ಪತ್ರಿಕಾ ಪ್ರಕಟಣೆ
ದಿನಾಂಕ: 23-09-2017.
ಹುಡುಗ ಕಾಣೆ
ದಿನಾಂಕ: 20-09-2017 ರಂದು ಸಂಜೆ 07-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ
ಹೋಬಳಿ, ಬೀಕನಹಳ್ಳಿ ಗ್ರಾಮದ ಬಸವೇಗೌಡ ರವರ ಮಗ ರಾಘವೇಂದ್ರರವರು
ಕಡುವಿನಕೋಟೆ ಮಹಾಲಯ ಅಮಾವಾಸ್ಯೆ ಹಬ್ಬಕ್ಕೆ ಹೋಗಿ
ಬರುತ್ತೇನೆಂದು ಕೆಎ-13-ಜೆ-5911
ಹಿರೋ ಹೊಂಡಾ ಸಿಡಿ 100 ಬೈಕಿನಲ್ಲಿ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ.
ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರಾಘವೇಂದ್ರ ರವರ ತಾಯಿ ಶ್ರೀಮತಿ ಧನಲಕ್ಷ್ಮಿ ರವರು
ದಿನಾಂಕ: 22-09-2017 ರಂದು ಕೊಟ್ಟ ದೂರಿನ ಮೇರೆಗೆ ಗೊರೂರು ಠಾಣೆಯಲ್ಲಿ
ಪ್ರಕರಣ ದಾಖಲಿಸಿರುತ್ತೆ. ಕಾಣೆಯಾದ ಹುಡುಗನ ಚಹರೆ: ರಾಘವೇಂದ್ರ ಬಿನ್ ಬಸವೇಗೌಡ, 18 ವರ್ಷ, 5'5'' ಅಡಿ
ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಹುಡುಗನ
ಬಗ್ಗೆ ಸುಳಿವು ಸಿಕ್ಕಲ್ಲಿ ಗೊರೂರು ಠಾಣೆ ಫೋನ್ ನಂ. 08172-225475 ಕ್ಕೆ ಸಂಪರ್ಕಿಸುವುದು.
No comments:
Post a Comment