* * * * * * HASSAN DISTRICT POLICE

Thursday, August 2, 2018

HASSAN DISTRICT PRESS NOTE 02-08-2018


                                  ಪತ್ರಿಕಾ ಪ್ರಕಟಣೆ                          ದಿನಾಂಕ: 02-08-2018

ಕಾರು ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು:
      ದಿನಾಂಕ: 31-07-2018 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬಿ.ಕಾಟೀಹಳ್ಳಿ ಗ್ರಾಮದ ಸೋಮಶೇಖರ ರವರು ದುದ್ದ ಹೋಬಳಿ, ಕಟ್ಟೆಹಳ್ಳಿ ಗ್ರಾಮದಿಂದ ಜಮೀನಿನ ಕೆಲಸ ಮುಗಿಸಿಕೊಂಡು ವಾಪಸ್ ಹಾಸನದ ಬಿ.ಕಾಟೀಹಳ್ಳಿಯಲ್ಲಿರುವ ವಾಸದ ಮನೆಗೆ ಹೋಗಲು ಸಿಎಂಎಂ 1656 ನೇ ಬಜಾಜ್ ಚೇತಕ್ ಬೈಕಿನಲ್ಲಿ  ಹಾಸನ-ದುದ್ದ ರಸ್ತೆ ನಂದಿತ ಫಾರಂ ಸಮೀಪ ಹೋಗುತ್ತಿದ್ದಾಗ ಎದುರುಗಡೆಯಿಂದ ಹಾಸನ ಕಡೆಯಿಂದ ಬಂದ ಕೆಎ-22-ಎಂಎ-4343 ರ ಚೆವರಲೇಟ್ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಯ ಪಕ್ಕದ ಗುಂಡಿಗೆ ಬಿದ್ದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಪರೀಕ್ಷಿಸಿದ ವೈದ್ಯರು ಸೋಮಶೇಖರ, 55 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಮಂಜುನಾಥ ರವರು ಕೊಟ್ಟ ದೂರಿನ ಮೇರೆಗೆ ದುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಜೂಜಾಡುತ್ತಿದ್ದ 10 ಜನರ ಬಂಧನ, ಬಂಧಿತರಿಂದ 17,340/- ನಗದು ವಶ:
    ದಿನಾಂಕ: 01-08-2018 ರಂದು ಸಂಜೆ 05-15 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಗಂಡಸಿ ಗ್ರಾಮದ  ಕೆರೆಯ ಮೂಲೆಯಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಶಬ್ಬೀರ್ ಹುಸೇನ್, ಗಂಡಸಿ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಧು, 32 ವರ್ಷ, ಗಂಡಸಿ ಗ್ರಾಮ, ಅರಸೀಕೆರೆ ತಾಲ್ಲೂಕು 2) ಸೈಯದ್ ತಬರಕ್, 30 ವರ್ಷ 3) ಅಮಾನುಲ್ಲಾ, 31 ವರ್ಷ 4) ಮಲ್ಲಿಕಾಜರ್ುನ, 28 ವರ್ಷ 5) ಶಿವಲಿಂಗಪ್ಪ, 45 ವರ್ಷ 6) ಮಂಜುನಾಥ, 22 ವರ್ಷ 7) ಯಶವಂತ, 20 ವರ್ಷ 8) ತಿಮ್ಮಪ್ಪ, 35 ವರ್ಷ 9) ನಯಾಜ್, 26 ವರ್ಷ 10) ರವಿ, 42 ವರ್ಷ ಎಲ್ಲರೂ ಗಂಡಸಿ ಗ್ರಾಮ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ  17,340/- ನಗದನ್ನು ಅಮಾನತ್ತುಪಡಿಸಿಕೊಂಡು ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಮನುಷ್ಯ ಕಾಣೆ

       ದಿನಾಂಕ: 21-07-2018 ರಂದು  ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ  ಹಾಸನ ಶಾಂತಿನಗರ, 5 ನೇ ಕ್ರಾಸ್ ವಾಸಿ ಅನಿಲ್ಕುಮಾರ್ ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮಂಜುನಾಥ ರವರ ಪತ್ನಿ ಶ್ರೀಮತಿ  ಲೀಲಾವತಿ ರವರು ದಿನಾಂಕ: 01-08-2018 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನ ಚಹರೆ: ಮಂಜುನಾಥ, 40 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ಮನುಷ್ಯನ ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ಷನ್ ಮೊಹಲ್ಲಾ ಠಾಣೆ ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು.                        

No comments: