬಂದು ಅನ್
ಲೋಡ್ ಮಾಡುತ್ತಿದ್ದಾರೆಂದು ಶ್ರೀ ಎಂ. ಎನ್. ಶಶಿಧರ್, ಡಿವೈಎಸ್ಪಿ ಹಾಸನ ಉಪ-ವಿಭಾಗ, ರವರ ಆದೇಶದ
ಮೇರೆಗೆ ಶ್ರೀ ರವಿ, ಹೆಚ್ಸಿ-351, ಹಾಸನ ನಗರ ಠಾಣೆ ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ
ಕೆಎ-07-8739 ರ ಲಾರಿಗೆ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಲಾರಿಗೆ ಮರಳು ಅನ್ಲೋಡ್
ಮಾಡುತ್ತಿದ್ದು, ಲಾರಿಯಲ್ಲಿದ್ದ ಚಾಲಕನನ್ನು ಹಿಡಿದು ಹೆಸರು
ವಿಳಾಸ ಕೇಳಲಾಗಿ ಹರೀಶ್ ಬಿನ್ ದೊಡ್ಡತಮ್ಮೇಗೌಡ, 25 ವರ್ಷ,
ಲಾರಿ ಚಾಲಕ, ನ್ಯಾಮನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮರಳು
ಸಮೇತ ಲಾರಿಯನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಠಾಣೆಯಲ್ಲಿ ಪ್ರರಕಣ ದಾಖಲಿಸಿ ಕ್ರಮ
ಕೈಗೊಂಡಿರುತ್ತೆ.
ಕಾರು ಡಿಕ್ಕಿ ಪಾದಚಾರಿ ಸಾವು
ದಿನಾಂಕ:
23-09-2017 ರಂದು ಸಂಜೆ 7-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಜನತಾ ಹೌಸ್ ವಾಸಿ ಶ್ರೀ ಶಿವಯ್ಯ, ರವರು ಹಿರೀಸಾವೆಯ ಗಣೇಶ್ ಹೋಟೆಲ್ ಕಡೆಯಿಂದ ಮನೆಗೆ ಹೋಗಲು ಚನ್ನರಾಯಪಟ್ಟಣ
ತಾಲ್ಲೂಕು ಹಿರೀಸಾವೆಯ ಎನ್ಹೆಚ್-75 ರಸ್ತೆಯನ್ನು ದಾಟುತ್ತಿದ್ದಾಗ ಎದುರುಗಡೆಯಿಂದ ಬಂದ
ಕೆಎ-41-ಎ-6157 ರ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನ ಚಾಲಕ ತನ್ನ ವಾಹನವನ್ನು
ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಶ್ರೀ ಶಿವಯ್ಯ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಶಿವಯ್ಯ, 55ವರ್ಷ, ಜನತಾ ಹೌಸ್ ಹಿರೀಸಾವೆ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ
ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಮಂಜುನಾಥ್, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಸ್ವರಾಜ್ ಮಜ್ದಾ ಕ್ಯಾಂಟರ್ ಲಾರಿ ಬೈಕ್ಗೆ ಡಿಕ್ಕಿ ಒಂದು ಸಾವು, ಇಬ್ಬರಿಗೆ ಗಾಯ
ದಿನಾಂಕ:
22-09-2017 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳೀ, ಚಿಟ್ಟನಹಳ್ಳಿ ಗ್ರಾಮದ ವಾಸಿ ಶ್ರೀ ಪಾಪಣ್ಣ,
ರವರ ಬಾಬ್ತು ಕೆಎ-13-ಪಿ-8028ರ ಬಜಾಜ್ ಡಿಸ್ಕವರಿ
ಬೈಕ್ನಲ್ಲಿ ಮಗ ಕು|| ರೇಣುಕುಮಾರ್ ಹಾಗೂ ಸಂಬಂಧಿಕರಾದ ಶ್ರೀ
ಶಾಂತಕುಮಾರ್ ನೊಂದಿಗೆ ರೇಣುಕಯಲ್ಲಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಬರಲು ಹಾಸನ
ತಾಲ್ಲೂಕು, ದುದ್ದ ಹೋಬಳಿ, ಸೋಮನಹಳ್ಳಿ ಹತ್ತಿರ ಕಬಳಿಹೊಸಳ್ಳಿ ಗ್ರಾಮದ ಕಡೆಗೆ ಬರುವ ರಸ್ತೆಯಲ್ಲಿ
ಹೋಗುತ್ತಿದ್ದಾಗ ಎದುರುನಿಂದ ಬಂದ ಸಿಆರ್ಟಿ-7861 ನೇ ಸ್ವರಾಜ್ ಮಜ್ದಾ ಕ್ಯಾಂಟರ್ ಲಾರಿ ಚಾಲಕ
ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ
ಪಾಪಣ್ಣ, ಶ್ರೀ ಶಾಂತಕುಮಾರ್ ಕು|| ರೇಣುಕುಮಾರ್, ರವರುಗಳಿಗೆ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,
ಕು|| ರೇಣುಕುಮಾರ್,
ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದರಿಂದ
ಹೆಚ್ಚಿನ ಚಿಕತ್ಸೆಗಾಗಿ ಹಾಸನ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದ್ದು, ಕು|| ರೇಣುಕುಮಾರ್ ಬಿನ್ ಪಾಪಣ್ಣ, 18 ವರ್ಷ, ಚಿಟ್ಟನಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ರವರು ಚಿಕಿತ್ಸೆ
ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತ ತಂದೆ ಶ್ರೀ ಪಾಪಣ್ಣ, ರವರು ಕೊಟ್ಟ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತೆ.
