* * * * * * HASSAN DISTRICT POLICE

Tuesday, September 11, 2018

PRESS NOTE : 10-09-2018


ಪತ್ರಿಕಾ ಪ್ರಕಟಣೆ             ದಿನಾಂಕ: 10-09-2018.


ಜೂಜಾಡುತ್ತಿದ್ದ 11 ಜನರ ಬಂಧನ, ಬಂಧಿತರಿಂದ ಸುಮಾರು 1,900/- ನಗದು ವಶ:  ದಿನಾಂಕ: 09-09-2018 ರಂದು ಸಂಜೆ 8-00 ಗಂಟೆ ಸಮಯದಲ್ಲಿ ಅರಸೀಕೆರೆ ನಗರ ಸುಬ್ರಹ್ಮಣ್ಯನಗರದ ಪ್ಲೇಗಿನಮ್ಮ ದೇವಸ್ಥಾನದ ಪಕ್ಕದ ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಯೋಗಾಂಜನಪ್ಪ, ಪಿಐ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಾಲತೇಶ್ಕುಮಾರ ಬಿನ್ ಚಿಕ್ಕಣ್ಣ, ಪೈಂಟಿಂಗ್ ಕೆಲಸ, ರೈಲ್ವೆ ವಸತಿ ಗೃಹ ಅರಸೀಕೆರೆ 2) ಮಂಜು ಬಿನ್ ಚಂದ್ರ, 27 ವರ್ಷ, ಆಟೋ ಡ್ರೈವರ್ ಸುಬ್ರಮಣ್ಯ ನಗರ, ಅರಸೀಕೆರೆ ಟೌನ್ 3) ಆನಂದ್ ರಾಜ್ ಬಿನ್ ಚಂದ್ರ, 27 ವರ್ಷ, ಪೈಂಟಿಂಗ್ ಕೆಲಸ ಚಚರ್್ ಕಾಲೋನಿ, ರೈಲ್ವೆ ವಷತಿ ಗೃಹ, ಅರಸೀಕೆರೆ ಟೌನ್ 4) ಆಂಥೋಣಿ ಬಿನ್ ಬಾಬಿ, 26 ವರ್ಷ, 6ನೇ ಕ್ರಾಸ್, ಹಾಸನ ರಸ್ತೆ, ಅರಸೀಕೆರೆ ಟೌನ್ 5) ಆಕಾಶ್ ಬಿನ್ ಪಾಂಡುರಂಗ, ಕೋರಿಯರ್ ಕೆಲಸ, ಸುಬ್ರ ಮಣ್ಯನಗರ, ಅರಸೀಕೆರೆ ಟೌನ್ 6) ಶಶಿ ಬಿನ್ ಲೇಟ್ ಶಿವರಾಜ್, 26 ವರ್ಷ, ಡ್ರೈವರ್ ಕೆಲಸ, ಚಚರ್್ ಕಾಲೋನಿ, ಅರಸೀಕೆರೆ ಟೌನ್, 7) ಜಾನ್ಸನ್ ಬಿನ್ ಲೇಟ್ ಆಥೋಣಿದಾಸ್, 26 ವರ್ಷ, ರೈಲ್ವೆ ವಸತಿ ಗೃಹ, ಅರಸೀಕೆರೆ ಟೌನ್. 8) ಅಜಯ್ ಬಿನ್ ಹಿಸಕಯ್ಯ, 26 ವರ್ಷ, ರೈಲ್ವೆ ವಷತಿ ಗೃಹ, ಅರಸೀಕೆರೆ ಟೌನ್ 9) ಪ್ರವೀಣ್ ಬಿನ್ ಸ್ವಾಮಿ, 25 ವರ್ಷ, ಚಚರ್್ ಕಾಲೋನಿ, ಅರಸೀಕೆರೆ ಟೌನ್. 10) ಮಂಜು ಬಿನ್ ರಾಮೇಗೌಡ, 30 ವರ್ಷ, ಚರ್ಚ ಕಾಲೋನಿ, ಅರಸೀಕೆರೆ ಟೌನ್ 11) ಕಿರಣ್ಕುಮಾರ್ ಬಿನ್ ಪ್ರಸಾದ್, 28 ವರ್ಷ, ರೈಲ್ವೆ ವಸತಿ ಗೃಹ, ಅರಸೀಕೆರೆ ಟೌನ್ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1.900/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಡಿಕ್ಕಿ, ಪಾದಚಾರಿ ಸಾವು : ದಿನಾಂಕ: 09-09-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಎಸ್. ಶ್ರವಣಬೆಳಗೊಳ ಹೋಬಳಿ, ಬೆಕ್ಕ ಗ್ರಾಮದ ವಾಸಿ ಶ್ರೀಮತಿ ಜಯಮ್ಮ, ರವರು ಮಗಳು ಶೋಭಾಳ ಮನೆಯಾದ ಚನ್ನರಾಯಪಟ್ಟಣ ತಾಲ್ಲೂಕು, ಅರೆಕೆರೆ ಗ್ರಾಮಕ್ಕೆ ಬಂದಿದ್ದು, ಶ್ರೀಮತಿ ಜಯಮ್ಮ, ರವರು ಅರೆಕೆರೆ ಗ್ರಾಮದ ಹಿರೀಸಾವೆ-ಶ್ರವಣಬೆಳಗೊಳ ರಸ್ತೆ, ಹತ್ತಿರ ಸಾರ್ವಜನಿಕರ ನೀರಿನ ಟ್ಯಾಂಕ್ನಿಂದ ನೀರು ತುಂಬಿಸುತ್ತಿದ್ದಾಗ ಕೆಎ-03, ಇಎನ್-3722 ರ ಬಜಾಜ್ ಸಿಟಿ-100ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ಜಯಮ್ಮ ಮತ್ತು ಶ್ರೀ ಶೇಖರ್, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಳ್ಳೂರಿನ ಎ.ಸಿ. ಗಿರಿ, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಶ್ರೀಮತಿ ಜಯಮ್ಮ, 65 ವರ್ಷ, ಬೆಕ್ಕ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಅರಸೀಕೆರೆ ತಾಲ್ಲೂಕು ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಮಗಳು ಶ್ರೀಮತಿ ಶೋಭಾ, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


No comments: