ಈ ದಿವಸ ಅಂದರೆ ದಿನಾಂಕ 20/03/2020 ರಂದು ಹಾಸನ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್
ಅಧಿಕಾರಿಯವರು ಸರಹದ್ದಿನಲ್ಲಿರುವ ಅಟೋರಿಕ್ಷಾ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ತಪ್ಪದೇ
ಪಾಲನೆ ಮಾಡುವಂತೆ ಹಾಗೂ ಬಾಡಿಗೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು
ಬರುತ್ತಿದ್ದು, ಈ ಬಗ್ಗೆ ಅಟೋ ಚಾಲಕರು ಸಾರ್ವಜನಿಕರಿಂದ ಹಾಗೂ
ಜಿಲ್ಲೆಗೆ ಬರುವ ಪ್ರವಾಸಿಗಾರರ ಜೊತೆಯಲ್ಲಿ ಸೌಜನ್ಯದಿಂದ ವತರ್ಿಸುವಂತೆ ಮತ್ತು ನಿಗದಿಪಡಿಸಿರುವ
ಹಣವನ್ನು ಪಡೆಯುವಂತೆ ತಿಳುವಳಿಕೆಯನ್ನು ನೀಡಿದ್ದು, ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಬಗ್ಗೆ ಅಟೋರಿಕ್ಷಾ ಚಾಲಕರ ವಿರುದ್ದ
ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಲಾಗುವೆಂದು ಎಚ್ಚರಿಕೆಯನ್ನು ನೀಡಲಾಗಿದೆ.
ಹಾಗೂ ಅಟೋರಿಕ್ಷಾ ಚಾಲಕರು/ಮಾಲೀಕರಿಗೆ ಕೋರೋನಾ-19 ಸಂಕ್ರಾಮಿಕ ರೋಗದ ಬಗ್ಗೆ ಅನುಸರಿಸಬೇಕಾದ ಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ
ಪಾಲನೆ ಮಾಡುವಂತೆ ತಿಳುವಳಿಕೆಯನ್ನು ನೀಡಲಾಯಿತು.
No comments:
Post a Comment