ಹುಡುಗ ಕಾಣೆ
ದಿನಾಂಕ:
21-09-2017 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಮರವಳಲು ಗ್ರಾಮದ ವಾಸಿ ಶ್ರೀ ಗಂಗಯ್ಯ ರವರ ಮಗ
ಕು|| ರವಿಕುಮಾರ, ಹಾಸನ ವಿದ್ಯಾನಿಕೇತನ ಕಾಲೇಜಿನಲ್ಲಿ ಡಿಪ್ಲೊಮೊ ವ್ಯಾಸಂಗ ಮಾಡಿಕೊಂಡಿದ್ದು,
ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ
ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ,. ಪತ್ತೆಮಾಡಿಕೊಡಬೇಕೆಂದು ಕು|| ರವಿಕುಮಾರ್ನ ತಂದೆ ಶ್ರೀ ಗಂಗಯ್ಯ, ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕು|| ರವಿಕುಮಾರ್ ಬಿನ್ ಗಂಗಯ್ಯ, 21 ವರ್ಷ,
5'5' ಅಡಿ ಎತ್ತರ, ಗೋದಿ ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ
ಚೆಕ್ಸ್ ಶಟರ್್ ಮತ್ತು ಕಪ್ಪು ಫ್ಯಾಂಟ್ ಧರಿಸಿರುತ್ತಾನೆ. ಈ ಹುಡುಗನ ಸುಳಿವು ಸಿಕ್ಕಲ್ಲಿ
08175-220249 ಕ್ಕೆ ಸಂಪರ್ಕಿಸುವುದು.
ಹುಡುಗ ಕಾಣೆ
ದಿನಾಂಕ:
20-09-2017 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳೀ, ಬೀಕನಹಳ್ಳಿ ಗ್ರಾಮದ ವಾಸಿ ಶ್ರೀ ಬಸವೇಗೌಡ,
ರವರ ಮಗ ಕು|| ರಾಘವೇಂದ್ರ, ರವರ ಬಾಬ್ತು ಕೆಎ-13-ಜೆ5911 ರ ಹೀರೀ ಹೊಂಡಾ
ಸಿಡಿ 100 ಬೈಕ್ನಲ್ಲಿ ಹೊಳೆನರಸೀಪುರ ತಾಲ್ಲೂಕು, ಕಡವಿನಕೋಟೆ
ಗ್ರಾಮದ ಸಂಬಂಧಿಕರ ಮನೆಗೆ ಮಹಾಲಯ ಅಮಾವಾಸೆ ಹಬ್ಬಕ್ಕೆ ಹೋಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ
ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರಾಘವೇಂದ್ರನ ತಾಯಿ ಶ್ರೀಮತಿ ಧನಲಕ್ಷ್ಮೀ, ರವರು ದಿನಾಂಕ: 23-09-2017 ರಂದು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕು|| ರಾಘವೇಂದ್ರ ಬಿನ್ ಬಸವೇಗೌಡ, 18 ವರ್ಷ,
5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ, ಮತ್ತು ಜೀನ್ಸ್ ಫ್ಯಾಂಟ್ ಧರಿಸಿರುತ್ತಾನೆ. ಈ ಹುಡುಗನ ಸುಳಿವು ಸಿಕ್ಕಲ್ಲಿ
08172-225475 ಕ್ಕೆ ಸಂಪರ್ಕಿಸುವುದು.
No comments:
Post a Comment