* * * * * * HASSAN DISTRICT POLICE

Monday, September 25, 2017

PRESS NOTE : 23-09-2017



ಪತ್ರಿಕಾ ಪ್ರಕಟಣೆ                                                               ದಿನಾಂಕ: 23-09-2017.
ಹುಡುಗ ಕಾಣೆ


         ದಿನಾಂಕ: 20-09-2017 ರಂದು ಸಂಜೆ 07-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಬೀಕನಹಳ್ಳಿ ಗ್ರಾಮದ ಬಸವೇಗೌಡ ರವರ ಮಗ ರಾಘವೇಂದ್ರರವರು ಕಡುವಿನಕೋಟೆ ಮಹಾಲಯ ಅಮಾವಾಸ್ಯೆ ಹಬ್ಬಕ್ಕೆ  ಹೋಗಿ ಬರುತ್ತೇನೆಂದು  ಕೆಎ-13-ಜೆ-5911 ಹಿರೋ ಹೊಂಡಾ ಸಿಡಿ 100 ಬೈಕಿನಲ್ಲಿ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ರಾಘವೇಂದ್ರ ರವರ ತಾಯಿ ಶ್ರೀಮತಿ ಧನಲಕ್ಷ್ಮಿ ರವರು ದಿನಾಂಕ: 22-09-2017 ರಂದು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಕಾಣೆಯಾದ ಹುಡುಗನ ಚಹರೆ: ರಾಘವೇಂದ್ರ ಬಿನ್ ಬಸವೇಗೌಡ, 18 ವರ್ಷ, 5'5'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ ಗೊರೂರು ಠಾಣೆ ಫೋನ್ ನಂ. 08172-225475 ಕ್ಕೆ ಸಂಪರ್ಕಿಸುವುದು.

No comments: