* * * * * * HASSAN DISTRICT POLICE

Monday, January 1, 2018

PRESS NOTE : 01-01-2018

ಪತ್ರಿಕಾ ಪ್ರಕಟಣೆ              ದಿನಾಂಕ: 01-01-2018

ಕಾರು ಪಲ್ಟಿ ಕಾರಿನಲ್ಲಿದ್ದ ಇಬ್ಬರ ಸಾವು, ಒಬ್ಬರಿಗೆ ಗಾಯ.

              ದಿನಾಂಕ: 31-12-2017 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬಾಗೀವಾಳು ಗ್ರಾಮದ ವಾಸಿ ಶ್ರೀ ಪ್ರದೀಪ್ ರವರ ಬಾಬ್ತು ಕೆಎ-04, ಎಂಟಿ-6520 ರ ಆಲ್ಟೋ ಕಾರಿನಲ್ಲಿ ಸ್ನೇಹಿತರಾದ ಶ್ರೀ ಮಹೇಶ್, ಶ್ರೀ ಮನು ಮತ್ತು ಶ್ರೀ ಲೋಕೇಶ್, ರವರುಗಳೊಂದಿಗೆ ಬೆಂಗಳೂರಿನಿಂದ ಚನ್ನರಾಯಪಟ್ಟಣ ತಾಲ್ಲೂಕು, ಬಾಗಿವಾಳು ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ-ಅರಸೀಕೆರೆ ರಸ್ತೆ, ವೈ ಶಿಂಗೇನಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಶ್ರೀ ಪ್ರದೀಪ ಬಿನ್ ಈಶ್ವರಪ್ಪ, 28 ವರ್ಷ, ಬಾಗೀವಾಳು ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಮತ್ತು ಶ್ರೀ ಮನು ಬಿನ್  ಬೈರಣ್ಣಶೆಟ್ಟಿ, 28 ವರ್ಷ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸ್ನೇಹಿತರಾದ ಶ್ರೀ ಮಹೇಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ಹೆಂಗಸು ಕಾಣೆ
               ದಿನಾಂಕ: 27-12-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿಚನ್ನರಾಯಪಟ್ಟಣದ ಮೇಘಲಕೆರೆ, ನಿರ್ಮಲ ಕಾನ್ವೆಂಟ್ ಹತ್ತಿರ ವಾಸಿ ಶ್ರೀ ಚಿನ್ನಸ್ವಾಮಿ, ರವರ ಪತ್ನಿ ಶ್ರೀಮತಿ  ಮೀನಾಕ್ಷಿ, ರವರು ಮನೆಯಿಂದ ಹೊರಗೆ ಹೋದವರುಇದುವರೆವಿಗೂ ವಾಪಸ್ ಮನೆಗೆ ಬಾರದೆಕಾಣೆಯಾಗಿರುತ್ತಾರೆ. ಎಲ್ಲಾಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಮೀನಾಕ್ಷಿ, ರವರ ಪತಿ ಶ್ರೀ ಚಿನ್ನಸ್ವಾಮಿ, ರವರುಕೊಟ್ಟದೂರಿನ ಮೇರೆಗೆಚನ್ನರಾಯಪಟ್ಟಣ ನಗರಠಾಣೆಯಲ್ಲಿ ಪ್ರಕರಣದಾಖಲಾಗಿರುತ್ತದೆ.ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಮೀನಾಕ್ಷಿ ಕೋಂ ಚಿನ್ನಸ್ವಾಮಿ, 35 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತುರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-252237 ಕ್ಕೆ ಸಂಪರ್ಕಿಸುವುದು.

No comments: