ಪತ್ರಿಕಾ ಪ್ರಕಟಣೆ
ದಿನಾಂಕ: 19-11-2017.
ಅಪರಿಚಿತ ವಾಹನ ಆಟೋಗೆ ಡಿಕ್ಕಿ, ಆಟೋ ಚಾಲಕ ಸಾವು
ದಿನಾಂಕ: 19-11-2017 ರಂದು ಬೆಳಗಿನ ಜಾವ 4-15 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹನಿಕೆ ಗ್ರಾಮದ ವಾಸಿ ಶ್ರೀ ಅಶೋಕ, ರವರ ಬಾಬ್ತು ಕೆಎ-46-7010 ರ ಆಟೋವನ್ನು ತೆಗೆದುಕೊಂಡು ಬೇಲೂರು-ಚಿಕ್ಕಮಗಳೂರು ರಸ್ತೆ, ದುಮ್ಮೇನಹಳ್ಳಿ ಗಡಿಯ ಹತ್ತಿರ ಹೋಗುತ್ತಿದ್ದಾಗ ಯಾವುದೋ
ವಾಹನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಆಟೋಗೆ ಡಿಕ್ಕಿ ಮಾಡಿದ ಪರಿಣಾಮ
ಶ್ರೀ ಆಶೋಕ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೇಲೂರು ಸಕರ್ಾರಿ ಆಸ್ಪತ್ರೆಗೆ
ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀ ಅಶೋಕ 21 ವರ್ಷ, ಹನಿಕೆ ಗ್ರಾಮ, ಬೇಲೂರು ತಾಲ್ಲೂಕು, ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತರ
ಸಂಬಂಧಿಕರಾದ ಶ್ರೀ ಗಜೇಂದ್ರ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಮರಳು ತುಂಬುತ್ತಿದ್ದ ಇಬ್ಬರ ಬಂಧನ, ಮರಳು ಸಮೇತ ಟಿಪ್ಪರ್ ಲಾರಿ ವಶ:
ದಿನಾಂಕ: 18-11-2017 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಹಳ್ಳಿಗದ್ದೆ ಗ್ರಾಮದ ಪಕ್ಕ ಹೇಮಾವತಿ ಉಪ-ನದಿಯಲ್ಲಿ ಟಿಪ್ಪರ್ ಲಾರಿಗೆ ಮರಳು
ತುಂಬುತ್ತಿದ್ದಾರೆಂದು ಶ್ರೀ ದೊಡ್ಡೇಗೌಡ, ಪಿಐ, ಡಿಸಿಐಬಿ ಘಟಕ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಟಿಪ್ಪರ್
ಲಾರಿಗೆ ಮರಳು ತುಂಬುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರೂಪೇಶ್ ಬಿನ್ ಗೌಡೇಗೌಡ, 30 ವರ್ಷ, ಕುಪ್ಪಳ್ಳಿ ಗ್ರಾಮ, ಯಸಳೂರು ಹೋಬಳಿ, ಸಕಲೇಶಪುರ ತಾಲ್ಲೂಕು 2) ಜೀವನ್ ಬಿನ್ ಕೃಷ್ಣೇಗೌಡ,
22 ವರ್ಷ, ದೊಡ್ಡಕುಂದೂರು ಗ್ರಾಮ, ಯಸಳೂರು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ
ಮಾಡಿಕೊಂಡು ಟಿಪ್ಪರ್ ಲಾರಿ ಸಮೇತ ಮರಳನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹೆಂಗಸು ಕಾಣೆ
ದಿನಾಂಕ: 15-11-2017 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಆದರ್ಶನಗರದ ವಾಸಿ
ಶ್ರೀಮತಿ ಉಷಾ, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ
ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಉಷಾಳ ಪತಿ ಶ್ರೀ
ಚಂದನ್ಕುಮಾರ್, ರವರು ದಿನಾಂಕ: 18-11-207 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಉಷಾ ಕೋಂ ಚಂದನ್ಕುಮಾರ್, 5'2' ಅಡಿ ಎತ್ತರ, ಕೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾಳೆ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಪಂಚಾಬಿ ಚೂಡಿದಾರ
ಧರಿಸಿರುತ್ತಾಳೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.
ಅಪರಿಚಿತ ವ್ಯಕ್ತಿಯ ಶವ ಪತ್ತೆ
ದಿನಾಂಕ: 18-11-2017 ರಂದು ರಾತ್ರಿ 9-30 ಗಂಟೆಯ ಸಮಯದಲ್ಲಿ ಶ್ರೀ ಮನುಕುಮಾರ್, ಪಿಸಿ-508 ಮತ್ತು ಶ್ರೀ ಸೋಮಶೇಖರ್, ಪಿಸಿ-375, ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರುಗಳು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ
ಸಾರ್ವಜನಿಕರು ಚನ್ನರಾಯಪಟ್ಟಣ-ತಿಪಟೂರು ರಸ್ತೆಯ ಕಲ್ಕೆರೆ ಕ್ರಾಸ್ ಬಳಿ ಯಾರೋ ಒಬ್ಬ ವ್ಯಕ್ತಿಯು
ಬಿದ್ದಿರುತ್ತಾನೆಂದು ತಿಳಿಸಿದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 30-35 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ಆತನ ಕೈ,ಕಾಲು ಮುಖ ಮತ್ತು ಸೊಂಟಕ್ಕೆ ರಕ್ತಗಾಯವಾಗಿದ್ದು, ತಕ್ಷಣ ಆಂಬ್ಯೂಲೆನ್ಸ್ನಲ್ಲಿ ಚನ್ನರಾಯಪಟ್ಟಣ ಸಕರ್ಾರಿ
ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಮೃತಪಟ್ಟಿರುವುದಾಗಿ ತಿಳಿಸಿದ
ಮೇರೆಗೆ ಶ್ರೀ ಬಿ.ಆರ್. ಮನು, ಪಿಸಿ-508,
ರವರು ನೀಡಿದ ದೂರಿನ
ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಅಪರಿಚಿತ
ವ್ಯಕ್ತಿಯ ಚಹರೆ: ಸುಮಾರು 30-35 ವರ್ಷ,
5'5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕೆಂಪು ಬಣ್ಣದ ಹಾಗೂ ನೀಲಿ & ಕೆಂಪು ಮಿಶ್ರಿತ ಎರಡು ಟೀ ಶಟರ್್, ನೀಲಿ ಬಣ್ಣದ ಬಿಳಿ ಹೂಗಳಿರುವ ನೈಟ್ ಪ್ಯಾಂಟ್
ಧರಿಸಿರುತ್ತಾರೆ. ಗಂಟಲು ಹತ್ತಿರ ಹಳೆಗಾಯ ಗುರುತು ಇರುತ್ತೆ. ಈ ವ್ಯಕ್ತಿಯ ಬಗ್ಗೆ ಹೆಚ್ಚಿನ
ಮಾಹಿತಿ ಪಡೆಯಲು 08176-233033,
08176-252237 ಕ್ಕೆ ಸಂಪರ್ಕಿಸುವುದು.
No comments:
Post a Comment